ಎಂಜಿನಿಯರಿಂಗ್ ಕೆಲಸ ಬಿಟ್ಟು 10 ಕೆರೆಗಳಿಗೆ ಮತ್ತೆ ಜೀವ ತಂದುಕೊಟ್ಟ 26 ವರ್ಷದ ಯುವಕ
ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಮಾಡಿರುವ ರಾಮ್ವೀರ್ ತನ್ವಾರ್ ಇತ್ತೀಚೆಗೆ ಎಂಜಿನಿಯರಿಂಗ್ ಕೆಲಸ ಬಿಟ್ಟಿದ್ದಾನೆ. ಕೆರೆಗಳನ್ನು ಉಳಿಸಲು ಒಳ್ಳೆಯ ಮಲ್ಟಿನ್ಯಾಷನಲ್ ಕಂಪನಿಯ ಕೈ ತುಂಬಾ ಸಂಬಳವನ್ನು ಬಿಟ್ಟಿದ್ದಾನೆ ಈತ.
TIMESOFINDIA.COM 7 Apr 2019, 11:37 am
[This story originally published in Times of India on April 7, 2019]
ಲಖನೌ: 26 ವರ್ಷದ ಎಂಜಿನಿಯರ್ ಒಬ್ಬ ಮಲ್ಟಿನ್ಯಾಷನಲ್ ಕಂಪನಿಯ ಕೆಲಸ ಬಿಟ್ಟಿದ್ದಾನೆ. ಯಾಕೆ ಗೊತ್ತಾ? ಒಳ್ಳೆಯ ಉದ್ದೇಶಕ್ಕಾಗಿ. ಏನದು ಒಳ್ಳೆಯ ಉದ್ದೇಶ ಅಂತೀರಾ? ಇಲ್ನೋಡಿ..
ಯುವಕ ರಾಮ್ವೀರ್ ತನ್ವಾರ್, ''ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ತನಗೆ ಜಲ ಸಂರಕ್ಷಣೆ ಮಾಡುವುದೇ ನನಗೆ ಹೆಚ್ಚು ಗಮನಾರ್ಹ ವೃತ್ತಿ'' ಎಂದು ಗ್ರೇಟರ್ ನೋಯ್ಡಾ ನಿವಾಸಿ ತಿಳಿಸಿದ್ದಾನೆ. ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ನೂರಾರು ಚಿಕ್ಕ ಚಿಕ್ಕ ಕೆರೆಗಳಿದ್ದು, ನಿರ್ಲಕ್ಷ್ಯಕ್ಕೊಳಗಾಗಿದೆ. ಇದನ್ನು ಪುನರುಜ್ಜೀವನಗೊಳಿಸುವ ಕಾರ್ಯ ಮಾಡುತ್ತಿದ್ದಾನೆ.
ರೈತನ ಮಗನಾಗಿರುವ ತನ್ವಾರ್ ಗ್ರೇಟರ್ ನೋಯ್ಡಾದ ನೀರಿನ ಸೆಲೆಗಳೊಂದಿಗೇ ಆತ ಹುಟ್ಟಿ ಬೆಳೆದಿದ್ದಾನೆ. ಹೀಗಾಗಿ, ತನ್ನ ಸುತ್ತಮುತ್ತಲ ಹಳ್ಳಿಗಳಲ್ಲಿರುವ ಕೆರೆಗಳನ್ನು ಆತ ನೋಡಿದ್ದಾನೆ. ಸೂರಜ್ಪುರ್ ತೇವಾಂಶವುಳ್ಳ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೊಳಪಟ್ಟಿದೆ. ಆದರೆ, ದಾಢಾ ಗ್ರಾಮದ ಬಳಿ ಯಾವಾಗಲೂ ನೀರಿನ ಸಮಸ್ಯೆ ಇರುತ್ತದೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ಗ್ರಾಮಗಳೇ ಹೆಚ್ಚಿದ್ದರೂ ಚಿಕ್ಕ ಚಿಕ್ಕ ಕೆರೆಗಳು ನಿರ್ಲಕ್ಷ್ಯಕ್ಕೊಳಗಾಗಿರುವುದನ್ನು, ಕಸದ ತೊಟ್ಟಿಗಳಾಗಿರುವುದನ್ನು ಆತ ಕಂಡಿದ್ದಾನೆ.
ಈ ಹಿನ್ನೆಲೆ 21 ವರ್ಷ ವಯಸ್ಸಿನಲ್ಲಿದ್ದಾಗಲೇ ತನ್ವಾರ್ ಗ್ರಾಮಸ್ಥರ ಜತೆ ಜಲ್ ಚೌಪಾಲ್ (ಸಭೆ) ನಡೆಸಿ ಕೆರೆಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದ. ಅಲ್ಲದೆ, ಸ್ವಯಂಸೇವಕರ ಹಲವು ತಂಡಗಳನ್ನೂ ರಚಿಸಿ ಒಂದೊಂದು ತಂಡಕ್ಕೆ ಒಂದೊಂದು ಪ್ರಾಜೆಕ್ಟ್ ನೀಡುತ್ತಿದ್ದ.
2014ರಲ್ಲೇ ಡಾಬ್ರಾ ಎಂಬ ಗ್ರಾಮದಲ್ಲಿ ಮೊದಲನೇ ಬಾರಿಗೆ ಸ್ವಯಂಸೇವಕರು ಸೇರಿಕೊಂಡು ಕೆರೆಯೊಂದನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ್ದರು. ತನ್ವಾರ್ ಕೆಲಸ ಮಾಡುತ್ತಿರುವ ವೇಳೆ ವಾರಾಂತ್ಯಗಳಲ್ಲಿ ಕೆರೆ ಸ್ವಚ್ಛಗೊಳಿಸಲು ಹೆಚ್ಚು ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಕ್ಲೀನ್ ಮಾಡಿದ ಬಳಿಕ ಮೀನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದರು.
ಹೆಚ್ಚು ಜನ ಸ್ವಯಂಸೇವಕರನ್ನು ಕರೆಸಿಕೊಳ್ಳಲು ಆತ ಸಾಮಾಜಿಕ ಜಾಲತಾಣದ ಮೊರೆ ಹೀಗಿದ್ದ. 'ಬೂಂದ್ ಬೂಂದ್ ಪಾನಿ' ಎಂಬ ಫೇಸ್ಬುಕ್ ಪೇಜ್ ಸೃಷ್ಟಿ ಮಾಡಿರುವ ಆತ ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಈ ಮೂಲಕ ಪ್ರತಿ ಬಾರಿ ಕೆರೆ ಸ್ವಚ್ಛಗೊಳಿಸುವ ಬಗ್ಗೆ ಮಾಹಿತಿ ನೀಡಿದ್ರೆ ನೂರಾರು ಮಂದಿ ಸ್ವಯಂಸೇವಕರು ತಾವಾಗೇ ಮುಂದೆ ಬರುತ್ತಾರೆ.
ಅಲ್ಲದೆ, ತನ್ವಾರ್ರ ಸಂರಕ್ಷಣಾ ಪ್ರಯತ್ನಗಳಿಗೆ ಹಲವು ಯುವಕರು ಹಾಗೂ ಗ್ರಾಮಸ್ಥರು ಹಲವು ವರ್ಷಗಳಿಂದ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ, ಕಳೆದ ವರ್ಷ ಸೆಲ್ಫಿವಿತ್ ಪಾಂಡ್ ( #SelfieWithPond) ಎಂಬ ಹ್ಯಾಶ್ಟ್ಯಾಗ್ ಆರಂಭಿಸಿದ ಬಳಿಕ ತಮ್ಮ ಊರಿನ ನೀರಿನ ಸೆಲೆಗಳ ಫೋಟೋವನ್ನು ಗ್ರಾಮಸ್ಥರು ಕಳಿಸಲು ಆರಂಭಿಸಿದ್ದು, ಜತೆಗೆ ಪ್ರಾಯೋಜಕತ್ವದ ಅವಕಾಶಗಳು ಬರುತ್ತಿವೆ. 2018ರಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಿಂದ 2.5 ಲಕ್ಷ ರೂ. ದೊರೆತಿದೆ.
ಆದರೆ, ಒಂದು ಚಿಕ್ಕ ಕೆರೆಯನ್ನು ಪುನರುಜ್ಜೀವನಗೊಳಿಸಲು ಸಹ 1ಲಕ್ಷ ರೂ. ನಿಂದ 25 ಲಕ್ಷ ರೂ, ನಷ್ಟು ಹಣ ಅಗತ್ಯವಿದ್ದು, 6 ರಿಂದ 7 ತಿಂಗಳಿನಷ್ಟು ಸಮಯ ಸಹ ತಗುಲುತ್ತದೆ. ಈ ವರ್ಷ ಒಂದು ಕಂಪನಿಯಿಂದ 7 ಲಕ್ಷ ರೂ. ನೆರವು ಆತನಿಗೆ ದೊರೆತಿದೆ. ಒಳ್ಳೆಯ ಬೆಳವಣಿಗೆ ಎಂದರೆ ಇತ್ತೀಚೆಗೆ ಗ್ರಾಮಸ್ಥರು ತಮ್ಮ ಊರಿನ ಕೆರೆಗಳನ್ನು ತಾವೇ ಸ್ವಚ್ಛಗೊಳಿಸಲು ಇಚ್ಛೆ ಪಡುತ್ತಿದ್ದಾರೆ ಎಂದು ನಾಗರಿಕರೊಬ್ಬರು ಹೇಳಿದ್ದಾರೆ.
ಲಖನೌ: 26 ವರ್ಷದ ಎಂಜಿನಿಯರ್ ಒಬ್ಬ ಮಲ್ಟಿನ್ಯಾಷನಲ್ ಕಂಪನಿಯ ಕೆಲಸ ಬಿಟ್ಟಿದ್ದಾನೆ. ಯಾಕೆ ಗೊತ್ತಾ? ಒಳ್ಳೆಯ ಉದ್ದೇಶಕ್ಕಾಗಿ. ಏನದು ಒಳ್ಳೆಯ ಉದ್ದೇಶ ಅಂತೀರಾ? ಇಲ್ನೋಡಿ..
ಯುವಕ ರಾಮ್ವೀರ್ ತನ್ವಾರ್, ''ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ತನಗೆ ಜಲ ಸಂರಕ್ಷಣೆ ಮಾಡುವುದೇ ನನಗೆ ಹೆಚ್ಚು ಗಮನಾರ್ಹ ವೃತ್ತಿ'' ಎಂದು ಗ್ರೇಟರ್ ನೋಯ್ಡಾ ನಿವಾಸಿ ತಿಳಿಸಿದ್ದಾನೆ. ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ನೂರಾರು ಚಿಕ್ಕ ಚಿಕ್ಕ ಕೆರೆಗಳಿದ್ದು, ನಿರ್ಲಕ್ಷ್ಯಕ್ಕೊಳಗಾಗಿದೆ. ಇದನ್ನು ಪುನರುಜ್ಜೀವನಗೊಳಿಸುವ ಕಾರ್ಯ ಮಾಡುತ್ತಿದ್ದಾನೆ.
ರೈತನ ಮಗನಾಗಿರುವ ತನ್ವಾರ್ ಗ್ರೇಟರ್ ನೋಯ್ಡಾದ ನೀರಿನ ಸೆಲೆಗಳೊಂದಿಗೇ ಆತ ಹುಟ್ಟಿ ಬೆಳೆದಿದ್ದಾನೆ. ಹೀಗಾಗಿ, ತನ್ನ ಸುತ್ತಮುತ್ತಲ ಹಳ್ಳಿಗಳಲ್ಲಿರುವ ಕೆರೆಗಳನ್ನು ಆತ ನೋಡಿದ್ದಾನೆ. ಸೂರಜ್ಪುರ್ ತೇವಾಂಶವುಳ್ಳ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೊಳಪಟ್ಟಿದೆ. ಆದರೆ, ದಾಢಾ ಗ್ರಾಮದ ಬಳಿ ಯಾವಾಗಲೂ ನೀರಿನ ಸಮಸ್ಯೆ ಇರುತ್ತದೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ಗ್ರಾಮಗಳೇ ಹೆಚ್ಚಿದ್ದರೂ ಚಿಕ್ಕ ಚಿಕ್ಕ ಕೆರೆಗಳು ನಿರ್ಲಕ್ಷ್ಯಕ್ಕೊಳಗಾಗಿರುವುದನ್ನು, ಕಸದ ತೊಟ್ಟಿಗಳಾಗಿರುವುದನ್ನು ಆತ ಕಂಡಿದ್ದಾನೆ.
ಈ ಹಿನ್ನೆಲೆ 21 ವರ್ಷ ವಯಸ್ಸಿನಲ್ಲಿದ್ದಾಗಲೇ ತನ್ವಾರ್ ಗ್ರಾಮಸ್ಥರ ಜತೆ ಜಲ್ ಚೌಪಾಲ್ (ಸಭೆ) ನಡೆಸಿ ಕೆರೆಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದ. ಅಲ್ಲದೆ, ಸ್ವಯಂಸೇವಕರ ಹಲವು ತಂಡಗಳನ್ನೂ ರಚಿಸಿ ಒಂದೊಂದು ತಂಡಕ್ಕೆ ಒಂದೊಂದು ಪ್ರಾಜೆಕ್ಟ್ ನೀಡುತ್ತಿದ್ದ.
2014ರಲ್ಲೇ ಡಾಬ್ರಾ ಎಂಬ ಗ್ರಾಮದಲ್ಲಿ ಮೊದಲನೇ ಬಾರಿಗೆ ಸ್ವಯಂಸೇವಕರು ಸೇರಿಕೊಂಡು ಕೆರೆಯೊಂದನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ್ದರು. ತನ್ವಾರ್ ಕೆಲಸ ಮಾಡುತ್ತಿರುವ ವೇಳೆ ವಾರಾಂತ್ಯಗಳಲ್ಲಿ ಕೆರೆ ಸ್ವಚ್ಛಗೊಳಿಸಲು ಹೆಚ್ಚು ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಕ್ಲೀನ್ ಮಾಡಿದ ಬಳಿಕ ಮೀನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದರು.
ಹೆಚ್ಚು ಜನ ಸ್ವಯಂಸೇವಕರನ್ನು ಕರೆಸಿಕೊಳ್ಳಲು ಆತ ಸಾಮಾಜಿಕ ಜಾಲತಾಣದ ಮೊರೆ ಹೀಗಿದ್ದ. 'ಬೂಂದ್ ಬೂಂದ್ ಪಾನಿ' ಎಂಬ ಫೇಸ್ಬುಕ್ ಪೇಜ್ ಸೃಷ್ಟಿ ಮಾಡಿರುವ ಆತ ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಈ ಮೂಲಕ ಪ್ರತಿ ಬಾರಿ ಕೆರೆ ಸ್ವಚ್ಛಗೊಳಿಸುವ ಬಗ್ಗೆ ಮಾಹಿತಿ ನೀಡಿದ್ರೆ ನೂರಾರು ಮಂದಿ ಸ್ವಯಂಸೇವಕರು ತಾವಾಗೇ ಮುಂದೆ ಬರುತ್ತಾರೆ.
ಅಲ್ಲದೆ, ತನ್ವಾರ್ರ ಸಂರಕ್ಷಣಾ ಪ್ರಯತ್ನಗಳಿಗೆ ಹಲವು ಯುವಕರು ಹಾಗೂ ಗ್ರಾಮಸ್ಥರು ಹಲವು ವರ್ಷಗಳಿಂದ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ, ಕಳೆದ ವರ್ಷ ಸೆಲ್ಫಿವಿತ್ ಪಾಂಡ್ ( #SelfieWithPond) ಎಂಬ ಹ್ಯಾಶ್ಟ್ಯಾಗ್ ಆರಂಭಿಸಿದ ಬಳಿಕ ತಮ್ಮ ಊರಿನ ನೀರಿನ ಸೆಲೆಗಳ ಫೋಟೋವನ್ನು ಗ್ರಾಮಸ್ಥರು ಕಳಿಸಲು ಆರಂಭಿಸಿದ್ದು, ಜತೆಗೆ ಪ್ರಾಯೋಜಕತ್ವದ ಅವಕಾಶಗಳು ಬರುತ್ತಿವೆ. 2018ರಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಿಂದ 2.5 ಲಕ್ಷ ರೂ. ದೊರೆತಿದೆ.
ಆದರೆ, ಒಂದು ಚಿಕ್ಕ ಕೆರೆಯನ್ನು ಪುನರುಜ್ಜೀವನಗೊಳಿಸಲು ಸಹ 1ಲಕ್ಷ ರೂ. ನಿಂದ 25 ಲಕ್ಷ ರೂ, ನಷ್ಟು ಹಣ ಅಗತ್ಯವಿದ್ದು, 6 ರಿಂದ 7 ತಿಂಗಳಿನಷ್ಟು ಸಮಯ ಸಹ ತಗುಲುತ್ತದೆ. ಈ ವರ್ಷ ಒಂದು ಕಂಪನಿಯಿಂದ 7 ಲಕ್ಷ ರೂ. ನೆರವು ಆತನಿಗೆ ದೊರೆತಿದೆ. ಒಳ್ಳೆಯ ಬೆಳವಣಿಗೆ ಎಂದರೆ ಇತ್ತೀಚೆಗೆ ಗ್ರಾಮಸ್ಥರು ತಮ್ಮ ಊರಿನ ಕೆರೆಗಳನ್ನು ತಾವೇ ಸ್ವಚ್ಛಗೊಳಿಸಲು ಇಚ್ಛೆ ಪಡುತ್ತಿದ್ದಾರೆ ಎಂದು ನಾಗರಿಕರೊಬ್ಬರು ಹೇಳಿದ್ದಾರೆ.