ಆ್ಯಪ್ನಗರ

ಕೊನೆಗೂ ಪಶ್ಚಿಮ ಬಂಗಾಳದ ಪಾಲಾದ ರಸಗುಲ್ಲ

ರಸಗುಲ್ಲಕ್ಕಾಗಿ ಒಡಿಶಾ ಜತೆ ಕಿತ್ತಾಡುತ್ತಿದ್ದ ಪಶ್ಚಿಮ ಬಂಗಾಳ, ಅದನ್ನು ತನಗೆ ಸೇರಿದ್ದು ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ. ರಸಗುಲ್ಲ ಪಶ್ಚಿಮ ಬಂಗಾಳದ ಭೌಗೋಳಿಕ ವೈಶಿಷ್ಠ್ಯ ಎಂಬ ಮಾನ್ಯತೆ ಸಿಕ್ಕಿದೆ.

Ei Samay 14 Nov 2017, 3:33 pm
ಕೋಲ್ಕತ: ರಸಗುಲ್ಲಕ್ಕಾಗಿ ಒಡಿಶಾ ಜತೆ ಕಿತ್ತಾಡುತ್ತಿದ್ದ ಪಶ್ಚಿಮ ಬಂಗಾಳ, ಅದನ್ನು ತನಗೆ ಸೇರಿದ್ದು ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ. ರಸಗುಲ್ಲ ಪಶ್ಚಿಮ ಬಂಗಾಳದ ಭೌಗೋಳಿಕ ವೈಶಿಷ್ಠ್ಯ ಎಂಬ ಮಾನ್ಯತೆ ಸಿಕ್ಕಿದೆ.
Vijaya Karnataka Web west bengal wins the rasgulla war against odisha
ಕೊನೆಗೂ ಪಶ್ಚಿಮ ಬಂಗಾಳದ ಪಾಲಾದ ರಸಗುಲ್ಲ


2015ರಿಂದ ರಸಗುಲ್ಲದ ಉಗಮದ ಬಗ್ಗೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ನಡುವೆ ಹಲವಾರು ತರ್ಕಗಳು ನಡೆದಿವೆ. ಪಶ್ಚಿಮ ಬಂಗಾಳ ರಸಗುಲ್ಲವನ್ನು 19ನೇ ಶತಮಾನದಲ್ಲಿ ನಬಿನ್‌ ಚಂದ್ರದಾಸ್‌ ಎಂಬವರು ಕೋಲ್ಕತ್ತಾದಲ್ಲಿ ಕಂಡು ಹಿಡಿದರು, ಆದ್ದರಿಂದ ಅದರ ಹೆಸರಿನ ಟ್ಯಾಗ್‌ ನಮಗೆ ಸೇರಿದ್ದು ಎಂದು ಹೇಳಿದರೆ, ಇಲ್ಲ ಇಲ್ಲ... ನಾವೇ ಮೊದಲು ಕಂಡು ಹಿಡಿದಿದ್ದು, ನಮ್ಮಲ್ಲಿ 13ನೇ ಶತಮಾನದಲ್ಲಿಯೇ ರಸಗುಲ್ಲ ಕಂಡು ಹಿಡಿಯಿಲಾಯಿತು ಎಂದು ಅದಕ್ಕೊಂದು ಕತೆಯನ್ನೂ ಕಟ್ಟಿದರು.

ಅವರು ಹೇಳುವ ಕತೆ ಹೀಗಿದೆ:
ರಥಯಾತ್ರೆ ಸಮಯದಲ್ಲಿ ಭಗವಾನ್‌ ಜಗನ್ನಾಥ ಪತ್ನಿ ಲಕ್ಷ್ಮೀದೇವಿಯನ್ನು ಮನೆಯಲ್ಲೇ ಬಿಟ್ಟು ತನ್ನ ಸೋದರತ್ತೆ ಮನೆಗೆ ಹೋಗುತ್ತಾನೆ. ಇದರಿಂದ ಲಕ್ಷ್ಮೀದೇವಿಗೆ ತುಂಬಾ ಕೋಪ ಬರುತ್ತದೆ. ಪರಮಾತ್ಮನನ್ನು ಮನೆಯೊಳಗೆ ಬರಲೇ ಬಿಡುವುದಿಲ್ಲ. ಆಗ ಆಕೆಯನ್ನು ಸಮಧಾನ ಪಡಿಸಲು ಜಗನ್ನಾಥ ಒಂದು ಬಟ್ಟಲು ತುಂಬಾ ರಸಗುಲ್ಲ ತರುತ್ತಾನೆ, ಆಗ ಲಕ್ಷ್ಮೀದೇವಿ ಸಂತುಷ್ಟಳಾಗುತ್ತಾಳೆ ಎಂಬ ಕತೆ ಹೇಳಿದರು.

ಈ ಕತೆಗೆ ಪ್ರತಿವಾದ ಮಾಡಿದ ಪಶ್ಚಿಮ ಬಂಗಾಳ ಭಾರತದ ಹಿಂದೂ ಸಂಪ್ರದಾಯದ ಪ್ರಕಾರ ಒಡೆದ ಹಾಲು ಹಾಗೂ ಅದರಿಂದ ಮಾಡಿದ ಪದಾರ್ಥಗಳನ್ನು ಮೈಲಿಗೆಯೆಂದು ಹೇಳಲಾಗುವುದು, ಅಂಥ ಆಹಾರಗಳನ್ನು ದೇವರ ಮುಂದೆ ಇಡುವುದಿಲ್ಲ, ರಸಗುಲ್ಲ ಒಡೆದ ಹಾಲಿನಿಂದ ಮಾಡುವುದರಿಂದ ದೇವರು ಬಳಸಿದ್ದಾರೆ ಎಂದು ಹೇಳುವುದು ಹೇಗೆ ಸರಿ ಎಂದು ಕೇಳಿತು.

ಹೀಗೆ ಕೊನೆಗೆ ನೋಡುಗರ ಬಾಯಲ್ಲಿ ನೀರೂರುವಂತೆ ಮಾಡುವ ರಸಗುಲ್ಲ ಪಶ್ಚಿಮ ಬಂಗಾಳದ ಪಾಲಾಯಿತು.

Read In Bengali

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ