ಆ್ಯಪ್ನಗರ

ಫುಟ್ಬಾಲ್ ಕ್ರೇಜ್: ಮದುವೆಯನ್ನೇ ಬಿಟ್ಟೋಡಿದ ಭೂಪ

ಬಹುಶಃ ಇಲ್ಲ. ಆದರೆ ಕೇರಳದ ಈ ಯುವಕನ ವಿಷಯದಲ್ಲಿ ಈ ಉತ್ತರ ತಪ್ಪಾಗುತ್ತದೆ. ಕಾಲ್ಚೆಂಡು ಅಥವಾ ಫುಟ್ಬಾಲ್ ಆಟದ ಕ್ರೇಜ್ ಇವನಿಗೆ ಯಾವ ಪರಿಯಲ್ಲಿ ಇತ್ತೆಂದರೆ ಅದಕ್ಕಾಗಿ ಆತ ಮದುವೆಯನ್ನೇ ಬಿಟ್ಟು ಓಡಿದ್ದಾನೆ.

Indiatimes 26 Jan 2019, 12:09 pm
ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇರುತ್ತದೆ. ಕೆಲವರಿಗೆ ಕ್ರಿಕೆಟ್, ಕೆಲವರಿಗೆ ಸಿನಿಮಾ, ಮತ್ತೆ ಕೆಲವರಿಗೆ ಓದುವ ಕ್ರೇಜ್. ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ಯಾವುದಾದರೊಂದರ ಮೇಲೆ ಅವರಿಗೆ ಹುಚ್ಚಿರುತ್ತದೆ. ಅದಕ್ಕಾಗಿ ಊಟ, ತಿಂಡಿ, ನಿದ್ದೆಯನ್ನು ಸಹ ಬಿಡುತ್ತಾರೆ. ಆದರೆ ಮದುವೆಯನ್ನು ಬಿಟ್ಟೋಡುವಂತಹ ಕ್ರೇಜ್ ಯಾರಿಗಾದರೂ ಇರಲು ಸಾಧ್ಯವೇ? ಬಹುಶಃ ಇಲ್ಲ.
Vijaya Karnataka Web football


ಆದರೆ ಕೇರಳದ ಈ ಯುವಕನ ವಿಷಯದಲ್ಲಿ ಈ ಉತ್ತರ ತಪ್ಪಾಗುತ್ತದೆ. ಕಾಲ್ಚೆಂಡು ಅಥವಾ ಫುಟ್ಬಾಲ್ ಆಟದ ಕ್ರೇಜ್ ಇವನಿಗೆ ಯಾವ ಪರಿಯಲ್ಲಿ ಇತ್ತೆಂದರೆ ಅದಕ್ಕಾಗಿ ಆತ ಮದುವೆಯನ್ನೇ ಬಿಟ್ಟು ಓಡಿದ್ದಾನೆ.

ರಿದ್ವಾನ್ ಪ್ರತಿನಿಧಿಸುವ ಫಿಫಾ ಮಂಜೇರಿ ತಂಡ, ರಾಜ್ಯದಲ್ಲಿ ಜನಪ್ರಿಯವಾಗಿರುವ ಮಲಪ್ಪುರಂ 7s ಲೀಗ್‌ನಲ್ಲಿ ಪಾಲ್ಗೊಳ್ಳುತ್ತದೆ. ದುರದೃಷ್ಟವಶಾತ್ ರಿದ್ವಾನ್ ಮದುವೆ ಇದ್ದ ದಿನ ಪಂದ್ಯ ಕೂಡ ಇತ್ತು. ಮದುಮಗನಾಗಿ ಸಿದ್ಧನಾಗುತ್ತಿದ್ದರೂ ರಿದ್ವಾನ್ ಚಿತ್ತ ಮಾತ್ರ ಆಟದ ಮೈದಾನ ಕಡೆಗೆ ಇತ್ತು. ಆಡುವ ತುಡಿತ ಅವನಿಂದ ನಿಯಂತ್ರಿಸಲಾಗಲಿಲ್ಲ. ಹೀಗಾಗಿ 5 ನಿಮಿಷ ಹೊರಗೆ ಹೋಗಿ ಬರುತ್ತೇನೆ ಎಂದು ಭಾವಿ ಪತ್ನಿ ಬಳಿ ಹೇಳಿ ಹೊರಟ ಆತ ನೇರವಾಗಿ ಮೈದಾನದತ್ತ ನಡೆದೇ ಬಿಟ್ಟ.

ಆದರೆ ಆತನನ್ನು ಹಿಂದಕ್ಕೆ ಕರೆ ತರುವಲ್ಲಿ ಸಂಬಂಧಿಕರು ಯಶಸ್ವಿಯಾದರು. ಆತನ ಈ ವರ್ತನೆ ವಧುವಿನ ಕಡೆಯವರಿಗೆ ನಿಜಕ್ಕೂ ಅಸಮಧಾನ ತರಿಸಿದ್ದಂತೂ ಸುಳ್ಳಲ್ಲ. ಆದರೆ ಹರ ಸಾಹಸ ಬಿಟ್ಟು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆತ ಯಶಸ್ವಿಯಾದ.

ಏನೇ ಆಗಲಿ ಆತನ ಪ್ರಥಮ ಪ್ರೀತಿ, ಮೊದಲ ಆದ್ಯತೆ ಕಾಲ್ಚೆಂಡಿನ ಆಟ ಎಂದಾತ ಪ್ರಾಮಾಣಿಕವಾಗಿ ಒಪ್ಪಿಕೊಂಡಂತಾಯಿತು. ಆತನಿಗೆ ತನ್ನದೇ ಮದುವೆಗಿಂತ ಗೆಳೆಯರೊಂದಿಗೆ ಮೈದಾನಕ್ಕಿಳಿಸುವುದೇ ಹೆಚ್ಚು ಆಪ್ತವೆನ್ನಿಸಿದ್ದಂತೂ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ