ಆ್ಯಪ್ನಗರ

ತಮಿಳುನಾಡು: 3ನೇ ಕ್ಲಾಸ್‌ ಹುಡುಗನ ಪ್ರಾಮಾಣಿಕತೆ ಪಾಠ ಕಲಿಯಲಿರುವ 2ನೇ ಕ್ಲಾಸ್‌ ವಿದ್ಯಾರ್ಥಿಗಳು!

ರಾಜ್ಯ ಶೈಕ್ಷಣಿಕ ಅಧ್ಯಯನ ಹಾಗೂ ತರಬೇತಿ ಮಂಡಳಿ, ಮಕ್ಕಳಿಗೆ ನೀತಿ ಪಾಠ ಹೇಳಲು ಇತಿಹಾಸ, ಪುರಾಣಗಳ ಉದಾಹರಣೆ ನೀಡುವ ಬದಲು ಸ್ಥಳೀಯವಾಗಿ ನಡೆದ ವಿಚಾರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ.

Times Now 14 Jun 2019, 4:00 pm
ಇರೋಡ್‌: ಚಿಕ್ಕ ವಯಸ್ಸಿನಲ್ಲಿ ನೀತಿ ಪಾಠಗಳು ಶಾಲೆಗಳಲ್ಲಿ ಹೇಳುತ್ತಿದ್ದುದು ನೆನಪಿದೆಯೇ!
Vijaya Karnataka Web erode


ತೆನಾಲಿ ರಾಮ ಸೇರಿದಂತೆ ಪುರಾಣದ ಅನೇಕ ವಿಚಾರಗಳನ್ನು ಕಥೆಗಳ ರೂಪದಲ್ಲಿ ಹೇಳಲಾಗುತ್ತಿತ್ತು. ತಮಿಳುನಾಡಿನಲ್ಲಿ ಮೂರನೇ ತರಗತಿ ವಿದ್ಯಾರ್ಥಿಯ ಮಾಡಿದ ಸತ್ಕಾರ್ಯವೊಂದನ್ನು 2ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಅಳವಡಿಸಲಾಗಿದೆ.

ರಾಜ್ಯ ಶೈಕ್ಷಣಿಕ ಅಧ್ಯಯನ ಹಾಗೂ ತರಬೇತಿ ಮಂಡಳಿ, ಮಕ್ಕಳಿಗೆ ನೀತಿ ಪಾಠ ಹೇಳಲು ಇತಿಹಾಸ, ಪುರಾಣಗಳ ಉದಾಹರಣೆ ನೀಡುವ ಬದಲು ಸ್ಥಳೀಯವಾಗಿ ನಡೆದ ವಿಚಾರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಇರೋಡ್‌ನಲ್ಲಿ ಯಾಸಿನ್‌ ಎಂಬ ಹುಡುಗನ ಪ್ರಾಮಾಣಿಕತೆಯನ್ನು ಇದೀಗ ಮಕ್ಕಳ ಪಠ್ಯದಲ್ಲಿ ಅಳವಡಿಸಲಾಗಿದೆ!

ಏನಾಗಿತ್ತು?
ಇರೋಡ್‌ನಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ ಯಾಸಿನ್‌, ಕೂಲಿ ಕಾರ್ಮಿಕರ ಕುಟುಂಬದಲ್ಲಿ ಹುಟ್ಟಿದ್ದ. ಶಾಲೆಯಲ್ಲಿ ಊಟದ ವಿರಾಮದ ವೇಳೆ ಆಟವಾಡುತ್ತಿದ್ದ ಯಾಸಿನ್‌ಗೆ, ಶಾಲಾ ಆವರಣದಲ್ಲಿ 50 ಸಾವಿರ ರೂ. ಇದ್ದ ಬ್ಯಾಗ್‌ ಸಿಕ್ಕಿದೆ. ಹಿಂದೆ ಮುಂದೆ ನೋಡದೆ, ಯಾಸಿನ್‌ ಈ ಬ್ಯಾಗ್‌ನ್ನು ತನ್ನ ಟೀಚರ್‌ ಗೆ ತಲುಪಿಸಿದ್ದನು. ಶಾಲಾ ಶಿಕ್ಷಕಿ ವಾಸ್ತವ ಸ್ಥಿತಿ ಅರಿತು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ಯಾಸಿನ್‌ನ ಪ್ರಾಮಾಣಿಕತೆಗೆ ಅತೀವ ಸಂತಸ ವ್ಯಕ್ತಪಡಿಸಿದ್ದರು.


ಯಾಸಿನ್‌ನ ಪ್ರಾಮಾಣಿಕತೆ ಬಗ್ಗೆ ತಮಿಳುನಾಡಿನಲ್ಲಿ ಕಳೆದ ವರ್ಷ ಸಾಕಷ್ಟು ಸುದ್ದಿಯಾಗಿತ್ತು. ಎಲ್ಲ ಮಾಧ್ಯಮಗಳು ಯಾಸಿನ್‌ ಹೊಗಳಿ ಕೊಂಡಾಡಿದ್ದವು. ಅಷ್ಟೇ ಅಲ್ಲ ಸೂಪರ್‌ಸ್ಟಾರ್‌ ರಜನೀಕಾಂತ್‌ ಸಹ ಯಾಸಿನ್‌ನ್ನು ತಮ್ಮ ಮನೆಗೆ ಆಹ್ವಾನಿಸಿ ಅಭಿನಂದಿಸಿದ್ದರು.
ಪ್ರಸ್ತುತ ಮೂರನೇ ತರಗತಿಯಲ್ಲಿ ಓದುತ್ತಿರುವ ಯಾಸಿನ್‌ನ ಪ್ರಾಮಾಣಿಕತೆ ಬಗ್ಗೆ ಸಣ್ಣದೊಂದು ಪಠ್ಯ, ಇದೀಗ 2ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಪೊಲೀಸರು ಯಾಸಿನ್‌ಗೆ ಅಭಿನಂದಿಸುವ ಫೋಟೋವನ್ನೂ ಹಾಕಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ