ಆ್ಯಪ್ನಗರ

2 ವರ್ಷದ ಮಗುವಿನ ಜೀವ ಉಳಿಸಿದ ಮತ್ತೊಂದು 2 ವರ್ಷದ ಮಗು!

ಬಾಲಕನ ಜೀವ ಉಳಿಸಲು ಹೃದಯ ಕಸಿ ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ಹೇಳಿದ್ದರು. ಈ ಹಿನ್ನೆಲೆ, ಫೆಬ್ರವರಿ 10ರಂದು ಮೆದುಳು ಡ್ಯಾಮೇಜ್‌ಗೊಳಗಾಗಿದ್ದ 2 ವರ್ಷದ ಬಾಲಕನ ಹೃದಯ ಸೇರಿ ಅಂಗಾಂಗಗಳನ್ನು ಆತನ ಕುಟುಂಬಸ್ಥರು ದಾನ ಮಾಡಿದ್ದರು. ಇದರಿಂದ 4 ಮಕ್ಕಳು ಸೇರಿ 6 ಜನರ ಜೀವವನ್ನು ಆ ಪುಟ್ಟ ಬಾಲಕ ಉಳಿಸಿದಂತಾಗಿದೆ

Times Now 26 Apr 2019, 12:47 pm
ಚೆನ್ನೈ: ತಮಿಳುನಾಡಿನ ಚೆನ್ನೈನ ಫೋರ್ಟಿಸ್ ಮಲಬಾರ್ ಆಸ್ಪತ್ರೆ ವೈದ್ಯರು ಪವಾಡ ಎನಿಸುವ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಮೂಲಕ ತಮಿಳುನಾಡಿನ ವಿಲ್ಲುಪುರಂ ಮೂಲದ 2 ವರ್ಷದ ಬಾಲಕನ ಜೀವವನ್ನು ಉಳಿಸಿದ್ದಾರೆ. ಇನ್ನು, ಈ ಪುಟ್ಟ ಬಾಲಕನ ಜೀವ ಉಳಿಸಲು ಮತ್ತೊಬ್ಬ 2 ವರ್ಷದ ಬಾಲಕ ನೆರವಾಗಿರುವುದು ವಿಶೇಷ.
Vijaya Karnataka Web heart 1


ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾದ ಬಾಲಕ ಡೈಲೇಟೆಡ್ ಕಾರ್ಡಿಯೋಮೈಯೋಪಥಿ ಜತೆಗೆ ಗಂಭೀರ ಸ್ವರೂಪದ ಎಲ್‌ವಿ ಡಿಸ್ಫಂಕ್ಷನ್‌ನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಆಪರೇಷನ್‌ಗೂ ಮುನ್ನ ಐಸಿಯು ಹಾಗೂ ಸತತವಾಗಿ ಔಷಧಿಗಳನ್ನು ನೀಡಿ ಚಿಕಿತ್ಸೆ ನೀಡುತ್ತಿದ್ದರೂ ಆತ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.

ಈ ಹಿನ್ನೆಲೆ ಬಾಲಕನ ಜೀವ ಉಳಿಸಲು ಹೃದಯ ಕಸಿ ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ಹೇಳಿದ್ದರು. ಈ ಹಿನ್ನೆಲೆ ಫೆಬ್ರವರಿ 10ರಂದು ಮೆದುಳು ಡ್ಯಾಮೇಜ್‌ಗೊಳಗಾಗಿದ್ದ 2 ವರ್ಷದ ಬಾಲಕನ ಹೃದಯ ಸೇರಿ ಅಂಗಾಂಗಗಳನ್ನು ಆತನ ಕುಟುಂಬಸ್ಥರು ದಾನ ಮಾಡಿದ್ದರು. ಇದರಿಂದ 4 ಮಕ್ಕಳು ಸೇರಿ 6 ಜನರ ಜೀವವನ್ನು ಆ ಪುಟ್ಟ ಬಾಲಕ ಉಳಿಸಿದಂತಾಗಿದೆ.

ಹೃದಯ ಪಡೆದುಕೊಳ್ಳಲು ಫೋರ್ಟಿಸ್ ಮಲಬಾರ್ ಆಸ್ಪತ್ರೆಯ ವೈದ್ಯರ ತಂಡ ಮುಂಬೈಗೆ ಬಂದು ಬಳಿಕ ಚೆನ್ನೈಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ನಂತರ, ಡಾ. ಕೆ.ಆರ್‌.ಬಾಲಕೃಷ್ಣನ್ ಹಾಗೂ ಡಾ. ಸುರೇಶ್‌ ರಾವ್ ಕೆ.ಜಿ. ನೇತೃತ್ವದಲ್ಲಿ 2 ವರ್ಷದ ಬಾಲಕನ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಡಾ. ಬಾಲಕೃಷ್ಣನ್, ''ಈ ಶಸ್ತ್ರಚಿಕಿತ್ಸೆ ಬಹಳ ಸವಾಲಿನಿಂದ ಕೂಡಿತ್ತು. ಯಾಕೆಂದರೆ 2 ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಈ ಹಿನ್ನೆಲೆ ಎಲ್ಲಾ ಸವಾಲುಗಳನ್ನು ಸಂವೇದನೆಯಿಂದ ಸಮತೋಲನಗೊಳಿಸಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನು, ಈ ಶಸ್ತ್ರಚಿಕಿತ್ಸೆ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹೃದಯ ರೋಗಿಗಳಿಗೆ ಒಂದು ಮೈಲಿಗಲ್ಲು'' ಎಂದು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ