ಆ್ಯಪ್ನಗರ

ಥಾಯ್ಲೆಂಡ್‌ನ ಕೋಟ್ಯಧಿಪತಿ ಮಗಳ ಮದುವೆಯಾದರೆ 2 ಕೋಟಿ ರೂ., 10 ಕಾರು, ಇನ್ನು ಏನೇನು?

ಥೈಲೆಂಡ್‌ನಲ್ಲಿ ವಧುವಿಗೆ ವರನ ಕಡೆಯವರು ಉಡುಗೊರೆ ಕೊಡುವ ಸಂಪ್ರದಾಯವಿದೆ. ಆದರೆ ವರನಿಗೆ ವಧುವಿನ ಕಡೆಯಿಂದ ಭಾರಿ ಮೊತ್ತದ ಆಫರ್‌ ನೀಡಿರುವುದರಿಂದ ಥಾಯ್ಲೆಂಡ್‌ನಲ್ಲಿ ಹಾಟ್‌ ಟಾಪಿಕ್‌ ಆಗಿದೆ. ಬರೋಬ್ಬರಿ 10,000 ಯುವಕರು ಆಕೆಯನ್ನು ಮದುವೆಯಾಗಲು ಮುಗಿಬಿದ್ದಿದ್ದಾರೆ.

Agencies 10 Mar 2019, 2:36 pm
ಮಕ್ಕಳಿಗೆ 20 ವರ್ಷ ಕಳೆದಂತೆ ಮದುವೆ ವಿಚಾರವಾಗಿ ಪೋಷಕರು ತಲೆ ಕೆಡಿಸಿಕೊಳ್ಳಲು ಆರಂಭಿಸುತ್ತಾರೆ. ಉತ್ತಮ ಸೊಸೆಯನ್ನು ತರಬೇಕು, ಒಳ್ಳೆಯ ಹುಡುಗನನ್ನು ನೋಡಿ ಮಗಳನ್ನು ಮದುವೆ ಮಾಡಬೇಕು ಹೀಗೆ ಚಿಂತಿಸುತ್ತಲೇ ಇರುತ್ತಾರೆ. ಥಾಯ್ಲೆಂಡ್‌ನ ಕೋಟ್ಯಧಿಪತಿ ಅರ್ನನ್‌ ರಾಡ್‌ತಂಗ್‌ ಮಗಳನ್ನು ಮದುವೆ ಮಾಡುವ ವಿಚಾರವಾಗಿ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ.
Vijaya Karnataka Web Thailand bride


26 ವರ್ಷದ ಮಗಳು ಕಾರ್ನ್‌ಸಿತಾಗೆ ಇನ್ನು ಮದುವೆಯಾಗಿಲ್ಲ ಎಂಬ ಚಿಂತೆ ಶುರುವಾಗಿದ್ದು, ಫೇಸ್‌ಬುಕ್‌ನಲ್ಲಿ ಮಗಳನ್ನು ಮದುವೆಯಾಗುವ ವರನಿಗೆ 2 ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದಾನೆ. ಜತೆಗೆ 10 ಕಾರುಗಳು, ಮನೆ ಸೇರಿದಂತೆ ತನ್ನ ವ್ಯವಹಾರಗಳ ಜವಾಬ್ದಾರಿಯನ್ನು ಅಳಿಯ ಮೇಲೆ ಹೊರಿಸಲು ಸಿದ್ಧನಾಗಿದ್ದಾನೆ ಎಂದು ಹೇಳಿಕೊಂಡಿದ್ದರು.

ಈ ವಿಚಾರ ತಿಳಿದ ಯುವಕರು ಕಾರ್ನ್‌ಸಿತಾಳನ್ನು ಮದುವೆಯಾಗಲು ನಾನು ಮುಂದು ತಾನು ಮುಂದು ಎಂದು ಸ್ಪರ್ಧೆ ಬಿದ್ದಿದ್ದಾರೆ. 10,000ಕ್ಕೂ ಹೆಚ್ಚು ಯುವಕರು ಆಕೆಯನ್ನು ಮದುವೆಯಾಗಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದೀಗ ಸಾಮಾಜಿಕ ತಾಣದಲ್ಲಿ ವರನ್ವೇಷಣೆಯನ್ನು ಸ್ಥಗಿತಗೊಳಿಸಿರುವ ಅರ್ನನ್‌ ರಾಡ್‌ತಂಗ್‌ ಸೂಕ್ತ ವರನನ್ನು ಆರಿಸುವಲ್ಲಿ ಬ್ಯುಸಿ ಆಗಿದ್ದಾರೆ.

ವರನಿಗೆ ಹೆಚ್ಚೇನು ಪರಿಣತಿ ಬೇಕಿಲ್ಲ. ಓದಲು ಮತ್ತು ಬರೆಯಲು ಬಂದರೆ ಸಾಕು. ಯಾವುದೇ ಡಿಗ್ರಿಗಳನ್ನು ಹಿಡಿದುಕೊಂಡು ನನ್ನ ಮಗಳನ್ನು ಮದುವೆಯಾಗಲು ಬರಬೇಡಿ ಎಂದು ಕಡಾಖಂಡಿತವಾಗಿ ಹೇಳಿದ್ದಾನೆ. ಷರತ್ತು ಏನೆಂದರೆ ವರ ಕಠಿಣ ಪರಿಶ್ರಮಿ ಆಗಿರಬೇಕು. ಹಣದ ಬಗ್ಗೆ ಅರಿವಿರಬೇಕು ಮತ್ತು ಮಗಳನ್ನು ಅತೀವವಾಗಿ ಪ್ರೀತಿಸಬೇಕು ಎಂಬ ಕಟ್ಟಳೆಗಳನ್ನು ವಿಧಿಸಿದ್ದರು.

ಥಾಯ್ಲೆಂಡ್‌ನಲ್ಲಿ ವರದಕ್ಷಿಣೆ ಎಂಬುದಿಲ್ಲ. ಬದಲಾಗಿ ವಧುವಿನ ಮನೆಯವರಿಗೇ ವರ ಉಡುಗೊರೆಗಳನ್ನು ನೀಡಬೇಕು. ಇದನ್ನು ಸಿನ್‌ ಸೋದ್‌ (Sin Sod) ಸಂಪ್ರದಾಯ ಎನ್ನಲಾಗುತ್ತದೆ. ಹಾಗಾಗಿ ಅರ್ನನ್‌ ವರನಿಗೆ 2 ಕೋಟಿ ರೂ. ಕೊಡುತ್ತೇನೆ ಎಂದಿರುವುದು ಥಾಯ್ಲೆಂಡ್‌ ಮಂದಿಗೆ ಹುಬ್ಬೇರಿಸುವ ವಿಚಾರವಾಗಿದೆ.

ತಂದೆಯ ಘೋಷಣೆ ಬಗ್ಗೆ ತಿಳಿದ ಮಗಳು ವಿಸ್ಮಯಗೊಂಡಿದ್ದಾಳಂತೆ. ಇದನ್ನು ತಿಳಿದು ಬಿದ್ದು ಬಿದ್ದು ನಕ್ಕಳಂತೆ. ತಾನಿನ್ನು ಒಂಟಿ ಎಂಬ ಚಿಂತೆ ತಂದೆಯನ್ನು ಕಾಡುತ್ತಿರುವುದನ್ನು ತಿಳಿದು ಅಯ್ಯೋ ಎಂದೆನಿಸಿತಂತೆ. ಒಳ್ಳೆಯತನವಿರುವ, ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗ ಬೇಕು ಎಂದು 26 ವರ್ಷದ ಕಾರ್ನ್‌ಸಿತಾ ತಿಳಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ