ಕೋಲ್ಕತ್ತಾ: ಇದು ಡಕಾಯಿತನೊಬ್ಬ ಸಾಧುವಾಗಿ ಪರಿವರ್ತನೆಯಾದ ಕತೆಯಿದು. ಕುಲ್ತಳ್ಳಿ ಗ್ರಾಮದ ಗೋಕುಲ್ ನಾಸ್ಕರ್ ಎಂಬ ಹೆಸರು ಕೇಳಿದರೇ ಜನರು ಬೆಚ್ಚಿ ಬೀಳುತ್ತಿದ್ದರು.
ಹೊಡಿ, ಬಡಿ, ಕೊಲ್ಲು, ದೋಚು ಎಂಬ ಪದಗಳೇ ಬಳಸುತ್ತಿದ್ದ ವ್ಯಕ್ತಿ ಈಗ ತನ್ನೆಲ್ಲಾ ಅಕ್ರಮ ಚಟುವಟಿಕೆಗಳನ್ನು ಬಿಟ್ಟು ಇದೀಗ ಮುಂದಿನ ತನ್ನ ಜೀವನವನ್ನು ದೇವರ ನಾಮ ಜಪಿಸಿ ಕಳೆಯಲು ತೀರ್ಮಾನಿಸಿದ್ದಾರೆ.
ತಂದೆ ತೀರಿ ಹೋದ ಬಳಿಕ ದೊಡ್ಡ ಕುಟುಂಬದ ನಿರ್ವಹಣೆ 18ರ ಹರಯದ ಗೋಕುಲ್ ಹೆಗಲಿಗೆ ಬಿತ್ತು. 11 ಸಹೋದರ-ಸಹೋದರಿಯರು ಇರುವ ಆ ಕುಟುಂಬಕ್ಕೆ ಒಪ್ಪೊತ್ತಿನ ತುತ್ತು ಹಾಕಲು ಪರದಾಡಬೇಕಾಯಿತು. ಅಷ್ಟೂ ಜನರನ್ನು ಸಾಕಲು ಸೂಕ್ತವಾದ ಕೆಲಸ ಸಿಗದಿದ್ದಾಗ ಕಳ್ಳತನ, ಸುಲಿಗೆ ಮಾಡಲಾರಂಭಿಸಿದ.
ನೋಡು- ನೋಡುತ್ತಿದ್ದಂತೆ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ದೊಡ್ಡ ಡಕಾಯಿತನಾದ. ಜನರಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದೋಚಲು ಅವರನ್ನು ಕೊಲ್ಲಲು ಕೂಡ ಹಿಂದೆ-ಮುಂದೆ ನೋಡುತ್ತಿರಲಿಲ್ಲ.
ಈ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿ ಕೆಲ ವರ್ಷ ಜೈಲಿನಲ್ಲಿಟ್ಟರು. ಆತ ಬಂಧನವಾದ ಬಳಿಕ ಒಂದು ಕಳ್ಳತನ ನಡೆಯಿತು. ಈತನ ಗ್ಯಾಂಗ್ನವರು ಮದುವೆ ಮನೆಯಿಂದ ಮೂರುವರೆ ಲಕ್ಷ ಕಳ್ಳತನ ಪಾಡಿ, ನಂತರ ಆ ಕಳ್ಳತನದ ಮಾಸ್ಟರ್ ಮೈಂಡ್ ಗೋಕುಲ್ ಎಂದು ಹೇಳಿದರು. ಆ ಕಳ್ಳತನಕ್ಕೂ ಈತನಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಎರಡು ವರ್ಷ 19 ದಿನಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಯಿತು.
ಜೈಲಿನಿಂದ ಬಿಡುಗಡೆಯಾಗುವಾಗಲೇ ಮತ್ತೆಂದೂ ಇಲ್ಲಿಗೆ ಬರಬಾರದೆಂದು ನಿರ್ಧರಿಸಿ ಶ್ರೀ, ಶ್ರೀ ಅರ್ಚನಾ ಬುರಿಮಾ ಬಳಿ ದೀಕ್ಷೆ ತೆಗೆದುಕೊಂಡರು.
ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಶ್ರೀ ಶ್ರೀ ಠಾಕೂರು ಸತ್ಯಾನಂದ ಕೃಷ್ಣಾ ಕಲಿ ಸೇವಾ ಎಂಬ ಆಶ್ರಮ ಪ್ರಾರಂಭಿಸಿದ್ದಾರೆ. ಈ ಆಶ್ರಮದಲ್ಲಿ 1-5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವಂತೆ ವ್ಯವಸ್ಥೆ ಮಾಡಲಾಗಿದೆ. ತನ್ನ ಮನೆಯಲ್ಲೇ ದೇವರಿಗೊಂದು ಗುಡಿ ಕಟ್ಟಿ ಪೂಜೆಯಲ್ಲಿ ನಿರತರಾಗಿದ್ದಾರೆ.
ಹೊಡಿ, ಬಡಿ, ಕೊಲ್ಲು, ದೋಚು ಎಂಬ ಪದಗಳೇ ಬಳಸುತ್ತಿದ್ದ ವ್ಯಕ್ತಿ ಈಗ ತನ್ನೆಲ್ಲಾ ಅಕ್ರಮ ಚಟುವಟಿಕೆಗಳನ್ನು ಬಿಟ್ಟು ಇದೀಗ ಮುಂದಿನ ತನ್ನ ಜೀವನವನ್ನು ದೇವರ ನಾಮ ಜಪಿಸಿ ಕಳೆಯಲು ತೀರ್ಮಾನಿಸಿದ್ದಾರೆ.
ತಂದೆ ತೀರಿ ಹೋದ ಬಳಿಕ ದೊಡ್ಡ ಕುಟುಂಬದ ನಿರ್ವಹಣೆ 18ರ ಹರಯದ ಗೋಕುಲ್ ಹೆಗಲಿಗೆ ಬಿತ್ತು. 11 ಸಹೋದರ-ಸಹೋದರಿಯರು ಇರುವ ಆ ಕುಟುಂಬಕ್ಕೆ ಒಪ್ಪೊತ್ತಿನ ತುತ್ತು ಹಾಕಲು ಪರದಾಡಬೇಕಾಯಿತು. ಅಷ್ಟೂ ಜನರನ್ನು ಸಾಕಲು ಸೂಕ್ತವಾದ ಕೆಲಸ ಸಿಗದಿದ್ದಾಗ ಕಳ್ಳತನ, ಸುಲಿಗೆ ಮಾಡಲಾರಂಭಿಸಿದ.
ನೋಡು- ನೋಡುತ್ತಿದ್ದಂತೆ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ದೊಡ್ಡ ಡಕಾಯಿತನಾದ. ಜನರಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದೋಚಲು ಅವರನ್ನು ಕೊಲ್ಲಲು ಕೂಡ ಹಿಂದೆ-ಮುಂದೆ ನೋಡುತ್ತಿರಲಿಲ್ಲ.
ಈ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿ ಕೆಲ ವರ್ಷ ಜೈಲಿನಲ್ಲಿಟ್ಟರು. ಆತ ಬಂಧನವಾದ ಬಳಿಕ ಒಂದು ಕಳ್ಳತನ ನಡೆಯಿತು. ಈತನ ಗ್ಯಾಂಗ್ನವರು ಮದುವೆ ಮನೆಯಿಂದ ಮೂರುವರೆ ಲಕ್ಷ ಕಳ್ಳತನ ಪಾಡಿ, ನಂತರ ಆ ಕಳ್ಳತನದ ಮಾಸ್ಟರ್ ಮೈಂಡ್ ಗೋಕುಲ್ ಎಂದು ಹೇಳಿದರು. ಆ ಕಳ್ಳತನಕ್ಕೂ ಈತನಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಎರಡು ವರ್ಷ 19 ದಿನಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಯಿತು.
ಜೈಲಿನಿಂದ ಬಿಡುಗಡೆಯಾಗುವಾಗಲೇ ಮತ್ತೆಂದೂ ಇಲ್ಲಿಗೆ ಬರಬಾರದೆಂದು ನಿರ್ಧರಿಸಿ ಶ್ರೀ, ಶ್ರೀ ಅರ್ಚನಾ ಬುರಿಮಾ ಬಳಿ ದೀಕ್ಷೆ ತೆಗೆದುಕೊಂಡರು.
ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಶ್ರೀ ಶ್ರೀ ಠಾಕೂರು ಸತ್ಯಾನಂದ ಕೃಷ್ಣಾ ಕಲಿ ಸೇವಾ ಎಂಬ ಆಶ್ರಮ ಪ್ರಾರಂಭಿಸಿದ್ದಾರೆ. ಈ ಆಶ್ರಮದಲ್ಲಿ 1-5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವಂತೆ ವ್ಯವಸ್ಥೆ ಮಾಡಲಾಗಿದೆ. ತನ್ನ ಮನೆಯಲ್ಲೇ ದೇವರಿಗೊಂದು ಗುಡಿ ಕಟ್ಟಿ ಪೂಜೆಯಲ್ಲಿ ನಿರತರಾಗಿದ್ದಾರೆ.