[This story originally published in Navbharat Times on Feb 06, 2019]
ಹೊಸದಿಲ್ಲಿ: ಅಪಹರಣ ಕೇಸ್ವೊಂದಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ದಿಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸ್ವತ: ಅರೆಸ್ಟ್ ಆಗಿದ್ದಾನೆ. ಕಿಡ್ನಾಪ್ ಕೇಸ್ವೊಂದಕ್ಕೆ ಸಂಬಂಧಪಟ್ಟಂತೆ ದಿಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಿಹಾರಕ್ಕೆ ತನ್ನ ತಂಡದ ಜತೆಗೆ ತೆರಳಿದ್ದಾನೆ. ಆದರೆ, ಮದ್ಯಪಾನ ಮಾಡಿ ತೆರಳಿದ್ದ ಪರಿಣಾಮ ಆತನನ್ನೇ ಬಂಧಿಸಲಾಗಿದೆ. ಬಿಹಾರದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಈ ವಿಚಾರ ಮರೆತ ದಿಲ್ಲಿ ಪೊಲೀಸ್ ಮುಖ್ಯ ಪೇದೆ ಮದ್ಯಪಾನ ಮಾಡಿ ಅಪಹರಣ ಕೇಸ್ ಆರೋಪಿಯನ್ನು ಬಂಧಿಸಲು ತೆರಳಿದ್ದಾನೆ. ಆ ವೇಳೆ, ಪೊಲೀಸ್ ಮದ್ಯಪಾನ ಮಾಡಿರುವುದನ್ನು ಅರಿತ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಿ ಸ್ಥಳಕ್ಕೆ ಕರೆಸಿಕೊಂಡರು. ಬಳಿಕ ಅಬಕಾರಿ ಇಲಾಖೆಯ ಅಧಿಕಾರಿಗಳು ದಿಲ್ಲಿ ಪೊಲೀಸ್ ಮುಖ್ಯ ಪೇದೆಯನ್ನು ಪರೀಕ್ಷೆಗೊಳಪಡಿಸಿದ್ದಾರೆ.
ಪರೀಕ್ಷೆಯಲ್ಲಿ ಆತ ಮದ್ಯಪಾನ ಮಾಡಿರುವುದು ಸಾಬೀತಾದ ಕಾರಣ ಮುಖೇಶ್ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ, ಇಡೀ ಘಟನೆ ಬಗ್ಗೆ ಬಿಹಾರ ಪೊಲೀಸರು ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರು. ಇನ್ನು, ದಿಲ್ಲಿ ಪೊಲೀಸರು ಮುಖ್ಯ ಪೇದೆಯಾಗಿದ್ದ ಮುಖೇಶ್ನನ್ನು ಮಂಗಳವಾರ ಅಮಾನತುಗೊಳಿಸಲಾಗಿದ್ದು, ಈ ಸಂಬಂಧ ಆರೋಪಿ ಮುಖ್ಯ ಪೇದೆ ವಿರುದ್ಧ ಕ್ರಮ ಕೈಗೊಂಡಿರುವುದನ್ನು ದಿಲ್ಲಿ ಪೊಲೀಸ್ ವಕ್ತಾರ ಅನಿಲ್ ಮಿತ್ತಲ್ ಸ್ಪಷ್ಟಪಡಿಸಿದ್ದಾರೆ.
ಘಟನೆಯ ವಿವರ
ರೋಹಿಣಿ ಸೆಕ್ಟರ್ - 17ನಲ್ಲಿ ವಾಸವಾಗಿದ್ದ 17 ವರ್ಷದ ಅಪ್ರಾಪ್ತ ಹುಡುಗಿಯನ್ನು ಆರೋಪಿ ಕಿಡ್ನಾಪ್ ಮಾಡಿದ್ದಾನೆ ಎಂದು ಅಪ್ರಾಪ್ತೆಯ ತಂದೆ ಕಾಟ್ಜು ದೂರು ನೀಡಿದ್ದರು. ಅಲ್ಲದೆ, ಆಕೆ ಬಿಹಾರದಲ್ಲಿದ್ದಾಳೆ ಎಂದೂ ತಿಳಿಸಿದ್ದರು. ಈ ಸಂಬಂಧ ಆರೋಪಿ ಮುಖ್ಯ ಪೇದೆಯನ್ನು ಬಿಹಾರದ ಸುಪಾಲ್ ನಗರಕ್ಕೆ ಕಳಿಸಲಾಗಿತ್ತು.
ಸುಪಾಲ್ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಇದನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಆ ವೇಳೆ ಮದ್ಯಪಾನದ ವಾಸನೆಯೂ ಬಂದಿದೆ. ಈ ಹಿನ್ನೆಲೆ, ಅಬಕಾರಿ ಇಲಾಖೆಗೆ ಅವರು ಮಾಹಿತಿ ನೀಡಿ, ಮುಖ್ಯಪೇದೆಯನ್ನೇ ಅರೆಸ್ಟ್ ಆಗುವಂತೆ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಬಿಹಾರದಲ್ಲಿ ಮದ್ಯಪಾನ ಬ್ಯಾನ್ ಆಗಿದ್ದರೂ ಮದಿರೆಯ ಮತ್ತಿನಲ್ಲಿದ್ದ ಮುಖ್ಯಪೇದೆ ಆರೋಪಿಯನ್ನು ಬಂಧಿಸುವ ವೇಳೆ ಗಲಾಟೆ ಮಾಡಿದ್ದ ಎಂದು ತಿಳಿದುಬಂದಿದೆ.
ಹೊಸದಿಲ್ಲಿ: ಅಪಹರಣ ಕೇಸ್ವೊಂದಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ದಿಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸ್ವತ: ಅರೆಸ್ಟ್ ಆಗಿದ್ದಾನೆ. ಕಿಡ್ನಾಪ್ ಕೇಸ್ವೊಂದಕ್ಕೆ ಸಂಬಂಧಪಟ್ಟಂತೆ ದಿಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಿಹಾರಕ್ಕೆ ತನ್ನ ತಂಡದ ಜತೆಗೆ ತೆರಳಿದ್ದಾನೆ. ಆದರೆ, ಮದ್ಯಪಾನ ಮಾಡಿ ತೆರಳಿದ್ದ ಪರಿಣಾಮ ಆತನನ್ನೇ ಬಂಧಿಸಲಾಗಿದೆ.
ಪರೀಕ್ಷೆಯಲ್ಲಿ ಆತ ಮದ್ಯಪಾನ ಮಾಡಿರುವುದು ಸಾಬೀತಾದ ಕಾರಣ ಮುಖೇಶ್ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ, ಇಡೀ ಘಟನೆ ಬಗ್ಗೆ ಬಿಹಾರ ಪೊಲೀಸರು ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರು. ಇನ್ನು, ದಿಲ್ಲಿ ಪೊಲೀಸರು ಮುಖ್ಯ ಪೇದೆಯಾಗಿದ್ದ ಮುಖೇಶ್ನನ್ನು ಮಂಗಳವಾರ ಅಮಾನತುಗೊಳಿಸಲಾಗಿದ್ದು, ಈ ಸಂಬಂಧ ಆರೋಪಿ ಮುಖ್ಯ ಪೇದೆ ವಿರುದ್ಧ ಕ್ರಮ ಕೈಗೊಂಡಿರುವುದನ್ನು ದಿಲ್ಲಿ ಪೊಲೀಸ್ ವಕ್ತಾರ ಅನಿಲ್ ಮಿತ್ತಲ್ ಸ್ಪಷ್ಟಪಡಿಸಿದ್ದಾರೆ.
ಘಟನೆಯ ವಿವರ
ರೋಹಿಣಿ ಸೆಕ್ಟರ್ - 17ನಲ್ಲಿ ವಾಸವಾಗಿದ್ದ 17 ವರ್ಷದ ಅಪ್ರಾಪ್ತ ಹುಡುಗಿಯನ್ನು ಆರೋಪಿ ಕಿಡ್ನಾಪ್ ಮಾಡಿದ್ದಾನೆ ಎಂದು ಅಪ್ರಾಪ್ತೆಯ ತಂದೆ ಕಾಟ್ಜು ದೂರು ನೀಡಿದ್ದರು. ಅಲ್ಲದೆ, ಆಕೆ ಬಿಹಾರದಲ್ಲಿದ್ದಾಳೆ ಎಂದೂ ತಿಳಿಸಿದ್ದರು. ಈ ಸಂಬಂಧ ಆರೋಪಿ ಮುಖ್ಯ ಪೇದೆಯನ್ನು ಬಿಹಾರದ ಸುಪಾಲ್ ನಗರಕ್ಕೆ ಕಳಿಸಲಾಗಿತ್ತು.
ಸುಪಾಲ್ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಇದನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಆ ವೇಳೆ ಮದ್ಯಪಾನದ ವಾಸನೆಯೂ ಬಂದಿದೆ. ಈ ಹಿನ್ನೆಲೆ, ಅಬಕಾರಿ ಇಲಾಖೆಗೆ ಅವರು ಮಾಹಿತಿ ನೀಡಿ, ಮುಖ್ಯಪೇದೆಯನ್ನೇ ಅರೆಸ್ಟ್ ಆಗುವಂತೆ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಬಿಹಾರದಲ್ಲಿ ಮದ್ಯಪಾನ ಬ್ಯಾನ್ ಆಗಿದ್ದರೂ ಮದಿರೆಯ ಮತ್ತಿನಲ್ಲಿದ್ದ ಮುಖ್ಯಪೇದೆ ಆರೋಪಿಯನ್ನು ಬಂಧಿಸುವ ವೇಳೆ ಗಲಾಟೆ ಮಾಡಿದ್ದ ಎಂದು ತಿಳಿದುಬಂದಿದೆ.