ಆ್ಯಪ್ನಗರ

ಆಷಾಢ ಮಾಸ; ಚಿಕನ್ ತಿನ್ನಲು ವಾರ ರಜೆ ಹಾಕಿದ ನೌಕರ!

ಇನ್ನೇನು ಇದೇ ಜೂ. 24ರಿಂದ ಆಷಾಢ ಮಾಸ ಆರಂಭವಾಗುತ್ತಿದೆ. ಆಷಾಢದಲ್ಲಿ ಮಾಂಸಾಹಾರ ನಿಷಿದ್ಧ. ಹಾಗಾಗಿ ಬಹಳಷ್ಟು ಮಂದಿ ಮಾಂಸಾಹಾರ ಪ್ರಿಯರು ಇನ್ನೊಂದು ತಿಂಗಳು ಚಿಕನ್, ಮಟನ್ ಮುಟ್ಟೋದಿಲ್ಲ. ಆಷಾಢಕ್ಕೂ ಮುನ್ನ ಭರ್ಜರಿ ಮಾಂಸಾಹಾರ ಮುಗಿಸಿಕೊಳ್ಳೋಣ ಎಂದು ಕೆಲವರು ಬಯಸುತ್ತಾರೆ.

ಮಹಾರಾಷ್ಟ್ರ ಟೈಮ್ಸ್ 21 Jun 2017, 7:02 pm
ನಾಗಪುರ: ಇನ್ನೇನು ಇದೇ ಜೂ. 24ರಿಂದ ಆಷಾಢ ಮಾಸ ಆರಂಭವಾಗುತ್ತಿದೆ. ಆಷಾಢದಲ್ಲಿ ಮಾಂಸಾಹಾರ ನಿಷಿದ್ಧ. ಹಾಗಾಗಿ ಬಹಳಷ್ಟು ಮಂದಿ ಮಾಂಸಾಹಾರ ಪ್ರಿಯರು ಇನ್ನೊಂದು ತಿಂಗಳು ಚಿಕನ್, ಮಟನ್ ಮುಟ್ಟೋದಿಲ್ಲ. ಆಷಾಢಕ್ಕೂ ಮುನ್ನ ಭರ್ಜರಿ ಮಾಂಸಾಹಾರ ಮುಗಿಸಿಕೊಳ್ಳೋಣ ಎಂದು ಕೆಲವರು ಬಯಸುತ್ತಾರೆ.
Vijaya Karnataka Web railway employee seeks one week leave to eat chicken before shrawan
ಆಷಾಢ ಮಾಸ; ಚಿಕನ್ ತಿನ್ನಲು ವಾರ ರಜೆ ಹಾಕಿದ ನೌಕರ!


ಇದೀಗ ರೈಲ್ವೆ ನೌಕರನೊಬ್ಬ ಸ್ಟೇಷನ್ ಮಾಸ್ಟರ್‌ಗೆ ಬರೆದಿರುವ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಗ್ನೇಯ ಕೇಂದ್ರ ರೈಲ್ವೆ ಇಲಾಖೆಯ ನೌಕರನೊಬ್ಬನ ರಜೆ ಅರ್ಜಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪಂಕಜ್ ರಾಜ್ ಗೊಂಡ್ ಎಂಬ ನೌಕರ ಬರೆದಿರುವ ಅರ್ಜಿ ಎಲ್ಲರ ಗಮನಸೆಳೆಯುತ್ತಿದೆ. ಬಿಲಾಸ್‌ಪುರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇವರು, ಜೂ.17ರಂದು ಸ್ಟೇಷನ್ ಮಾಸ್ಟರ್ ದೀಪಕ್‌ಗೆ ಬರೆದಿರುವ ಪತ್ರದಲ್ಲಿ ರಜೆಗೆ ಕೊಟ್ಟಿರುವ ಕಾರಣ ಈಗ ಚರ್ಚೆಗೆ ಗ್ರಾಸವಾಗಿದೆ.

ಅವರು ಬರೆದಿರುವ ಪತ್ರದ ಒಕ್ಕಣೆ ಈ ರೀತಿ ಇದೆ, 'ಸಾರ್, ಶ್ರಾವಣ ಮಾಸ ಆರಂಭವಾಗುತ್ತಿದೆ. ಇನ್ನೊಂದು ತಿಂಗಳು ಚಿಕನ್ ತಿನ್ನೋ ಹಂಗಿಲ್ಲ. ಹಾಗಾಗಿ ನಾನು ಚಿಕನ್ ತಿನ್ನಬೇಕಾಗಿದ್ದು ಏಳು ದಿನಗಳ ಕಾಲ ರಜೆ ಬೇಕಾಗಿದೆ...' ಎಂದು ಕಾರಣ ತಿಳಿಸಿದ್ದು ಜೂ.20ರಿಂದ 27ರವರೆಗೆ ರಜೆಯ ಅರ್ಜಿ ಗುಜರಾಯಿಸಿದ್ದಾನೆ ಪಂಕಜ್.

ಪಂಕಜ್ ರಾಜ್‌ಗೆ ಭಯ ಏನೆಂದರೆ ಇನ್ನೊಂದು ತಿಂಗಳು ಚಿಕನ್ ತಿನ್ನಲಿಲ್ಲ ಎಂದರೆ ಎಲ್ಲಿ ತಾನು ವೀಕ್ ಆಗುತ್ತೇನೋ ಎಂಬ ಭಯ. ಹಾಗಾಗಿ ಆಷಾಢಕ್ಕೂ ಮುನ್ನ ಗಡದ್ದಾಗಿ ಚಿಕನ್ ತಿನ್ನೋಣ ಎಂಬುದು ಆತನ ಪ್ಲಾನ್. ಒಂದು ತಿಂಗಳು ಚಿಕನ್ ತಿನ್ನಲಿಲ್ಲ ಎಂದರೆ ತನಗೆ ರಕ್ತಹೀನತೆ (ಅನೇಮಿಯಾ) ಬರುತ್ತದೆ ಎಂಬುದನ್ನೂ ರಜೆ ಅರ್ಜಿಯಲ್ಲಿ ಪಂಕಜ್ ತಿಳಿಸಿರುವುದು ಗಮನಾರ್ಹ.

ರಜೆ ಅರ್ಜಿಯೇನೋ ಸಲ್ಲಿಸಿದ್ದಾನೆ ಪಂಕಜ್, ಆದರೆ ಅವರ ಮೇಲಿನ ಅಧಿಕಾರಿಗಳು ರಜೆ ಕೊಟ್ಟರೋ ಇಲ್ಲವೋ ತಿಳಿದುಬಂದಿಲ್ಲ. ಆದರೆ ಪಂಕಜ್ ಬರೆದಿರುವ ಪತ್ರ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸಂಬಂಧ ಟೈಮ್ಸ್ ಬಳಗದ ವರದಿಗಾರರು ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹೋಗಲಿ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸೋಣ ಎಂದರೆ ಅವರೂ ಅಷ್ಟೇ ಈ ಬಗ್ಗೆ ಉತ್ತರಿಸಲು ನಿರಾಕರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ