ಆ್ಯಪ್ನಗರ

ಅಗಲಿದ ಮಗನ ವೀರ್ಯಾಣು ಬಳಸಿ ಅವಳಿ ಮಕ್ಕಳ ಪಡೆದ ತಾಯಿ

​ ತಾಯಿ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ.

Vijaya Karnataka Web 15 Feb 2018, 2:24 pm
ತಾಯಿ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಇಲ್ಲಿಯೂ ಅಷ್ಟೇ ತಾಯಿಯೊಬ್ಬರು ಮಗ ಸಾವನ್ನಪ್ಪಿದರೂ ಆತನ ವಂಶ ಮುಂದುವರಿಯಬೇಕೆಂಬ ಆಸೆಯಿಂದ ಮಗನ ವೀರ್ಯಾಣು ಬಳಸಿ ಬಾಡಿಗೆ ತಾಯಿಯಿಂದ ಅವಳಿ ಮಕ್ಕಳನ್ನು ಪಡೆದಿರುವ ಅಪರೂಪದ ಘಟನೆ ಇದು.
Vijaya Karnataka Web woman uses dead sons sperm to relive legacy in surrogate twins
ಅಗಲಿದ ಮಗನ ವೀರ್ಯಾಣು ಬಳಸಿ ಅವಳಿ ಮಕ್ಕಳ ಪಡೆದ ತಾಯಿ


ಪುಣೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ 49 ವರ್ಷದ ರಾಜಶ್ರೀ ಪಟೇಲ್‌ ಮಗನ ವಂಶ ಮುಂದುವರೆಯಲು ಮಕ್ಕಳನ್ನು ಪಡೆದಿರುವ ತಾಯಿ.

ರಾಜಶ್ರೀ ಮಗ ಪ್ರಥಮೇಶ್ 2016, ಫೆಬ್ರವರಿಯಲ್ಲಿ ಕ್ಯಾನ್ಸರ್‌ಗೆ ಬಲಿಯಾದರು. ಆಗ ರಾಜಶ್ರೀ ತನ್ನ ಮಗನ ವಂಶ ಇಲ್ಲಿಗೆ ಮುಗಿಯಬಾರದು ಎಂದು ಮಗನ ವೀರ್ಯಾಣು ಬಳಸಿ ಮಕ್ಕಳನ್ನು ಪಡೆಯಲು ಮುಂದಾಗುತ್ತಾರೆ. ಇವರ ಈ ಪ್ರಯತ್ನವನ್ನು ಕೆಲವರು ವಿರೋಧಿಸಿದರೂ ಅವರ ಮಗಳು ಪ್ರೇಕ್ಷಾ ಅಮ್ಮನಿಗೆ ಧೈರ್ಯ ಹೇಳಿದಳು.

ಮೊದಲಿಗೆ ರಾಜಶ್ರೀ ಗರ್ಭ ಧರಿಸಲು ಸಾಧ್ಯವೇ ಎಂದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಆಕೆಗೆ ಗರ್ಭಧಾರಣೆ ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದಾಗ ಕುಟುಂಬದಲ್ಲಿಯೇ 35 ವರ್ಷದ ಮಹಿಳೆಯೊಬ್ಬರು ರಾಜಶ್ರೀ ನೆರವಿಗೆ ಬಂದರು. ಇದೀಗ ಫೆಬ್ರವರಿ 12, 2018ಕ್ಕೆ ಮುದ್ದಾದ ಅವಳಿ ಮಕ್ಕಳು ರಾಜಶ್ರೀ ಮಡಿಲು ಸೇರಿದ್ದಾರೆ. ಅವಳಿ ಮಕ್ಕಳಲ್ಲಿ ಗಂಡು ಮಗುವಿಗೆ ತಮ್ಮ ಮಗನ ಹೆಸರನ್ನೇ ಇಟ್ಟಿದ್ದಾರೆ, ಹೆಣ್ಣು ಮಗುವಿಗೆ ಮಗಳ ಹೆಸರನ್ನೇ (ಪ್ರಿಶಾ) ಇಟ್ಟಿದ್ದಾರೆ.

ರಾಜಶ್ರೀ ಮಗ ಪ್ರಥಮೇಶ್‌ ಓದುವುದರಲ್ಲಿ ತುಂಬಾ ಚುರುಕು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನ್‌ಗೆ ಹೋಗಿದ್ದರು. ಮಾಸ್ಟರ್‌ ಡಿಗ್ರಿ ಓದುತ್ತಿದ್ದಾಗ ಪ್ರಥಮೇಶ್‌ ಅವರಿಗೆ ಬ್ರೈನ್ ಟ್ಯೂಮರ್‌ ಇರುವುದು ಗೊತ್ತಾಯಿತು. ಆಗ ಟ್ಯೂಮರ್‌ಗೆ ಕೀಮೋ ಚಿಕಿತ್ಸೆ ನೀಡುವಾಗ ರೇಡಿಯೋ ಕಿರಣಗಳಿಂದ ವೀರ್ಯಾಣು ಮೇಲೆ ಅಡ್ಡ ಪರಿಣಾಮ ಬೀರಬಹುದೆಂದು ಚಿಕಿತ್ಸೆಗೆ ಮೊದಲೇ ಜರ್ಮನ್‌ನ ವೈದ್ಯಕೀಯ ನಿಯಮದ ಪ್ರಕಾರ ವೀರ್ಯಾಣು ಸಂಗ್ರಹಿಸಿಡುತ್ತಾರೆ.

ಅಲ್ಲಿಂದ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಿದ ಪ್ರಥಮೇಶ್‌ಗೆ ಮುಂಬಯಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಟ್ಯೂಮರ್‌ ತೆಗೆಯುತ್ತಾರೆ. ಶಸ್ತ್ರಚಿಕಿತ್ಸೆ ಬಳಿಕ ಪ್ರಥಮೇಶ್ ನಿಧಾನಕ್ಕೆ ಚೇತರಿಸಿಕೊಳ್ಳುವುದನ್ನು ನೋಡಿ ಮನೆಯವರೂ ಸಂತೋಷಗೊಂಡರು. ಆದರೆ ಅವರ ಸಂತೋಷ ತುಂಬಾ ದಿನ ಇರಲಿಲ್ಲ, ಎರಡು ವರ್ಷಗಳ ಬಳಿಕ ಪ್ರಥಮೇಶ್‌ನಲ್ಲಿ ಕ್ಯಾನ್ಸರ್‌ ಲಕ್ಷಣಗಳು ಕಂಡು ಬಂದವು. 2016ರ ಫೆಬ್ರವರಿಯಲ್ಲಿ ಪ್ರಥಮೇಶ್ ಕ್ಯಾನ್ಸರ್‌ಗೆ ಬಲಿಯಾದರು.

ಮಗ ಕಣ್ಮರೆಯಾದರೂ ಅವನ ವಂಶ ಮರೆಯಾಗಬಾರದೆಂದು ಎಂದು ಬಯಸಿದ ರಾಜಶ್ರೀ ಐವಿಎಫ್‌ ಮೂಲಕ ಮಗನ ಉತ್ತರಾಧಿಕಾರಿಗಳನ್ನು ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ