ಆ್ಯಪ್ನಗರ

ಪ್ರಾಣದ ಹಂಗು ತೊರೆದು ಜನರ ಸ್ಥಳಾಂತರ: ಒಡಿಶಾ ಪೊಲೀಸರ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಕೇಂದ್ರಪಾರಾದ ಪೊಲೀಸ್‌ ಠಾಣೆಯೊಂದರ ಲೇಡಿ ಪೊಲೀಸ್‌ ಅಧಿಕಾರಿ ಜನರನ್ನು ರಕ್ಷಿಸಿದ್ದು, ಇದನ್ನು ಒಡಿಶಾ ಪೊಲೀಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್‌ ಮಾಡಿದ್ದರು. ಗಾಡಿ ಓಡಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮಹಿಳೆಯನ್ನು ರಕ್ಷಿಸಿದ್ದ ಫೋಟೋವನ್ನು ಹಾಕಿದ್ದರು.

Times Now 4 May 2019, 5:11 pm
ಪುರಿ: ಫೊನಿ ಚಂಡಮಾರುತ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಒಡಿಶಾ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಗಂಟೆಗೆ 175-185 ಕಿ.ಮೀ. ನಷ್ಟು ವೇಗದಲ್ಲಿ ಗಾಳಿ ಬೀಸುತ್ತಿತ್ತು. ಈ ಹಿನ್ನೆಲೆ ಒಡಿಶಾದ ಹಲವು ಜಿಲ್ಲೆಗಳಿಂದ 10 ಲಕ್ಷಕ್ಕೂ ಅಧಿಕ ಜನತೆಯನ್ನು ಸ್ಥಳಾಂತರ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳ ಜತೆಗೆ ಒಡಿಶಾದ ಸ್ಥಳೀಯ ಪೊಲೀಸರು ತಮ್ಮ ಡ್ಯೂಟಿ ಮಾಡುವಲ್ಲಿ ಹೆಚ್ಚು ಬದ್ಧತೆ ತೋರಿಸಿದರು. ರಾಜ್ಯದಲ್ಲಿ ಹವಾಮಾನ ವಿಪತ್ತು ಸಂಭವಿಸಿದರೂ ತಮ್ಮ ಪ್ರಾಣದ ಹಂಗು ತೊರೆದು ಚಂಡಮಾರುತದ ಭೀತಿಯಲ್ಲಿದ್ದ ಹಲವು ಜನರನ್ನು ರಕ್ಷಿಸಿದ್ದಕ್ಕೆ ನೆಟ್ಟಿಗರು ಪೊಲೀಸರನ್ನು ಹೊಗಳಿದ್ದಾರೆ.
Vijaya Karnataka Web odisha police officer


ಕೇಂದ್ರಪಾರಾದ ಪೊಲೀಸ್‌ ಠಾಣೆಯೊಂದರ ಲೇಡಿ ಪೊಲೀಸ್‌ ಅಧಿಕಾರಿ ಜನರನ್ನು ರಕ್ಷಿಸಿದ್ದು, ಇದನ್ನು ಒಡಿಶಾ ಪೊಲೀಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್‌ ಮಾಡಿದ್ದರು. ಗಾಡಿ ಓಡಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮಹಿಳೆಯನ್ನು ರಕ್ಷಿಸಿದ್ದ ಫೋಟೋವನ್ನು ಹಾಕಿದ್ದರು.

ನೆಟ್ಟಿಗರು ಈ ಫೋಟೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ನೀವೇ ನೋಡಿ:

ಅಲ್ಲದೆ, ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಜನರನ್ನು ಚಂಡಮಾರುತದ ಭೀತಿಯಿಂದ ಸುರಕ್ಷಿತವಾಗಿ ಸ್ಥಳಾಂತರ ಮಾಡುತ್ತಿರುವ ಹಲವು ಫೋಟೋಗಳನ್ನು ಸಹ ಒಡಿಶಾ ಪೊಲೀಸರು ಶೇರ್‌ ಮಾಡಿಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ