ಆ್ಯಪ್ನಗರ

ಪ್ರಯಾಣಿಕರನ್ನು ಕೂಲ್‌ ಆಗಿಡಲು ಆಟೋ ಮೇಲೆ ಗಾರ್ಡನ್ ಸೃಷ್ಟಿ!

ಕೋಲ್ಕತದ ಒಬ್ಬ ಆಟೋ ಚಾಲಕ ಮಾತ್ರ ತಾನು ತಣ್ಣಗಿರಲು ಹಾಗೂ ಪ್ರಯಾಣಿಕರನ್ನು ತಣ್ಣಗೆ ಇರುವಂತೆ ಮಾಡಲು ಹೊಸ ಪ್ಲಾನ್‌ ಮಾಡಿದ್ದಾರೆ. ಬೇಸಿಗೆ ವೇಳೆಯಲ್ಲಿ ತನ್ನ ಆಟೋವನ್ನು ಕೂಲ್‌ ಆಗಿಡಲು, ತನ್ನ ವಾಹನದ ಛಾವಣಿ ಮೇಲೆ ಮಿನಿಯೇಚರ್ ಗಾರ್ಡನ್‌ ಸೃಷ್ಟಿ ಮಾಡಿಕೊಂಡಿದ್ದಾರೆ.

Times Now 3 Apr 2019, 2:38 pm
ಕೋಲ್ಕತ: ನೀವು ಬೇಸಿಗೆ ಗಾಲದಲ್ಲಿ ಪಶ್ಚಿಮ ಬಂಗಾಳದ ಮೆಟ್ರೋಪಾಲಿಟನ್‌ ನಗರವಾದ ಕೋಲ್ಕತಕ್ಕೆ ಭೇಟಿ ನೀಡಿದರೆ ಅಲ್ಲಿನ ಬಿಸಿಯಾದ ಮತ್ತು ಆದ್ರರ್ತೆಯ ವಾತಾವರಣಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರು ಬಿಸಿಲಲ್ಲಿ ಬೆಂದು ಹೋಗುತ್ತಾರೆ. ಕೋಲ್ಕತ ಬೇಸಿಗೆಗಾಲದಲ್ಲಿ ದೇಶದಲ್ಲೇ ಹೆಚ್ಚು ಪರೀಕ್ಷೆಗೊಳಪಡುತ್ತದೆ ಎನ್ನಬಹುದು.
Vijaya Karnataka Web auto garden


ಇದರಿಂದ ಆಟೋವಾವಾಗಳು ಹಾಗೂ ಟ್ಯಾಕ್ಸಿ ಚಾಲಕರು ಶಾಖದ ತೀವ್ರತೆಯನ್ನು ಎದುರಿಸಬೇಕಾಗುತ್ತದೆ. ಆದರೆ, ಕೋಲ್ಕತದ ಒಬ್ಬ ಆಟೋ ಚಾಲಕ ಮಾತ್ರ ತಾನು ತಣ್ಣಗಿರಲು ಹಾಗೂ ಪ್ರಯಾಣಿಕರನ್ನು ತಣ್ಣಗೆ ಇರುವಂತೆ ಮಾಡಲು ಹೊಸ ಪ್ಲಾನ್‌ ಮಾಡಿದ್ದಾರೆ. ಅದು ಕೂಡ ಆರೋಗ್ಯಕರ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ.

ಬೇಸಿಗೆ ವೇಳೆಯಲ್ಲಿ ತನ್ನ ಆಟೋವನ್ನು ಕೂಲ್‌ ಆಗಿಡಲು, ತನ್ನ ವಾಹನದ ಛಾವಣಿ ಮೇಲೆ ಚಿಕ್ಕದಾದ ಉದ್ಯಾನವನ (ಮಿನಿಯೇಚರ್ ಗಾರ್ಡನ್) ಅನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಈ ಸುಂದರವಾದ ಗಾರ್ಡನ್‌ನಲ್ಲಿ ಹುಲ್ಲಿನ ಹೊದಿಕೆ, ಸಣ್ಣ ಮರಗಳು ಮತ್ತು ಹೂ ಬಿಡುವ ಪೊದೆಗಳುಗಳು ಸಹ ಇದ್ದು, ಆಟೋವನ್ನು ದಿನವಿಡೀ ಕೂಲ್‌ ಆಗೇ ಇಡುತ್ತದೆ.

ಈ ಆಟೋ ಚಾಲಕನನ್ನು ಬಿಜಯ್ ಪಾಲ್‌ ಎಂದು ಗುರುತಿಸಲಾಗಿದ್ದು, ಆತನ ಆಟೋದ ಹಿಂದೆ ಮರಗಳನ್ನು ಉಳಿಸಿ ಜೀವಗಳನ್ನು ಉಳಿಸಿ ಎಂಬ ಉತ್ತಮವಾದ ಸಂದೇಶವನ್ನೂ ನೀಡಿದ್ದಾರೆ.

''ಅವನತಿಯ ಹಾದಿ ಹಿಡಿಯುತ್ತಿರುವ ಪರಿಸರಕ್ಕೆ ಕೊಡುಗೆ ನೀಡಲು ಈ ಮಾರ್ಗ ಎಂದು ಪಾಲ್‌ ಮಾಧ್ಯಮದವರೊಂದಿಗೆ ಹೇಳಿದ್ದಾರೆ. ಅಲ್ಲದೆ, ಈ ರೀತಿ ಮೊಬೈಲ್ ಗಾರ್ಡನ್‌ ಅನ್ನು ನಿರ್ವಹಿಸುವುದು ಸುಲಭವಲ್ಲ ಎಂಬುದನ್ನುಆಟೋ ಚಾಲಕ ಒಪ್ಪಿಕೊಳ್ಳುತ್ತಾನೆ. ಜತೆಗೆ, ಆಟೋದ ಮೇಲ್ಛಾವಣಿಯಲ್ಲಿರುವ ಮರಗಳನ್ನು ನಿರ್ವಹಿಸಲು ತಾನು ಕಷ್ಟ ಪಟ್ಟು ದುಡಿದ ಹಣವನ್ನು ಖರ್ಚು ಮಾಡುತ್ತೇನೆ'' ಎಂದು ಆತ ಹೇಳಿಕೊಂಡಿದ್ದಾರೆ.

ಇನ್ನು, ತನ್ನ ದಿನದ ಕೆಲಸ ಮುಗಿದ ಬಳಿಕ ತನ್ನ ಆಟೋದ ಮೇಲಿರುವ ಉದ್ಯಾನವನದಲ್ಲಿನ ಗಿಡಗಳು ಹಾಗೂ ಮರಗಳಿಗೆ ಪಾಲ್‌ ನೀರು ಹಾಕುತ್ತಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ