ಆ್ಯಪ್ನಗರ

ನಿಮಗಿದು ಗೊತ್ತೆ? ಮರದ ಎಲೆಗಳಿಗೆ ಪರಸ್ಪರ ಸ್ಪರ್ಶಿಸಲು ನಾಚಿಕೆಯಂತೆ!

ಸೂಕ್ಷ್ಮವಾಗಿ ಗಮನಿಸಿದರೆ ಮರದಲ್ಲಿ ಎಲೆಗಳು ಅತಿ ದಟ್ಟವಾಗಿ ಹರಡಿದ್ದರೂ, ಒಂದಕ್ಕೊಂದು ಸ್ಪರ್ಶಿಸದಂತೆ ಸೂಕ್ಷ್ಮ ಅಂತರವನ್ನು ಕಾಯ್ದುಕೊಂಡಿರುತ್ತವೆ. ಇದನ್ನು ಕ್ರೌನ್‌ ಶೈನೆಸ್‌ ಎಂದು ವಿಜ್ಞಾನಿಗಳು ಕರೆದಿದ್ದಾರೆ.

Indiatimes 16 Dec 2018, 12:35 pm
ಮರಗಳು ಬುದ್ಧಿವಂತರು. ಆ ಕಾರಣದಿಂದಲೇ ಕೂದಲೆಳೆಯ ಅಂತರವನ್ನಾದರೂ ಪರಸ್ಪರ ಎಲೆಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Vijaya Karnataka Web Crown Shyness


ಮರದ ನೆರಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೂರ್ಯನ ಕಿರಣಗಳು ಎಲೆಗಳು ಮಧ್ಯೆ ನುಸುಳಿ ಬಂದಿರುವುದು ತಿಳಿಯುತ್ತದೆ. ಮರ ಎಂದರೆ ಚಪ್ಪರದಂತೆ ದಟ್ಟವಾಗಿ ಎಲೆಗಳು ಹರಡಿಕೊಂಡಿರುತ್ತವೆ. ಆದರೆ ಅವುಗಳು ಪರಸ್ಪರ ಎಲೆಗಳ ಮೇಲೆ ಬಿದ್ದುಕೊಳ್ಳುವುದಿಲ್ಲ. ಅಸಲಿಗೆ ಟಚ್ಚೇ ಮಾಡುವುದಿಲ್ಲ.

ಇದೇನು ಮ್ಯಾಜಿಕ್‌ ಅಲ್ಲ. ಇದಕ್ಕೂ ವೈಜ್ಞಾನಿಕ ಕಾರಣಗಳು ಇವೆ. ಮರಗಳು ವೈಜ್ಞಾನಿಕವಾಗಿ ವಿನ್ಯಾಸಗೊಂಡಿರುತ್ತವೆ. ಇದನ್ನೇ ವಿಜ್ಞಾನಿಗಳ ಮರಗಳು ಬುದ್ಧಿವಂತರು ಎಂದಿದ್ದು.

ಪರಸ್ಪರ ಸ್ಪರ್ಶಿಸಲು ಎಲೆಗಳಿಗೆ ಮುಜುಗರವಂತೆ. ಇದನ್ನು ಕ್ರೌನ್‌ ಶೈನೆಸ್‌ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಸಸ್ಯಗಳು ಬೆಳಕಿನ ಮೇಲೆ ಚಟುವಟಿಕೆ ನಡೆಸುವುದರಿಂದಲೇ ಕ್ರೌನ್‌ ಶೈನೆಸ್‌ ಬಂದಿದೆ ಎನ್ನುತ್ತಾರೆ ಸಂಶೋಧಕರು.

ಸೂರ್ಯ ಬೆಳಕು ಮರಗಳಿಗೆ ಬೇಕೇಬೇಕು. ಬೆಳಕಿನ ಸಹಾಯದಿಂದಲೇ ಸಸ್ಯಗಳು ಬೆಳವಣಿಗೆ ಹೊಂದುತ್ತವೆ. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ವಿಶಿಷ್ಟ ಪತ್ರಹರಿತ್ತು ಎಂಬ ಮಾಂತ್ರಿಕ ಶಕ್ತಿಯನ್ನು ಹೊಂದಿರುವ ಸಸ್ಯಗಳಿಗೆ ಅಡುಗೆ ತಯಾರಿಸಲು ಸೂರ್ಯ ಕಿರಣಗಳು ಮೈಮೇಲೆ ಬೀಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ