ಆ್ಯಪ್ನಗರ

ಅಪ್ಪನೆದೆಯ ಅಪ್ಪುಗೆಯಿಂದ ಜೀವ ಪಡೆದ ಮಗು

ತನ್ನ ನವಜಾತ ಶಿಶುವನ್ನು ಎತ್ತಿಕೊಂಡು ಎದೆಗೆ ಅಪ್ಪಿಕೊಂಡ ವಿನೀತ್‌ಗೆ ತನ್ನ ಎದೆಯ ಬಿಸಿ ಮಗುವಿಗೆ ಜೀವದಾನ ಮಾಡುತ್ತದೆ ಎಂಬುವುದು ಆಗ ಗೊತ್ತಿರಲಿಲ್ಲ.

Navbharat Times 26 Jul 2018, 3:10 pm
ಲಕ್ನೋ: ತನ್ನ ನವಜಾತ ಶಿಶುವನ್ನು ಎತ್ತಿಕೊಂಡು ಎದೆಗೆ ಅಪ್ಪಿಕೊಂಡ ವಿನೀತ್‌ಗೆ ತನ್ನ ಎದೆಯ ಬಿಸಿ ಮಗುವಿಗೆ ಜೀವದಾನ ಮಾಡುತ್ತದೆ ಎಂಬುವುದು ಆಗ ಗೊತ್ತಿರಲಿಲ್ಲ. ಕಡಿಮೆ ತೂಕ ಮಗುವನ್ನು ನೋಡಿ ಮಗುವಿಗೆ ಹೈಪೋಥೆರ್ಮಿಯಾ(hypothermia) ಇದೆ ಎಂದು ಸಂಶಯಿಸಿದ ವೈದ್ಯರು ಆತನಿಗೆ ಮಗುವನ್ನು ಎದೆಯಲ್ಲಿ ಅಪ್ಪಿಕೊಂಡು ಇರಲು ಸಲಹೆ ನೀಡುತ್ತಾರೆ. ಆತ ಮಗುವನ್ನು ಎದೆಯಲ್ಲೇ ಅಪ್ಪಿಕೊಂಡು ಹಲವಾರು ದಿನಗಳನ್ನು ಆಸ್ಪತ್ರೆಯಲ್ಲೇ ಕಳೆಯುತ್ತಾರೆ. ಮಗುವಿನ ಆರೋಗ್ಯದಲ್ಲಿ ನಿಧಾನಕ್ಕೆ ಪ್ರಗತಿ ಕಾಣುತ್ತದೆ.
Vijaya Karnataka Web baby cangero care


ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಹಸೀನ್‌ ಎಂಬವರು ಕೆಲ ದಿನಗಳವರೆಗೆ ಮಗುವನ್ನು ಎದೆಯಲ್ಲಿ ಅಪ್ಪಿಕೊಂಡು ಮಗುವಿಗೆ ಬದುಕು ನೀಡುತ್ತಾರೆ. ಈ 'ಥೆರಪಿಗೆ ಕಾಂಗೆರೋ ಮದರ್‌ ಕೇರ್‌' ಎಂದು ಕರೆಯಲಾಗುವುದು.

ಅಮೆರಿಕದ ನ್ಯಾಷನಲ್‌ ಲೈಬ್ರರಿ ಆಫ್‌ ಮೆಡಿಸಿನ್ ಮತ್ತು ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್ ಹೆಲ್ತ್ 'ಇಂಥ ಪ್ರಕರಣಗಳಲ್ಲಿ ಮಗುವಿನ ಜೀವ ಉಳಿಯಲು ತಾಯಿಯಷ್ಟೇ ತಂದೆಯ ಪಾತ್ರ ಪ್ರಮುಖವಾದದು' ಎಂದಿದೆ. ಈ ಕಾಂಗೆರೋ ಮದರ ಕೇರ್‌ ಥೆರಪಿ ಮೂಲಕ 50ಕ್ಕೂ ಅಧಿಕ ಅಪ್ಪಂದಿರು ತಮ್ಮ ಮಗುವಿನ ಜೀವ ಉಳಿಸಿಕೊಂಡಿದ್ದಾರೆ.

ಈ ರೀತಿಯ ಚಿಕಿತ್ಸೆಯನ್ನು ನೀಡುವ ಸೌಲಭ್ಯ ಕೆಲವೊಂದು ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ. ಕಾಂಗೆರೋ ಕೇರ್‌ ನೀಡುವ ತಂದೆಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಿರುತ್ತಾರೆ. ಅವರಿಗೆ ಬೋರ್‌ ಆಗದಿರಲಿ ಎಂದು ಲುಡೋ, ಕೇರಂ, ಚೆಸ್‌ ಮುಂತಾದ ಆಟ ಆಡುವ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.

ಏನಿದು ಕಾಂಗೆರೋ ಕೇರ್‌?
* ಕಾಂಗೆರೋ ಕೇರ್‌ನಲ್ಲಿ ಮಗುವನ್ನು ತಾಯಿ ಅಥವಾ ತಂದೆಯ ಎದೆಯಲ್ಲಿ ಮಲಗಿ, ಅವರ ಎದೆಯ ಬೆಚ್ಚಗೆ ಮಗುವಿಗೆ ಸಿಗುವಂತೆ ಮಾಡಲಾಗುವುದು, ಈ ಮೂಲಕ ಮಗುವಿನ ದೇಹದ ಉಷ್ಣತೆಯನ್ನು ಕಾಪಾಡಲಾಗುವುದು.
* ಮೊದಲಿಗೆ ಈ ಚಿಕಿತ್ಸೆಯನ್ನು 1970ರಲ್ಲಿ ಅಮೆರಿಕದ ಆಸ್ಪತ್ರೆಯಲ್ಲಿ ನೀಡಲಾಯಿತು. ಡಾ. ಎಡ್ಗರ್‌ ರೇ ಈ ರೀತಿಯ ಚಿಕಿತ್ಸೆ ನೀಡುವ ಪ್ರಯೋಗ ಮಾಡಿದರು.
* ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಚಿಕಿತ್ಸಾ ವಿಧಾನದಿಂದ ಕಡಿಮೆ ತೂಕದ ಮಕ್ಕಳು ಸಾವನ್ನಪ್ಪುವ ಸಂಖ್ಯೆಯಲ್ಲಿ ಶೇ. 90 ಇಳಿಮುಖವಾಗಿದೆ.
* ಇನ್‌ಕ್ಯೂಬೇಟರ್‌ನಲ್ಲಿ ಉಷ್ಣತೆ ಯಾವಾಗಲೂ ಒಂದೇ ರೀತಿ ಇರುವುದರಿಂದ ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರುವುದು. ಕಾಂಗೆರೋ ಚಿಕಿತ್ಸೆಯಲ್ಲಿ ಮಗುವಿನ ಆರೋಗ್ಯ ಸುಧಾರಣೆ ಬೇಗನೆ ಆಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ