ಆ್ಯಪ್ನಗರ

ದೇಶದ ಹೆಮ್ಮೆಯ ಪುತ್ರ ಅಭಿನಂದನ್‌ 'ಮೀಸೆ' ಈಗ ಹೊಸ ಫ್ಯಾಷನ್ ಟ್ರೆಂಡ್ !

ಅಭಿನಂದನ್‌ ದೇಶಕ್ಕೆ ಮರಳುತ್ತಾರೆ ಎಂಬ ಸುದ್ದಿ ಬರುತ್ತಿದ್ದಂತೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ಜತೆಗೆ, ವಾಯುಪಡೆಯ ವಿಂಗ್ ಕಮಾಂಡರ್ ಸಾಹಸ, ಧೈರ್ಯವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಭಿನಂದನ್ ಮೀಸೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದು, ಇದು ಯುವಕರ ಹೊಸ ಫ್ಯಾಷನ್ ಟ್ರೆಂಡ್ ಎಂದು ಟ್ವೀಟ್‌ಗಳ ಸುರಿಮಳೆಯೇ ಕಂಡುಬರುತ್ತಿದೆ.

Vijaya Karnataka Web 1 Mar 2019, 5:20 pm
ಹೊಸದಿಲ್ಲಿ: ಭಾರತ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ದೇಶಕ್ಕೆ ಮರಳಿದ್ದು, ಅವರಿಗೆ ಅದ್ಧೂರಿ ಸ್ವಾಗತವೂ ದೊರೆತಿದೆ. ಇಡೀ ದೇಶದ ಜನತೆಯೇ ಅವರು ಭಾರತಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಕೇಳಿದಾಗಿನಿಂದಲೂ ಸಂಭ್ರಮಿಸುತ್ತಿದೆ. . ಅಭಿನಂದನ್ ಇಡೀ ದೇಶಕ್ಕೆ ಈಗ ವೀರಪುತ್ರ, ಹೆಮ್ಮಯ ಪುತ್ರವಾಗಿ ಹೊರಹೊಮ್ಮಿದ್ದಾರೆ.
Vijaya Karnataka Web abhinandan moustache


ಇನ್ನು, ವಿಂಗ್ ಕಮಾಂಡರ್ ಅಭಿನಂದನ್‌ರ ಧೈರ್ಯ, ಸಾಹಸವನ್ನು ಭಾರತದ ಜನತೆ ಮೆಚ್ಚಿಕೊಂಡಿದ್ದರು. ಅದೇ ರೀತಿ ಅವರ ಮೀಸೆಯೂ ಹೆಚ್ಚು ಜನರ ಪ್ರೀತಿಗೆ ಕಾರಣವಾಗಿದೆ. ಅಭಿನಂದನ್ ವರ್ಧಮಾನ್ ಮೀಸೆ ಹೊಸ ಫ್ಯಾಷನ್ ಟ್ರೆಂಡ್ ಆಗಲಿದೆ ಎಂದು ಹಲವರು ಟ್ವೀಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವತ: ಪಾಕಿಸ್ತಾನದ ನಟಿ ವೀಣಾ ಮಲಿಕ್ ಸಹ ನಾನು ಇದುವರೆಗೂ ಈ ರೀತಿಯ ಮೀಸೆಯನ್ನು ಎಲ್ಲೂ ನೋಡಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಭಿನಂದನ್‌ರನ್ನು ಪಾಕಿಸ್ತಾನದವರು ವಶಕ್ಕೆ ಪಡೆದಾಗ ತನ್ನ ತವರು ನೆಲ ಪಾಕ್‌ ಪರ ಬ್ಯಾಟ್‌ ಬೀಸಿದ್ದ ಆಕೆ, ಟ್ರೋಲ್‌ಗೊಳಗಾಗಿದ್ದಳು. ವೀಣಾ ಮಲಿಕ್ ಅಭಿನಂದನ್ ಮೀಸೆಯ ಬಗ್ಗೆಯೂ ಕಾಮೆಂಟ್‌ ಮಾಡಿದ್ದು, ಆಕೆಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಭಾರತದ ಯುವಕರಿಗೆ ಈ ಮೀಸೆ ಹೊಸ ಟ್ರೆಂಡ್ ಆಗಲಿದೆ. ದೇಶದ ವೀರಪುತ್ರ ಅಭಿನಂದನ್ ಮೀಸೆ ಟ್ರೆಂಡ್ ಸೆಟ್ಟರ್‌ ಆಗಲಿದ್ದು ಹಲವರು ಈ ರೀತಿ ಮೀಸೆ ಬಿಡಲಿದ್ದಾರೆ ಎಂದೂ ಹಲವರು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್, ಕಮಲ್ ಹಾಸನ್ ಚಿತ್ರಗಳಲ್ಲಿ ಈ ರೀತಿಯ ಮೀಸೆ ಬಿಟ್ಟಿದ್ದರು ಎಂದೂ ಕೆಲವರು ಆ ರೀತಿಯ ಮೀಸೆ ಹೋಲುವ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.


ಜತೆಗೆ, ಯುವತಿಯರು ಸಹ ಈ ಮೀಸೆಯನ್ನು ಮೆಚ್ಚಿಕೊಂಡಿದ್ದು, ಈ ಮೀಸೆ ಚೆನ್ನಾಗಿದೆ. ಇದು ಟ್ರೆಂಡ್ ಆಗಲಿದೆ ಎಂದು ಕೆಲವರು ಟ್ವೀಟ್‌ ಮಾಡಿದರೆ, ಯುವತಿಯೊಬ್ಬಳು ನೀವು ಈ ರೀತಿಯ ಮೀಸೆ ಬಿಟ್ಟರೆ ನನ್ನನ್ನು ಲವ್ ಮಾಡಿ ಎಂದೂ ಟ್ವೀಟ್‌ ಮಾಡಿದ್ದಾಳೆ.

ಫೆಬ್ರವರಿ 27ರಂದು ಪಾಕ್ ವಾಯುಪಡೆ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಬಂದಾಗ ಮಿಗ್‌-21 ಬೈಸನ್ ವಿಮಾನದಲ್ಲಿ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಎಫ್‌-16 ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ಪಾಕ್ ಪಡೆಗಳ ಕೈಗೆ ಅಭಿನಂದನ್ ಸಿಕ್ಕಿಬಿದ್ದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ