ಆ್ಯಪ್ನಗರ

ರೈಲಲ್ಲಿ ಭಯಂಕರ ಗೊರಕೆ ಸದ್ದಿಗೆ ರೊಚ್ಚಿಗೆದ್ದ ಪ್ರಯಾಣಿಕರು

ಪ್ರಯಾಣಿಕನೊಬ್ಬ ಭಯಂಕರ ಗೊರಕೆ ಸದ್ದು ಮಾಡುವ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ನಿದ್ದೆಗೆ ಸಂಚಕಾರ ತಂದ ಘಟನೆ ಎಲ್‍ಟಿಟಿ-ದರ್ಭಾಂಗ್ ಪವನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ.

Mumbai Mirror 14 Feb 2018, 2:09 pm
ಮುಂಬೈ: ಪ್ರಯಾಣಿಕನೊಬ್ಬ ಭಯಂಕರ ಗೊರಕೆ ಸದ್ದು ಮಾಡುವ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ನಿದ್ದೆಗೆ ಸಂಚಕಾರ ತಂದ ಘಟನೆ ಎಲ್‍ಟಿಟಿ-ದರ್ಭಾಂಗ್ ಪವನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ. ಗೊರಕೆ ಸದ್ದಿಗೆ ಬೇಸತ್ತ ಪ್ರಯಾಣಿಕರು ಕಡೆಗೆ ಆ ಪ್ರಯಾಣಿಕನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
Vijaya Karnataka Web ruckus on pawan express passengers bully snorer would not let him go back to sleep
ರೈಲಲ್ಲಿ ಭಯಂಕರ ಗೊರಕೆ ಸದ್ದಿಗೆ ರೊಚ್ಚಿಗೆದ್ದ ಪ್ರಯಾಣಿಕರು


ಪ್ರಯಾಣಿಕರೊಬ್ಬರ ಅಸಾಧ್ಯ ಗೊರಕೆ ಸದ್ದಿನಿಂದ ಸುಮಾರು 10 ಮಂದಿ ಪ್ರಯಾಣಿಕರಿಗೆ ನಿದ್ದೆ ಇಲ್ಲದಂತಾಗಿದೆ. ಕಡೆಗೆ ಇವರೆಲ್ಲಾ ಸೇರಿಕೊಂಡು ಗೊರಕೆ ಹೊಡೆಯುತ್ತಿದ್ದವರನ್ನು ಎಬ್ಬಿಸಿ ಮುಂಜಾನೆ 4ಯಿಂದ ಮಧ್ಯಾಹ್ನದ ತನಕ ನಿದ್ದೆ ಮಾಡದಂತೆ ಶಿಕ್ಷೆ ನೀಡಿದ್ದಾರೆ. ಆಗ ಉಳಿದವರು ನೆಮ್ಮದಿಯಾಗಿ ನಿದ್ದೆ ಮಾಡುವಂತಾಗಿದೆ.

ಕಳೆದ ಗುರುವಾರ ಜಬಲ್‌ಪುರ ನಿಲ್ದಾಣಕ್ಕೆ ಎಲ್‌ಟಿಟಿ-ಧರ್ಭಾಂಗ್ ಪವನ್ ಎಕ್ಸ್‌ಪ್ರೆಸ್‌ ರೈಲು ಮುಂಜಾನೆ 4ಕ್ಕೆ ಬರುತ್ತಿದ್ದಂತೆ ಬಿ-2 ಕೋಚ್‍ನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿ ಹತ್ತಿದ ರಾಮಚಂದರ್ ಎಂಬ ಪ್ರಯಾಣಿಕನೇ ಗೊರಕೆ ಹೊಡೆದು ಇತರೆ ಪ್ರಯಾಣಿಕರ ನಿದ್ದೆಗೆ ಸಂಚಕಾರ ತಂದವರು.

ಇವರ ಅಸಾಧ್ಯ ಗೊರಕೆಯಿಂದ ಬೇಸತ್ತ 8 ರಿಂದ 10 ಮಂದಿ ಪ್ರಯಾಣಿಕರು ಅವರ ವಿರುದ್ಧ ಸಿಡಿದೆದ್ದು ಟಿಟಿಇ (ಟಿಕೆಟ್ ಪರೀಕ್ಷಕ) ಗಣೇಶ್ ವಿಹ್ರಾರಿಗೆ ದೂರು ನೀಡಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಟಿಕೆಟ್ ಪರೀಕ್ಷಕರು ಏನೂ ಮಾಡುವಂತಿರಲಿಲ್ಲ.

ರೈಲ್ವೆ ಅಧಿಕಾರಿಗಳ ಪ್ರಕಾರ, ಗೊರಕೆ ಎಂಬುದು ಸಾಮಾನ್ಯ ಸಮಸ್ಯೆ. ಈ ಬಗ್ಗೆ ಪ್ರತಿ ತಿಂಗಳೂ ಸಾಕಷ್ಟು ದೂರುಗಳು ಬರುತ್ತಿವೆಯಂತೆ. ರೈಲಿನಲ್ಲಿ ಒಂದು ವೇಳೆ ಯಾರಾದರೂ ಬೇಕೆಂದೇ ಅಸಭ್ಯವಾಗಿ ವರ್ತಿಸಿದರೆ ಅವರಿಗೆ ದಂಡ ವಿಧಿಸಬಹುದು. ಆದರೆ ಗೊರಕೆ ಎಂಬುದು ಸಹಜ ಸಮಸ್ಯೆ, ಈ ಬಗ್ಗೆ ನಾನೇನೂ ಕ್ರಮಕೈಗೊಳ್ಳಲು ಆಗಲ್ಲ ಎಂದಿದ್ದಾರೆ.

ಹಾಗಾಗಿ ಟಿಕೆಟ್ ಕಲೆಕ್ಟರ್ ಗಣೇಶ್ ಅವರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಕಡೆಗೆ ಎಲ್ಲಾ ಪ್ರಯಾಣಿಕರೆಲ್ಲಾ ಸೇರಿ ರಾಮಚಂದರ್ ಮಧ್ಯಾಹ್ನದ ತನಕ ನಿದ್ದೆ ಮಾಡಬಾರದು ಎಂದು ತಮ್ಮಲ್ಲೇ ಒಂದು ಸಂಧಾನ ಮಾಡಿಕೊಂಡಿದ್ದಾರೆ. ಈ ಮೂಲಕ ಗೊರಕೆ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಪಡೆದು ನಿದ್ದೆಗೆ ಜಾರಿದ್ದಾರೆ.

ಗೊರಕೆ ಎಂಬುದು ಸಾಮಾನ್ಯ ಸಮಸ್ಯೆ. ಗಂಟಲ ಮೇಲ್ಭಾಗ ಮತ್ತು ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫದಿಂದ ಗೊರಕೆ ಶಬ್ದ ಕೇಳಿ ಬರುತ್ತದೆ. ಕೆಲವರು ಚಿಕ್ಕದಾಗಿ ಗೊರಕೆ ಹೊಡೆದರೆ ಕೆಲವರು ಅಸಾಧ್ಯ ಗೊರಕೆ ಮೂಲಕ ಬೇರೆಯವರ ನಿದ್ದೆಗೆ ಸಂಚಕಾರ ತರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ