ಆ್ಯಪ್ನಗರ

ಭಗವದ್ಗೀತೆಯಿಂದ ಮಧುಮೇಹ ಶಮನ: ಸಂಶೋಧನೆಯಲ್ಲಿ ಬಹಿರಂಗ

ಮಧುಮೇಹವನ್ನು ಶಮನಗೊಳಿಸಲು ನಗರದ ಓಸ್ಮಾನಿಯಾ ಜನರಲ್ ಆಸ್ಪತ್ರೆಯ ವೈದ್ಯರು ಹಾಗೂ ಸಂಶೋಧಕರ ತಂಡ ಹೊಸ ವಿಧಾನವನ್ನು ಕಂಡುಹಿಡಿದಿದೆ. ಭಗವದ್ಗೀತೆಯ ಆಧ್ಯಾತ್ಮಿಕ ಮಾರ್ಗದ ಮೂಲಕ ಡಯಾಬಿಟಿಸ್ ವಾಸಿ ಮಾಡಬಹುದು ಎಂದು ಪತ್ತೆಹಚ್ಚಿದ್ದಾರೆ.

TIMESOFINDIA.COM 31 Aug 2018, 3:38 pm
[This story originally published in Times Of India on Aug 31, 2018]
Vijaya Karnataka Web diabetes

ಹೈದರಾಬಾದ್:
ಮಧುಮೇಹವನ್ನು ಶಮನಗೊಳಿಸಲು ನಗರದ ಓಸ್ಮಾನಿಯಾ ಜನರಲ್ ಆಸ್ಪತ್ರೆಯ ವೈದ್ಯರು ಹಾಗೂ ಸಂಶೋಧಕರ ತಂಡ ಹೊಸ ವಿಧಾನವನ್ನು ಕಂಡುಹಿಡಿದಿದೆ. ಭಗವದ್ಗೀತೆಯ ಆಧ್ಯಾತ್ಮಿಕ ಮಾರ್ಗದ ಮೂಲಕ ಡಯಾಬಿಟಿಸ್ ವಾಸಿ ಮಾಡಬಹುದು ಎಂದು ಪತ್ತೆಹಚ್ಚಿದ್ದಾರೆ.

ಅರ್ಜುನ ಹಾಗೂ ಕೃಷ್ಣನ ನಡುವೆ ನಡೆದಿರುವ ಸಂಭಾಷಣೆಯಾದ ಭಗವದ್ಗೀತೆಯಿಂದ ಅನಾರೋಗ್ಯವನ್ನು ನಿಭಾಯಿಸಬಹುದು. ಗೀತೆಯಲ್ಲಿರುವ ಶ್ಲೋಕಗಳು ಜೀವನದ ಅನೇಕ ಘಟನೆಗಳ ಬಗ್ಗೆ ತಿಳಿಸಿವೆ. ಅದರಿಂದ ಮಧುಮೇಹದಂತಹ ದೀರ್ಘಕಾಲದ ರೋಗಗಳನ್ನು ವಾಸಿ ಮಾಡಬಹುದೆಂದು ಸಂಶೋಧಕರು ತಿಳಿಸಿದ್ದಾರೆ.

ಋಣಾತ್ಮಕ ಸಂದರ್ಭಗಳ ಬಗ್ಗೆ ತಿಳಿಸಿಕೊಡುವ ಭಗವದ್ಗೀತೆ, ಅದನ್ನು ಸಕಾರಾತ್ಮಕವಾಗಿ ನಿಭಾಯಿಸುವ ಬಗ್ಗೆಯೂ ಹೇಳುತ್ತದೆ. ಕೃಷ್ಣ ಅರ್ಜುನನಿಗೆ ಸಕಾರಾತ್ಮಕ ಅಂಶಗಳನ್ನು ಹೇಳಿಕೊಡುತ್ತಾನೆ. ಅದನ್ನು ಅರ್ಜುನ ಅಳವಡಿಸಿಕೊಳ್ಳುತ್ತಾನೆ. ಅದೇ ರೀತಿ ಮಧುಮೇಹ ನಮ್ಮ ಜೀವನಶೈಲಿಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಅದನ್ನು ವಾಸಿಮಾಡಲು ತಮ್ಮ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಡಯಟ್ ಹಾಗೂ ವ್ಯಾಯಾಮದಂತಹ ಚಟುವಟಿಕೆಗಳನ್ನು ಮಾಡಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಇಂಡಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿ ಹಾಗೂ ಮೆಟಾಬಲಿಸಂ ಪತ್ರಿಕೆಯಲ್ಲಿ ಈ ವರದಿಯನ್ನು ಪ್ರಕಟಿಸಿದೆ. ಇನ್ನು, ದೇಶದೊಳಗೆ ಹಾಗೂ ದೇಶದೊರಗಿನ ವೈದ್ಯರು ಹಾಗೂ ಸಂಶೋಧಕರನ್ನು ಸಹ ವರದಿ ತಯಾರಿಸಲು ಬಳಸಿಕೊಳ್ಳಲಾಗಿತ್ತು. ಬಾಂಗ್ಲಾದೇಶ ರಾಜಧಾನಿ ಢಾಕಾ ಮೆಡಿಕಲ್ ಕಾಲೇಜು ಹಾಗೂ ಮಿಟ್‌ಫೋರ್ಡ್ ಆಸ್ಪತ್ರೆಯ ವೈದ್ಯರು ಹಾಗೂ ಪಾಕಿಸ್ತಾನದ ಕರಾಚಿಯ ಆಗಾ ಖಾನ್‌ ವಿಶ್ವವಿದ್ಯಾಲಯದ ಆಸ್ಪತ್ರೆಯ ವಿದೇಶಿ ಪರಿಣಿತರನ್ನು ಸಹ ನೆರವು ಪಡೆಯಲಾಗಿದೆ.

ಭಗವದ್ಗೀತೆಯಲ್ಲಿರುವ 700ಕ್ಕೂ ಅಧಿಕ ಶ್ಲೋಕಗಳು ಜೀವನದ ಪ್ರತಿಯೊಂದು ವಿಚಾರದ ಬಗ್ಗೆಯೂ ಒಳನೋಟ ಬೀರುತ್ತದೆ. ಇದು ಸಾರ್ವತ್ರಿಕವಾಗಿ ಸೂಕ್ತವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಡಯಾಬಿಟಿಸ್‌ಗೊಳಗಾಗಿರುವ ರೋಗಿ, ತನ್ನ ಜೀವನದ ಇಷ್ಟವಾದ ವಸ್ತುಗಳನ್ನು ಬಿಡಬೇಕಾಗುತ್ತೆಂದು ದು:ಖಕ್ಕೊಳಗಾಗಿರಬಹುದು. ಹೀಗಾಗಿ, ಅವರನ್ನು ವ್ಯಾಯಾಮ, ಜೀವನಶೈಲಿ ಬದಲಾವಣೆ ಹಾಗೂ ವೈದ್ಯಕೀಯ ಸಲಹೆಯನ್ನು ಪಾಲಿಸಬೇಕಾಗಿದೆ. ಜತೆಗೆ, ರಕ್ತದ ಗ್ಲೂಕೋಸ್ ಪ್ರಮಾಣ ಹಾಗೂ ಇನ್ಸುಲಿನ್ ಪ್ರಮಾಣದ ಬಗ್ಗೆ ಹಲವರಲ್ಲಿ ಶಿಸ್ತು ಇರುವುದಿಲ್ಲ. ಇಂತಹ ವಿಚಾರಗಳಲ್ಲಿ ಭಗವದ್ಗೀತೆಯ ಅವಶ್ಯಕತೆ ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ