ಆ್ಯಪ್ನಗರ

ವೈದ್ಯರು ಇವನ ಹೊಟ್ಟೆ ಬಗೆದಾಗ ಸಿಕ್ಕಿದ್ದು ಏನೆಲ್ಲಾ ನೋಡಿ!

ಉದಯ್‌ಪುರದ ಸರಕಾರಿ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥನೋರ್ವನ ಹೊಟ್ಟೆಯಲ್ಲಿ 80 ಬಗೆಯ ವಸ್ತುಗಳನ್ನು ಹೊರ ತೆಗೆದಿದ್ದಾರೆ. ನಾಣ್ಯಗಳು, ಕೀ, ಸ್ಕ್ರ್ಯೂ ಡ್ರೈವರ್‌ ಇತ್ಯಾದಿ ವಸ್ತುಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ. ಒಟ್ದಿಟಾರೆ 800 ಗ್ರಾಂನಷ್ಟು ವಸ್ತುಗಳಿದ್ದವು.

Times Now 18 Jun 2019, 3:49 pm
ಉದಯ್‌ಪುರ: ಹೊಟ್ಟೆಯಲ್ಲಿ ಕಲ್ಲು, ಅಥವಾ ವದ್ಯರ ಅಜಾಗರುಕತೆ ವೇಳೆ ಶಸ್ತ್ರಚಿಕಿತ್ಸೆ ಉಪಕರಣ, ಗಡಿಯಾರ ಇತ್ಯಾದಿಗಳು ಸಿಕ್ಕಿರುವಂತಹ ಘಟನೆಗಳನ್ನು ಕೇಳಿದ್ದೇವೆಯೇ!
Vijaya Karnataka Web doctirs


ಉದಯ್‌ಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಲೋಕಕ್ಕೆ ಅಚ್ಚರಿ ಎಂಬಂತೆ ಮಾನಸಿಕ ಅಸ್ವಸ್ಥನೋರ್ವನ ಹೊಟ್ಟೆಯಲ್ಲಿ 80 ಬಗೆಯ ವಸ್ತುಗಳನ್ನು ಹೊರ ತೆಗೆದಿದ್ದಾರೆ. ನಾಣ್ಯಗಳು, ಕೀ, ಸ್ಕ್ರ್ಯೂ ಡ್ರೈವರ್‌ ಇತ್ಯಾದಿ ವಸ್ತುಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

ಅತೀವ ಹೊಟ್ಟೆ ನೋವಿನ ಕಾರಣ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಪರೀಕ್ಷೆ ನಡೆಸಿದ ವೇಳೆ ಎಲ್ಲರಿಗೂ ಅಚ್ಚರಿಯಾಗಿತ್ತು. ಎಕ್ಸ್‌ರೇ ಮಾಡಿದ ವೇಳೆ ಕೆಲ ವಸ್ತುಗಳು ಹೊಟ್ಟೆಯೊಳಗಿರುವುದು ಕಂಡು ಬಂದಿತ್ತು ಎಂದು ಡಾ. ಡಿಕೆ ಶರ್ಮ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ಎಕ್ಸ್‌ರೇ ನಡೆಸಿದೊಡನೆಯೇ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಿಂದ ಸುಮಾರು 800 ಗ್ರಾಂನಷ್ಟು ಇದ್ದ ಇತರೆ ವಸ್ತುಗಳನ್ನು ಹೊರತೆಗೆದಿದ್ದಾರೆ.

ಮಾನಸಿಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿ ಏನೇ ಸಿಕ್ಕಿದರೂ ತಿನ್ನುತ್ತಿದ್ದ. ಕೆಲವು ದಿನದಿಂದ ಹೊಟ್ಟೆ ನೋವಿನ ಬಗ್ಗೆ ಮನೆಯಲ್ಲಿ ಹೇಳಿದ್ದ ಕಾರಣ, ಆತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಸದ್ಯ ಪ್ರಾಣಾಪಾಯದಿಂದ ರೋಗಿ ಪಾರಾಗಿದ್ದಾನೆ ಎಂದು ಡಾ. ಶರ್ಮ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ

35 ವರ್ಷ ಮಾನಸಿಕ ಅಸ್ವಸ್ಥನೋರ್ವನ ಹೊಟ್ಟೆಯಿಂದ ಚೂರಿ, 8 ಚಮಚ, ಸ್ಕ್ರ್ಯೂ ಡ್ರೈವರ್‌, ಟೂತ್‌ ಬ್ರಶ್‌ಗಳನ್ನು ಹೊರತೆಗೆಯಲಾಗಿತ್ತು.
ಈತನೂ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿ, ವಸ್ತುಗಳನ್ನು ಹೊರ ತೆಗೆಯಲಾಗಿತ್ತು. ಚೂರಿ ಎಲ್ಲ ತಿಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿ ಕಾಡತೊಡಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ