ಆ್ಯಪ್ನಗರ

ರೈತನಿಗೆ ಕಚ್ಚಿತು ಸರ್ಪ: ಆತ ಸಾಯಲಿಲ್ಲ, ಹಾವೇ ಸತ್ತಿತು!

ಹಾವು ಕಚ್ಚಿದರೆ ಮನುಷ್ಯ ಸಾಯುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ, ಆದರೆ ಕಚ್ಚಿದ ಹಾವೇ ಸಾಯಲು ಸಾಧ್ಯವೇ?

Times Now 3 Sep 2019, 12:24 pm
ಪಟನಾ: ವಿಷಪೂರಿತ ಹಾವು, ಅದರಲ್ಲೂ ನಾಗರಹಾವು ಕಚ್ಚಿದರೆ ತಕ್ಷಣಕ್ಕೆ ಚಿಕಿತ್ಸೆ ಸಿಗದಿದ್ದರೆ ಮನುಷ್ಯ ಬದುಕುಳಿಯಲಾರ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ನಾಗರಹಾವಿನಿಂದ ಕಚ್ಚಿಸಿಕೊಂಡವ ಸಾಯುವ ಬದಲು ಹಾವೇ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ.
Vijaya Karnataka Web snake


ಹೌದು, ಬಿಹಾರದ ಸುಖಾನಗರ ಎಂಬ ಗ್ರಾಮದಲ್ಲಿ ಸುಬೋಧ್ ಪ್ರಸಾದ್ ಸಿಂಗ್ (55) ತೋಟದಲ್ಲಿ ಹೂವನ್ನು ಕೀಳಲು ಹೋಗಿದ್ದ. ಆ ಸಂದರ್ಭದಲ್ಲಿ ವಿಷಪೂರಿತ ನಾಗರಹಾವೊಂದು ಅವರಿಗೆ ಕಚ್ಚಿದೆ. ಗಾಬರಿಗೊಳ್ಳದ ಸಿಂಗ್ ತಮ್ಮ ಜನಿವಾರ ತೆಗೆದು ಹಾವು ಕಚ್ಚಿದ ಜಾಗಕ್ಕಿಂತ ಸ್ವಲ್ಪ ಮೇಲೆ ಗಟ್ಟಿಯಾಗಿ ಕಟ್ಟಿದ. ಹೆಚ್ಚು ತಡ ಮಾಡದೆ ಅವರನ್ನು ಮನೆಯವರು ಆಸ್ಪತ್ರೆಗೆ ಸಾಗಿಸಿದರು. ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರಿಂದ ಸಿಂಗ್ ಪ್ರಾಣಾಪಾಯದಿಂದ ಪಾರಾದರು.

ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆ ತಂದ ಕುಟುಂಬ ಸದಸ್ಯರು ಹಾವು ಅಲ್ಲೆ ಇದ್ದರೆ ಅಪಾಯ ಎಂದುಕೊಂಡು ಹುಡುಕಿಕೊಂಡು ತೋಟಕ್ಕೆ ಹೋಗಿ ನೋಡಿದರೆ ಹಾವಲ್ಲಿ ಸತ್ತು ಬಿದ್ದಿತ್ತು.

ಹಾವೇಕೆ ಸತ್ತಿತು?

ಪಶು ವೈದ್ಯಾಧಿಕಾರಿ ಪ್ರಸಾದ್ ಸಾಹು ಅವರು ಹೇಳುವ ಪ್ರಕಾರ ಪೊರೆ ಕಳಚಿಕೊಳ್ಳುವ ಸಂದರ್ಭದಲ್ಲಿ ಹಾವು ಬಹಳ ನೋವಿನಲ್ಲಿರುತ್ತದೆ. ಈ ಸಂದರ್ಭದಲ್ಲಿ ಅದು ಯಾರಿಗಾದರು ಕಚ್ಚಿದರೆ ಹೆಚ್ಚಿನ ವಿಷ ಅದರ ಬಾಯಲ್ಲಿಯೇ ಉಳಿದು ಬಿಡುತ್ತದೆ. ಹೀಗಾಗಿ ಅದು ಸಾವನ್ನಪ್ಪುತ್ತದೆ.

ಈ ಹಾವು ಪೊರೆ ಕಳುಚುವ ಸ್ಥಿತಿಯಲ್ಲಿತ್ತು. ಹೀಗಾಗಿ ಕಚ್ಚಿದ ಕೂಡಲೇ ಸಾವನ್ನಪ್ಪಿದೆ ಎಂದು ಸಾಹು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ