ಆಗ್ರಾ: ವಾಟ್ಸ್ ಆ್ಯಪ್ ನೋಡಲು ಹೆಂಡತಿಯ ಫೋನ್ ತೆಗೆದುಕೊಂಡ ಗಂಡನನ್ನು ಕತ್ತಿಯಿಂದಲೇ ಕಡಿದಿದ್ದಾಳೆ! ಪರಿಣಾಮ ತಲೆಗೆ ಅನೇಕ ಹೊಲಿಗೆ ಹಾಕಲಾಗಿದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಖೇರಗಢದ ಭಿಲವಾಲಿ ಎಂಬ ಗ್ರಾಮದಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದೆ. 21 ವರ್ಷದ ನೇತ್ರಪಾಲ್ ಸಿಂಗ್ ಮೇಲೆ 19 ವರ್ಷದ ನೀತು ಸಿಂಗ್ ಹಲ್ಲೆ ನಡೆಸಿದ್ದಾಳೆ. ಇವರಿಬ್ಬರು 2014ರಲ್ಲಿ ಮದುವೆಯಾಗಿದ್ದರು. ಆದರೆ ಪ್ರತ್ಯೇಕವಾಗಿ ಜೀವಿಸುತ್ತಿದ್ದರು ಎನ್ನಲಾಗಿದೆ. ಕಳೆದ ತಿಂಗಳು ನೀತು ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿ ಗಂಡನ ಮನೆಗೆ ವಾಪಾಸಾಗಿದ್ದಳು. ಆದರೆ ನೀತು ಸಿಂಗ್ಗೆ ಬೇರೊಬ್ಬನ ಜತೆ ಪ್ರೇಮಾಂಕುರವಾಗಿದೆ ಎಂದು ನೇತ್ರಪಾಲ್ ಅನುಮಾನಿಸಿದ್ದಾನೆ.
ಕಳೆದ ಶನಿವಾರ, ಪತ್ನಿ ಬೇರೊಬ್ಬನ ಜತೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುತ್ತಿರುವುದನ್ನು ಗಮನಿಸಿದೆ. ಮೊಬೈಲ್ ಕೊಡುವಂತೆ ಕೇಳಿದರೆ ಕೊಡಲಿಲ್ಲ. ಕೊನೆಗೆ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಾಟ್ಸ್ಆ್ಯಪ್ ಮೆಸೆಜ್ಗಳನ್ನು ನೋಡುತ್ತಿದ್ದಾಗ ಹಿಂದೆಯಿಂದ ತಲೆಗೆ ಕತ್ತಿಯಿಂದ ಕಡಿದಿದ್ದಾಳೆ ಎಂದು ನೇತ್ರಪಾಲ್ ದೂರಿದ್ದಾನೆ.
ಮದುವೆಗೂ ಮುನ್ನ ಬೇರೊಬ್ಬನ ಜತೆ ಸಂಬಂಧವಿರಿಸಿಕೊಂಡಿದ್ದಳು. ಇದು ನಮ್ಮ ಅರಿವಿಗೆ ಬಂದಿರಲಿಲ್ಲ. ಮದುವೆ ನಂತರ ಹಿಂದಿನದ್ದೆಲ್ಲ ಬಿಟ್ಟು ಸಂಸಾರ ನಡೆಸುವಂತೆ ಹೇಳಿದ್ದೆವು. ಆದರೆ ಆಕೆ ಕೇಳಲಿಲ್ಲ ಎಂದು ನೇತ್ರಪಾಲ್ ಅವರ ತಂದೆ ರಾಜೀವ್ ಸಿಂಗ್ ಹೇಳಿದ್ದಾರೆ.
ಘಟನೆ ನಂತರ ನೀತು ಆಕೆಯ ಪ್ರಿಯಕರ ಜತೆ ಸೇರಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ನೇತ್ರಪಾಲ್ ಸಂಬಂಧಿಕರು ಇಬ್ಬರನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಖೇರಗಢದ ಭಿಲವಾಲಿ ಎಂಬ ಗ್ರಾಮದಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದೆ. 21 ವರ್ಷದ ನೇತ್ರಪಾಲ್ ಸಿಂಗ್ ಮೇಲೆ 19 ವರ್ಷದ ನೀತು ಸಿಂಗ್ ಹಲ್ಲೆ ನಡೆಸಿದ್ದಾಳೆ. ಇವರಿಬ್ಬರು 2014ರಲ್ಲಿ ಮದುವೆಯಾಗಿದ್ದರು. ಆದರೆ ಪ್ರತ್ಯೇಕವಾಗಿ ಜೀವಿಸುತ್ತಿದ್ದರು ಎನ್ನಲಾಗಿದೆ. ಕಳೆದ ತಿಂಗಳು ನೀತು ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿ ಗಂಡನ ಮನೆಗೆ ವಾಪಾಸಾಗಿದ್ದಳು. ಆದರೆ ನೀತು ಸಿಂಗ್ಗೆ ಬೇರೊಬ್ಬನ ಜತೆ ಪ್ರೇಮಾಂಕುರವಾಗಿದೆ ಎಂದು ನೇತ್ರಪಾಲ್ ಅನುಮಾನಿಸಿದ್ದಾನೆ.
ಕಳೆದ ಶನಿವಾರ, ಪತ್ನಿ ಬೇರೊಬ್ಬನ ಜತೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುತ್ತಿರುವುದನ್ನು ಗಮನಿಸಿದೆ. ಮೊಬೈಲ್ ಕೊಡುವಂತೆ ಕೇಳಿದರೆ ಕೊಡಲಿಲ್ಲ. ಕೊನೆಗೆ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಾಟ್ಸ್ಆ್ಯಪ್ ಮೆಸೆಜ್ಗಳನ್ನು ನೋಡುತ್ತಿದ್ದಾಗ ಹಿಂದೆಯಿಂದ ತಲೆಗೆ ಕತ್ತಿಯಿಂದ ಕಡಿದಿದ್ದಾಳೆ ಎಂದು ನೇತ್ರಪಾಲ್ ದೂರಿದ್ದಾನೆ.
ಮದುವೆಗೂ ಮುನ್ನ ಬೇರೊಬ್ಬನ ಜತೆ ಸಂಬಂಧವಿರಿಸಿಕೊಂಡಿದ್ದಳು. ಇದು ನಮ್ಮ ಅರಿವಿಗೆ ಬಂದಿರಲಿಲ್ಲ. ಮದುವೆ ನಂತರ ಹಿಂದಿನದ್ದೆಲ್ಲ ಬಿಟ್ಟು ಸಂಸಾರ ನಡೆಸುವಂತೆ ಹೇಳಿದ್ದೆವು. ಆದರೆ ಆಕೆ ಕೇಳಲಿಲ್ಲ ಎಂದು ನೇತ್ರಪಾಲ್ ಅವರ ತಂದೆ ರಾಜೀವ್ ಸಿಂಗ್ ಹೇಳಿದ್ದಾರೆ.
ಘಟನೆ ನಂತರ ನೀತು ಆಕೆಯ ಪ್ರಿಯಕರ ಜತೆ ಸೇರಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ನೇತ್ರಪಾಲ್ ಸಂಬಂಧಿಕರು ಇಬ್ಬರನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.