ಆ್ಯಪ್ನಗರ

ತನ್ನ ಮನೆಗೇ ಕನ್ನ ಹಾಕಿದ ಗೃಹಿಣಿ!!

ತನ್ನ ಮನೆಗೇ ಕನ್ನ ಹಾಕಿ ರೂ. 30 ಲಕ್ಷದ ಒಡವೆ ಹಾಗೂ ಒಂದು ಲಕ್ಷ ರುಪಾಯಿ ದೋಚಿಕೊಂಡು ಹೋಗಲು ಸಹಾಯ ಮಾಡಿದ 30 ವರ್ಷದ ಗೃಹಿಣಿಯನ್ನು ಬಂಧಿಸಲಾಗಿದೆ!

Bangalore Mirror Bureau 3 Mar 2017, 2:41 pm
ಬೆಂಗಳೂರು: ತನ್ನ ಮನೆಗೇ ಕನ್ನ ಹಾಕಿ ರೂ. 30 ಲಕ್ಷದ ಒಡವೆ ಹಾಗೂ ಒಂದು ಲಕ್ಷ ರುಪಾಯಿ ದೋಚಿಕೊಂಡು ಹೋಗಲು ಸಹಾಯ ಮಾಡಿದ 30 ವರ್ಷದ ಗೃಹಿಣಿಯನ್ನು ಬಂಧಿಸಲಾಗಿದೆ!
Vijaya Karnataka Web woman fakes robbery gives loot to childs karate tutor
ತನ್ನ ಮನೆಗೇ ಕನ್ನ ಹಾಕಿದ ಗೃಹಿಣಿ!!


ತನ್ನ ಏಳು ವರ್ಷದ ಮಗನಿಗೆ ಕರಾಟೆ ಹೇಳಿಕೊಡುತ್ತಿದ್ದ ಮೆಹಬೂಬ್‌ ಪಾಷಾ ಎಂಬ ಕರಾಟೆ ಮಾಸ್ಟರ್‌ಗೆ ತನ್ನ ಮನೆ ಲೂಟಿ ಮಾಡಲು ನೆರವು ನೀಡಿದ ಆರೋಪದಡಿಯಲ್ಲಿ ಕಾವ್ಯ ವಿಶ್ವನಾಥ್‌ರನ್ನು ಬಂಧಿಸಲಾಗಿದೆ.

ಏನಿದು ಪ್ರಸಂಗ?

ಫೆ. 19ರಂದು ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ಒಬ್ಬರೇ ಇದ್ದರು. ಆಕೆಯ ಪತಿ ಉದ್ಯಮಿ ವಿಶ್ವನಾಥ್‌ ಶಿರಾದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು.

ಮನೆಗೆ ಹಿಂತಿರುಗಿದಾಗ ಕಾವ್ಯ ಮನೆಯಲ್ಲಿರುವ ನಗದು ಹಾಗೂ ಚಿನ್ನ ಕಳವು ಹೋಗಿರುವ ವಿಷಯ ತಿಳಿಸಿದಳು. ಮದುವೆ ಆಮಂತ್ರಣ ಪತ್ರ ಕೊಡುವ ಸೋಗಿನಲ್ಲಿ ಬಂದ ಅಪರಿಚಿತ ಮಹಿಳೆ ಮತ್ತು ತಂಡ ಆಕೆಯನ್ನು ಬೆದರಿಸಿ ಲೂಟಿ ಮಾಡಿದಾಗಿ ತಿಳಿಸಿದಳು.

ಈ ಕುರಿತು ಪೊಲೀಸ್ ದೂರು ದಾಖಲಿಸಲಾಯಿತು. ಕೇಸ್‌ ವಿಚಾರಣೆ ನಡೆಸುವಾಗ ದಾಳಿ ಹೇಗಾಯ್ತು ಎಂದು ಕೇಳಿದ ಪ್ರಶ್ನೆಗೆ ಈಕೆ ನೀಡಿದ ಉತ್ತರ ಪೊಲೀಸರಿಗೆ ತೃಪ್ತಿ ನೀಡಲಿಲ್ಲ, ಅಲ್ಲದೆ ಈಕೆ ತನ್ನನ್ನು ಬೆದರಿಸಿದಳು ಎಂದು ಹೇಳಿದ್ದಳು, ಆದರೆ ಆಕೆಯ ಮನೆಯಲ್ಲಿ ದಾಳಿ ಆದ ಲಕ್ಷಣಗಳು ಕಂಡು ಬಂದಿರಲಿಲ್ಲ, ಅಲ್ಲದೆ ಬೇರೆಯವರ ಫಿಂಗರ್ ಫ್ರಿಂಟ್‌ ಕೂಡ ಕಾಣಲಿಲ್ಲ, ಆದ್ದರಿಂದ ಈಕೆಯ ಮೇಲೆ ಸಂಶಯ ಆಗಿ ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ.

ಈಕೆಗೆ ತನ್ನ ಮಗನನ್ನು ವಿಶ್ವ ಚಾಂಪಿಯನ್ ಮಾಡುವ ಆಸೆ. ಆದರೆ ಗಂಡ ಈ ಕುರಿತು ಹೆಚ್ಚಿನ ಗಮನ ನೀಡಿರಲಿಲ್ಲ. ಈಕೆಯ ಮಗನಿಗೆ ಕಲಿಸಲು ಕರಾಟೆ ಮಾಸ್ಟರ್‌ರೊಬ್ಬರನ್ನು ಗೊತ್ತು ಮಾಡಿದಳು. ಮಗನಿಗೆ ಅತ್ಯುತ್ತಮವಾದ ಕರಾಟೆ ತರಬೇತಿ ನೀಡಲು ಆತನಿಗೆ ಚಿನ್ನ ಮತ್ತು ದುಡ್ಡು ನೀಡಿದ್ದಾಳೆ.

ಕಳೆದು ಹೋದ ಚಿನ್ನವನ್ನು ಆತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ