ಆ್ಯಪ್ನಗರ

ಸರಕಾರಿ ಶಾಲೆಗೆ 18,000 ರೂ. ಕೊಟ್ಟ ಭಿಕ್ಷುಕ

ಭಿಕ್ಷುಕರೊಬ್ಬರು ಸರಕಾರಿ ಶಾಲೆಗೆ ಧನ ಸಹಾಯ ಮಾಡಿದ ಘಟನೆ ತಮಿಳುನಾಡಿನ ತಿರುನೇಲ್‍ವೇಲಿಯಲ್ಲಿ ನಡೆದಿದೆ. ಪೂಲಪಾಂಡ್ಯನ್ ಎಂಬ ವ್ಯಕ್ತಿ ತಮಿಳುನಾಡಿನ ಊರೂರು ಸುತ್ತಿ ಭಿಕ್ಷೆ ಎತ್ತಿ ಬಂದ ಹಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸಿ ಕೊಟ್ಟಿದ್ದಾರೆ.

Vijaya Karnataka Web 17 Feb 2018, 6:01 pm
ಭಿಕ್ಷುಕರೊಬ್ಬರು ಸರಕಾರಿ ಶಾಲೆಗೆ ಧನ ಸಹಾಯ ಮಾಡಿದ ಘಟನೆ ತಮಿಳುನಾಡಿನ ತಿರುನೇಲ್‍ವೇಲಿಯಲ್ಲಿ ನಡೆದಿದೆ. ಪೂಲಪಾಂಡ್ಯನ್ ಎಂಬ ವ್ಯಕ್ತಿ ತಮಿಳುನಾಡಿನ ಊರೂರು ಸುತ್ತಿ ಭಿಕ್ಷೆ ಎತ್ತಿ ಬಂದ ಹಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸಿ ಕೊಟ್ಟಿದ್ದಾರೆ.
Vijaya Karnataka Web poolpandiyan is a 65 year old beggar
ಸರಕಾರಿ ಶಾಲೆಗೆ 18,000 ರೂ. ಕೊಟ್ಟ ಭಿಕ್ಷುಕ


ಒಟ್ಟು 18,000 ರೂ. ಭಿಕ್ಷೆ ಮೂಲಕ ಸಂಗ್ರಹಿಸಿದ ಹಣವನ್ನು ಪನ್ನಯಾರ‌ಕುಲಮ್, ಪಪ್ಪನ್‌ಕುಲಮ್, ರಾಧಾಪುರಮ್ ಶಾಲೆಗಳಿಗೆ ನೀಡಿದ್ದಾರೆ. ಶಾಲೆಗೆ ಕೇರಂ ಬೋರ್ಡ್, ಕಾರ್ಪೆಟ್, ಕುಡಿಯುವ ನೀರು ಸಂಗ್ರಹಿಸುವ ಟ್ಯಾಂಕ್, ಪುಸ್ತಕಗಳನ್ನು ಖರೀದಿಸಿಕೊಟ್ಟಿದ್ದಾರೆ.

ಅರುವತ್ತೈದು ವರ್ಷದ ಪೂಲಪಾಂಡ್ಯನ್ ಮೂಲತಃ ಭಿಕ್ಷುಕರೇನಲ್ಲ. ಇವರು ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು. ಒಂದು ಕಾಲದಲ್ಲಿ ದೊಡ್ಡ ಜಮೀನ್ದಾರರು. ಆದರೆ ದುರದೃಷ್ಟಕರ ಸಂಗತಿ ಎಂದರೆ ಎಲ್ಲವನ್ನೂ ಕಳೆದುಕೊಂಡರು. ಇವರ ಇಬ್ಬರು ಮಕ್ಕಳಿಗೂ ಮದುವೆಯಾಗಿದೆಯಂತೆ.

ಮಗ ಮತ್ತು ಸೊಸೆ ಜತೆಗೆ ಇದ್ದ ಇವರನ್ನು ಮನೆಯಿಂದ ಹೊರಹಾಕಿದರಂತೆ. ಇವರಿಗೆ ಪತ್ನಿ ಇಲ್ಲ. ಮನೆ ಸಹ ಇಲ್ಲದಿದ್ದ ಕಾರಣ ಊರೂರು ಸುತ್ತುತ್ತಾ ತಿರುಚಂದೂರು ತಲುಪಿದರು. ಈ ಸುತ್ತಾಟದಲ್ಲಿ ಅವರು ತುಂಬಾ ನಿತ್ರಾಣಗೊಂಡಿದ್ದರು. ಹಾಗಾಗಿ ಜನ ಭಿಕ್ಷುಕ ಎಂದು ತಿಳಿದು ಇವರಿಗೆ ಹಣ ನೀಡುತ್ತಿದ್ದರು. ಕಡೆಗೆ ಭಿಕ್ಷೆಯನ್ನೇ ಮುಂದುವರೆಸಿ ತನ್ನಿಂದ ಯಾರಿಗಾದರೂ ಸಹಾಯವಾಗಲಿ ಎಂದುಕೊಂಡು ಭಿಕ್ಷೆಯಲ್ಲಿ ಬಂದ ಹಣವನ್ನು ಶಾಲೆಗಳಿಗೆ ಕೊಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ