ಆ್ಯಪ್ನಗರ

ವಿಂಗ್ ಕಮಾಂಡರ್‌ ಅಭಿನಂದನ್ ನಾಳೆ ಬಿಡುಗಡೆ: ಟ್ವಿಟರ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ ನೋಡಿ...

ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಘೋಷಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಮ್ರಾನ್‌ ಖಾನ್‌ ನೀಡಿದ ಹೇಳಿಕೆಗೆ ಟ್ರೋಲ್ ಕೂಡ ಆಗುತ್ತಿದೆ.

Times Now 28 Feb 2019, 7:06 pm
ಹೊಸದಿಲ್ಲಿ: ವಿಂಗ್ ಕಮಾಂಡರ್ ಅಭಿನಂದನ್‌ ಅವರನ್ನು ಶಾಂತಿಯ ಸೂಚಕವಾಗಿ ನಾಳೆ ( ಮಾರ್ಚ್‌ 1, 2019) ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಪಾಕಿಸ್ತಾನದ ಸಂಸತ್ತಿನಲ್ಲಿ ಘೋಷಿಸಿದ್ದಾರೆ. ನಮ್ಮ ಸೆರೆಯಲ್ಲಿರುವ ಭಾರತದ ಪೈಲಟ್‌ ಅನ್ನು ಬಿಡುಗಡೆ ಮಾಡುವುದಾಗಿ ಪಾಕ್‌ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಈ ಹೇಳಿದ್ದಾರೆ.
Vijaya Karnataka Web abhinandan twitter


ಅಲ್ಲದೆ, ಭಾರತ ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಬೇಡ ಎಂದ ಪಾಕ್ ಪ್ರಧಾನಿ, ಎರಡೂ ದೇಶಗಳು ಯುದ್ಧದಲ್ಲಿ ಸಂಭವಿಸುವ ತಪ್ಪು ಲೆಕ್ಕಾಚಾರದ ಬಗ್ಗೆ ಜಾಗರೂಕರಾಗಿರಬೇಕು ಎಂದೂ ಹೇಳಿದರು. ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ಭಾರತ - ಪಾಕಿಸ್ತಾನ ರಾಷ್ಟ್ರಗಳು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದ್ದಾರೆ.

ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನ್ ಬಿಡುಗಡೆಯ ಸುದ್ದಿ ಹಬ್ಬುತ್ತಿದ್ದಂತೆ ಟ್ವಿಟರ್‌ನಲ್ಲಿ ಇದಕ್ಕೆ ಅನೇಕ ಪ್ರತಿಕ್ರಿಯೆಗಳು ಕಂಡುಬರುತ್ತಿವೆ.
ಈ ಬಗ್ಗೆ ಕೆಲ ಟ್ವೀಟ್‌ಗಳನ್ನು ಇಲ್ಲಿ ನೋಡೋಣ.








ಟ್ವಿಟರ್‌ನಲ್ಲಿ ಸದ್ಯ #WelcomeBackAbhinandan ( ವೆಲ್‌ಕಮ್‌ ಬ್ಯಾಕ್ ಅಭಿನಂದನ್ ) ಎಂಬ ಹ್ಯಾಶ್‌ಟ್ಯಾಗ್‌ ನಂಬರ್ 1 ಟ್ರೆಂಡಿಂಗ್‌ನಲ್ಲಿದ್ದು, #AbhinandanMyHero (ಅಭಿನಂದನ್‌ಮೈಹೀರೋ) ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

ಇದಕ್ಕೂ ಮುನ್ನ ಪಾಕ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ನಮ್ಮ ದೇಶವನ್ನು ಅಸ್ಥಿರಗೊಳಿಸಲು ಶತ್ರುಗಳು ನಡೆಸುತ್ತಿರುವ ಸಂಚಿನ ವಿರುದ್ಧ ಭಾರತ ಒಗ್ಗಟ್ಟಾಗಿರಬೇಕು ಎಂದಿದ್ದರು.

ಬಿಜೆಪಿ ನಾಯಕರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದ ಪ್ರಧಾನಿ ಮೋದಿ, ಆ ವೇಳೆ ''ಶತ್ರುಗಳು ಭಯೋತ್ಪಾದಕ ದಾಳಿ ನಡೆಸುವ ಮೂಲಕ ನಮ್ಮನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಬೆಳವಣಿಗೆಯನ್ನು ನಿಲ್ಲಿಸುವುದು ಅವರ ಉದ್ದೇಶ. ಆದರೆ, ಅವರ ಕೆಟ್ಟ ವಿನ್ಯಾಸಗಳನ್ನು ಎದುರಿಸಲು ಇಡೀ ದೇಶದ ಜನತೆಯೇ ಕಲ್ಲು ಬಂಡೆಯಂತೆ ನಿಂತಿದೆ'' ಎಂದು ಸಹ ಮೋದಿ ಗುರುವಾರ ( ಫೆಬ್ರವರಿ 28, 2019) ರಂದು ಹೇಳಿದ್ದರು.

ಭಾರತದ ಗಡಿ ಪ್ರವೇಶಿಸಿದ್ದ ಪಾಕ್‌ನ ಜೆಟ್ ವಿಮಾನವನ್ನು ಭಾರತದ ವಿಮಾನಗಳು ಹೊಡೆದುರುಳಿಸಿದ್ದವು. ಈ ವೇಳೆ ಪಾಕ್ ದಾಳಿಗೆ ಸಿಲುಕಿದ್ದ ಮಿಗ್ 21 ವಿಮಾನವು ಕೆಳಗೆ ಬಿದ್ದಿದ್ದು, ಆ ವೇಳೆ, ಅಲ್ಲಿನ ಸೇನೆ ಅಭಿನಂದನ್‌ರನ್ನು ಬಂಧಿಸಿ, ಫೋಟೋ, ವೀಡಿಯೋ ಹೊಂದಿದ್ದ ದಾಖಲೆಗಳನ್ನೂ ಬಿಡುಗಡೆ ಮಾಡಿತ್ತು.

ಈ ಹಿನ್ನೆಲೆ, ಐಎಎಫ್‌ನ ಗಾಯಗೊಂಡ ಸಿಬ್ಬಂದಿಯನ್ನು ಪಾಕಿಸ್ತಾನ ಕೆಟ್ಟದಾಗಿ ಪ್ರದರ್ಶನ ಮಾಡುತ್ತಿದೆ ಎಂದು ಭಾರತ ಕಟುವಾಗಿ ಆಕ್ಷೇಪಿಸಿದೆ. ಅಲ್ಲದೆ, ಇದು ಅಂತಾರಾಷ್ಟ್ರೀಯ ಮಾನವ ಕಾನೂನಿನ ನಿಯಮಗಳು ಹಾಗೂ ಜಿನೀವಾ ಕನ್ವೆನ್ಶನ್ ಉಲ್ಲಂಘನೆಯಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತರಾಟೆಗೆ ತೆಗೆದುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ