ಆ್ಯಪ್ನಗರ

ತೇಜಸ್ವಿ ಸೂರ್ಯ ಲೋಕಸಭೆ ಅಭ್ಯರ್ಥಿಯಾಗುತ್ತಿದ್ದಂತೆ ಸೆಲೆಬ್ರಿಟಿಯಾದ 'ಪಾನಿಪುರಿ' ಕುಮಾರ್!

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಹೆಸರು ಕೇಳಿಬರುತ್ತಿದ್ದಂತೆ ಅವರ ಬಗ್ಗೆ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹುಡುಕಾಡಿದ್ದಾರೆ. ಅಲ್ಲದೆ, 28 ವರ್ಷ ವಯಸ್ಸಿನ ತೇಜಸ್ವಿ ಸೂರ್ಯರ ಫೋಟೋಗಳು ವೈರಲ್‌ ಆಗುತ್ತಿದ್ದು, ಅವರು ಪಾನಿಪುರಿ ತಿನ್ನುತ್ತಿದ್ದ ಅಂಗಡಿಯವರೂ ಸಹ ಹೆಸರು ಮಾಡುತ್ತಿದ್ದಾರೆ.

TIMESOFINDIA.COM 27 Mar 2019, 9:11 am
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾದ ತೇಜಸ್ವಿ ಸೂರ್ಯ ಪಾನಿ ಪೂರಿ ಮಾರುವವರನ್ನು ಸೆಲೆಬ್ರಿಟಿ ಮಾಡಿಬಿಟ್ಟಿದ್ದಾರೆ. ಗಿರಿನಗರದಲ್ಲಿರುವ ತೇಜಸ್ವಿ ಸೂರ್ಯ ಮನೆಯ ಬಳಿಯೇ ಇರುವ ಪಾನಿ ಪುರಿ ಮಾರುವ ಕುಮಾರ್ ಎಚ್‌.ಆರ್‌. ಕಳೆದ 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ತನಗೆ ಬಂದಿರುವ ಹೆಸರಿಗೆ ಅವರು ಅಚ್ಚರಿ ಪಟ್ಟಿದ್ದಾರೆ.
Vijaya Karnataka Web tejasvi surya panipuri


''ಗಿರಿನಗರ ಸರ್ಕಲ್‌ನಲ್ಲಿ ಪಾನಿಪುರಿಯನ್ನು ನೀವು ಟ್ರೈ ಮಾಡಲೇಬೇಕು. ಈ ಸರ್ಕಲ್‌ನಲ್ಲಿ ನೀವು ಹಾದು ಹೋದರೆ, ನಿಲ್ಲಿಸಿ ಕನಿಷ್ಠ ಎರಡು ಪ್ಲೇಟ್‌ ತಿನ್ನಿ ಎಂದು ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಘೋಷಣೆಯಾಗುವ ಕೆಲವೇ ಗಂಟೆಗಳ ಮುನ್ನ ಟ್ವೀಟ್‌ ಮಾಡಿದ್ದರು. ಜತೆಗೆ, ತಾವು ಗೆಳೆಯರೊಂದಿಗೆ ಪಾನಿಪುರಿ ತಿನ್ನುತ್ತಿರುವ ಫೋಟೋವನ್ನೂ ಹಾಕಿದ್ದರು. ಆ ಫೋಟೋದಲ್ಲಿ ಪಾನಿ ಪುರಿ ಮಾರುವ ಕುಮಾರ್ ಎಚ್‌.ಆರ್‌ ಸಹ ಕಾಣಿಸಿಕೊಂಡಿದ್ದಾರೆ.

ಆದರೆ, ಟಿಕೆಟ್ ಘೋಷಣೆ ಬೆನ್ನಲ್ಲೇ ತೇಜಸ್ವಿ ಸೂರ್ಯ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪಾನಿಪುರಿ ಮಾರುವ ಕುಮಾರ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳ ಟೈಮ್‌ಲೈನ್‌ ನಲ್ಲೂ ಬರುವಂತೆ ಅಲ್ಲಿ ಪಾನಿಪುರಿ, ಚಾಟ್ಸ್‌ ತಿಂದಿರುವ ಗ್ರಾಹಕರು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಆದರೆ, ಕುಮಾರ್‌ ಎಂದಿನಂತೆ ವ್ಯಾಪಾರ ಮಾಡಿದ್ದು, ತನ್ನ ನೆಚ್ಚಿನ ಗ್ರಾಹಕರಲ್ಲೊಬ್ಬರಾದ ಸೂರ್ಯ ಬಗ್ಗೆ ಮಾಹಿತಿ ನೀಡಿದ್ದಾರೆ. ''ಸೂರ್ಯ ಬಾಲ್ಯದಿಂದಲೂ ಇಲ್ಲಿ ಗ್ರಾಹಕರಾಗಿದ್ದರು. ವಾರಾಂತ್ಯಗಳಲ್ಲಿ ತನ್ನ ಗೆಳೆಯರೊಂದಿಗೆ ಇಲ್ಲಿ ಬರುತ್ತಿದ್ದರು'' ಎಂದು ಹೇಳಿದ್ದಾರೆ.

ಅಲ್ಲದೆ, ಮಾರ್ಚ್25, 2019ರಂದು ಸಹ ಸೂರ್ಯ ತನ್ನ ಗೆಳೆಯರೊಂದಿಗೆ ಭೇಟಿ ನೀಡಿದ್ದರು. ಆದರೆ, ರಾಜಕೀಯದ ಬಗ್ಗೆ ಅವರು ಎಂದಿಗೂ ಮಾತನಾಡುತ್ತಿರಲಿಲ್ಲ. ಅಲ್ಲದೆ, ಅವರು ಲೋಕಸಭೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಸಂಜೆಯಷ್ಟೇ ( ಮಾರ್ಚ್ 26, 2019)ರಂದು ತಿಳಿದುಬಂದಿದೆಯಷ್ಟೇ. ಟ್ವಿಟರ್‌ನಲ್ಲಿ ಅವರು ತನ್ನ ಫೋಟೋ ಹಾಕಿದ ಬಳಿಕ ಹಲವರು ಆ ಫೋಟೋದಲ್ಲಿರುವುದು ತಾನೇನಾ ಎಂದು ಕೇಳಿದ್ದಾರೆ. ಇನ್ನು, ಸೂರ್ಯ ಲೋಕಸಭೆಗೆ ಸ್ಪರ್ಧೆ ಮಾಡುತ್ತಿರುವುದು ಖುಷಿ ತಂದಿದೆ'' ಎಂದು ಅವರು ಹೇಳಿದ್ದಾರೆ.

ನಿತ್ಯ ಸಂಜೆ 5 ಗಂಟೆಗೆ ಅಂಗಡಿ ತೆರೆಯುವ ಕುಮಾರ್, ರಾತ್ರಿ 10ಗಂಟೆಯವರೆಗೆ ಕೆಲಸ ಮಾಡುತ್ತಾರೆ. ದಿನಕ್ಕೆ 200 ಪ್ಲೇಟ್‌ ಪಾನಿಪುರಿಯನ್ನು ವ್ಯಾಪಾರ ಮಾಡುತ್ತಾರೆ. ಇನ್ನು, ತೇಜಸ್ವಿ ಸೂರ್ಯ ಟ್ವೀಟ್ ಒಪ್ಪುವ ಹಲವು ಗ್ರಾಹಕರು, ''ನೀವು ಇಲ್ಲಿ ಒಂದು ಪ್ಲೇಟ್‌ ಕೊಂಡುಕೊಂಡರೆ ಮತ್ತೊಂದು ಪ್ಲೇಟ್‌ ಅನ್ನೂ ತೆಗೆದುಕೊಳ್ಳುತ್ತೀರಿ. ತೇಜಸ್ವಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಕುಮಾರ್‌ರ ಪಾನಿಪುರಿ ಅಂಗಡಿಗೆ ಒಳ್ಳೆ ಹೆಸರು ಬಂದಿರುವುದು ನಮಗೂ ಖುಷಿ'' ಎಂದು ಶ್ರೀಕಾಂತ್ ಎನ್ನುವ ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ