ಆ್ಯಪ್ನಗರ

ರಕ್ಷಾ ಬಂಧನ: ಗಿಡಗಳಿಗೆ ರಾಖಿ ಕಟ್ಟುವ ಹೊಸ ಸಂಪ್ರದಾಯ!

ಸಸ್ಯಗಳೂ ಸಹ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಇಡೀ ಜಗತ್ತಿಗೆ ಸಾರಿದವರು ಜೀವಶಾಸ್ತ್ರ ವಿಜ್ಞಾನಿ ಜಗದೀಶ್ಚಂದ್ರ ಬೋಸ್. ಇದಕ್ಕಾಗಿ ಅವರು ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಇದರ ಬಗ್ಗೆ ಈ ವಿದ್ಯಾರ್ಥಿಗಳಿಗೆ ಅರಿವಿದೆ ಅನ್ನಿಸುತ್ತದೆ. ಗಿಡಗಳಿಗೆ ರಾಖಿ ಕಟ್ಟುವ ಮೂಲಕ ಅವುಗಳಲ್ಲಿ ಹೊಸ ಬಾಂಧವ್ಯವನ್ನು ಕಂಡುಕೊಂಡಿದ್ದಾರೆ.

ತೆಲುಗು ಸಮಯಂ 7 Aug 2017, 4:31 pm
ಸಸ್ಯಗಳೂ ಸಹ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಇಡೀ ಜಗತ್ತಿಗೆ ಸಾರಿದವರು ಜೀವಶಾಸ್ತ್ರ ವಿಜ್ಞಾನಿ ಜಗದೀಶ್ಚಂದ್ರ ಬೋಸ್. ಇದಕ್ಕಾಗಿ ಅವರು ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಇದರ ಬಗ್ಗೆ ಈ ವಿದ್ಯಾರ್ಥಿಗಳಿಗೆ ಅರಿವಿದೆ ಅನ್ನಿಸುತ್ತದೆ. ಗಿಡಗಳಿಗೆ ರಾಖಿ ಕಟ್ಟುವ ಮೂಲಕ ಅವುಗಳಲ್ಲಿ ಹೊಸ ಬಾಂಧವ್ಯವನ್ನು ಕಂಡುಕೊಂಡಿದ್ದಾರೆ.
Vijaya Karnataka Web raksha bandhan students tie rakhi to trees in hyderabad
ರಕ್ಷಾ ಬಂಧನ: ಗಿಡಗಳಿಗೆ ರಾಖಿ ಕಟ್ಟುವ ಹೊಸ ಸಂಪ್ರದಾಯ!


ಕೇವಲ ರಾಖಿ ಕಟ್ಟಿದ್ದಷ್ಟೇ ಅಲ್ಲದೆ, ಆ ಗಿಡಗಳ ಸಂರಕ್ಷಣೆಯ ಹೊಣೆಯನ್ನೂ ಹೊತ್ತಿರುವುದಾಗಿ ಆ ವಿದ್ಯಾರ್ಥಿಗಳೆಲ್ಲಾ ಪ್ರತಿಜ್ಞೆ ಮಾಡಿದ್ದಾರೆ. ರಾಖಿ ಹಬ್ಬದ ಪ್ರಯುಕ್ತ ಈ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದ್ದಾರೆ ಹೈದರಾಬಾದಿನ ಭಾರತೀಯ ವಿದ್ಯಾಭವನ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು.

ಶಾಲೆಯ ಆವರಣದಲ್ಲಿನ ಗಿಡಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಏಳು, ಎಂಟನೇ ತರಗತಿ ವಿದ್ಯಾರ್ಥಿಳು ಹೊತ್ತಿರುವುದು ಈ ಶಾಲೆಯ ವಿಶೇಷ. ಇದು ಸಾಮಾನ್ಯ ರಾಖಿ ಅಲ್ಲ... ಇದರ ಜತೆಗೆ ಆ ಗಿಡದ ಹೆಸರು, ಅದರ ಪ್ರಭೇದ, ಜಾತಿಯಂತಹ ವಿವರಗಳನ್ನೂ ಬರೆದು ಲ್ಯಾಮಿನೇಷನ್ ಮಾಡಿದ ಪತ್ರವೂ ಇರುತ್ತದೆ. ಆ ಗಿಡದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವಿದ್ಯಾರ್ಥಿಗಳ ವಿವರಗಳೂ ಇದರಲ್ಲಿರುತ್ತವೆ.



ಈ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಾದೇವಿ ಅವರ ಆಲೋಚನೆಯ ಪ್ರತಿಫಲವೇ ಈ ವಿಶೇಷ ರಾಖಿ ಸಂಭ್ರಮ. ಸದ್ಯಕ್ಕೆ ಅವರು ಅಮೆರಿಕ ಪ್ರವಾಸದಲ್ಲಿದ್ದು ಉಪ ಪ್ರಾಂಶುಪಾಲರಾದ ಶಶಿಕಲಾ ಅವರು ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪಾಲಿಸುತ್ತಿದ್ದಾರೆ.

ಪಾಠಶಾಲೆ ಆವರಣದಲ್ಲಿರುವ ವಿವಿಧ ವೃಕ್ಷ ಪ್ರಭೇದಗಳೂ, ಗಿಡಗಳು, ಅಲಂಕಾರಿಕ ಹಾಗೂ ಔಷಧಿ ಸಸ್ಯಗಳಲ್ಲಿ ಇಪ್ಪತ್ತು ವಿವಿಧ ಗಿಡಗಳನ್ನು ಆಯ್ಕೆ ಮಾಡಿಕೊಂಡು ಈ ಹೊಸ ರೀತಿ ರಕ್ಷಾಬಂಧನಕ್ಕೆ ಚಾಲನೆ ನೀಡಿದರು. ಸೋಮವಾರ ನೂರಕ್ಕೂ ಹೆಚ್ಚು ಗಿಡಗಳಿಗೆ ರಾಖಿ ಕಟ್ಟಿದ್ದಾಗಿ ಶಶಿಕಲಾ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸಸ್ಯಗಳ ಬಗ್ಗೆ ಆಸಕ್ತಿ ಬೆಳೆಸುವುದು, ಗಿಡಗಳೊಂದಿಗೆ ಹೊಸ ಅನುಬಂಧ ಬೆಸೆಯುವುದು, ಅವುಗಳ ಮೇಲೆ ವೈಜ್ಞಾನಿಕ ಅರಿವು ಮೂಡಿಸುವುದೇ ಇದರ ಗುರಿ ಎಂದಿದ್ದಾರೆ. ಈ ಗಿಡಗಳಿಗೆ ರಾಖಿ ಕಟ್ಟುತ್ತಿರುವ ವಿದ್ಯಾರ್ಥಿನಿಯರು ಈಗಾಗಲೆ ತಮ್ಮ ಮುದ್ದಾದ ಹೆಸರುಗಳಿಂದ ಅವುಗಳನ್ನು ಕರೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ