ಕಾಠ್ಮಂಡು: ಪಕ್ಷದೊಳಗೆ ಮತ್ತು ಹೊರಗಿನಿಂದ ತೀವ್ರ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಾವೋವಾದಿ ಮುಖಂಡ, ಮಾಜಿ ಪ್ರಧಾನಿ ಪ್ರಚಂಡ ಅವರು ಐಷಾರಾಮಿ ಬಂಗಲೆ ತೊರೆಯಲು ನಿರ್ಧರಿಸಿದ್ದಾರೆ.
ಬಹುಕೋಟಿ ಬಂಗಲೆಯನ್ನು ತೆರವುಗೊಳಿಸುವ ಜತೆಗೆ ದುಬಾರಿ ವಾಹನಗಳನ್ನು ಕೂಡ ವಾಪಸ್ ಮಾಡಲು ಮುಂದಾಗಿದ್ದಾರೆ.
ಯುಪಿಸಿಎನ್-ಮಾವೋವಾದಿ ಪಕ್ಷದ ಐದು ದಿನಗಳ ವಾರ್ಷಿಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿ, ಬಂಗಲೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಖರೀದಿಸಿದ್ದೇನೆ ಎಂಬ ವದಂತಿ ಕೇಳಿ ಬಂದಿದೆ. ಹೀಗಾಗಿ ವಾಸ್ತ ವ್ಯಕ್ಕೆ ಹೊಸ ವ್ಯವಸ್ಥೆ ಆದ ಕೂಡಲೇ ಲಜಿಂಪತ್ ಐಷಾರಾಮಿ ಬಂಗಲೆಯನ್ನು ತೊರೆಯುವ ಜತೆಗೆ ಸರಕಾರ ನೀಡುವ ವಾಹನವನ್ನಷ್ಟೇ ಬಳಸುವುದಾಗಿ ಹೇಳಿದರು.
ಪ್ರಚಂಡ ಅವರು ಹಳೆ ಮನೆಯಿಂದ ಐಷಾರಾಮಿ ಬಂಗಲೆಗೆ ಸ್ಥಳಾಂತರಗೊಳ್ಳುತ್ತಿರುವುದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಬಿತ್ತರಗೊಂಡಿತ್ತು. ಇದನ್ನು ಗಮನಿಸಿದ ಪಕ್ಷ ದ ಉನ್ನತ ಸಮಿತಿ ಬಹುಕೋಟಿ ಆಸ್ತಿ ಖರೀದಿ ಸಂಬಂಧ ವಿವರಣೆ ಕೋರಿತ್ತು.
ಸಮಾವೇಶದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಪ್ರಚಂಡ ಅವರು, ಮಾಜಿ ಪ್ರಧಾನಿಗೆ ಸರಕಾರ ಮನೆ ಮತ್ತು ವಾಹನ ಕಲ್ಪಿಸಿದೆ ಎಂದು ಒರಟಾಗಿ ಉತ್ತರಿಸಿದ್ದರು. ಇದರಿಂದಾಗಿ ಶುಕ್ರವಾರ ಸಮಾವೇಶದಲ್ಲಿ ವಾಗ್ವಾದ ಉಂಟಾಗಿ ತಾರಕಕ್ಕೇರಿ ಹೊಡೆದಾಟ,ಕಿತ್ತಾಟ ನಡೆದಿತ್ತು. ಪ್ರಧಾನಿ ಬಾಬುರಾಂ ಭಟ್ಟಾರಾಯ್ಗೆ ಆಪ್ತರಾಗಿದ್ದ ಸದಸ್ಯರೊಬ್ಬರು ಪ್ರಚಂಡ ಅವರ ಮೇಲೆ ಕುರ್ಚಿ ಎಸೆದಿದ್ದರು. ಪ್ರಚಂಡ ಅವರ ಆಪ್ತರಿಗೆ ಸಮಾವೇಶದಲ್ಲಿ ಮಾತನಾಡಲು ಭಟ್ಟಾರಾಯ್ ಅವಕಾಶ ನಿರಾಕರಿಸಿದ್ದರು.
ಬಳಿಕ ಎರಡೂ ತಂಡಗಳ ಆಪ್ತರ ಜತೆ ಮಾತನಾಡಿದ ಪ್ರಚಂಡ ವೈಮನಸ್ಸಿಗೆ ಕೊನೆ ಹಾಡುವ ಪ್ರಸ್ತಾವ ಮುಂದಿಟ್ಟರು. ಪರಿಣಾಮವಾಗಿ ಐಷಾರಾಮಿ ಬಂಗಲೆ, ದುಬಾರಿ ವಾಹನ ತೊರೆಯವುದಾಗಿ ಸಮಾವೇಶದಲ್ಲಿ ಪ್ರಕಟಿಸಿದರು.
ಭ್ರಷ್ಟಾಚಾರ ಮತ್ತು ಬೃಹತ್ ಆಸ್ತಿ ಸಂಪಾದನೆ ಆರೋಪಗಳಿಂದಾಗಿ ಪಕ್ಷ ವು ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ.
ಬಹುಕೋಟಿ ಬಂಗಲೆಯನ್ನು ತೆರವುಗೊಳಿಸುವ ಜತೆಗೆ ದುಬಾರಿ ವಾಹನಗಳನ್ನು ಕೂಡ ವಾಪಸ್ ಮಾಡಲು ಮುಂದಾಗಿದ್ದಾರೆ.
ಯುಪಿಸಿಎನ್-ಮಾವೋವಾದಿ ಪಕ್ಷದ ಐದು ದಿನಗಳ ವಾರ್ಷಿಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿ, ಬಂಗಲೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಖರೀದಿಸಿದ್ದೇನೆ ಎಂಬ ವದಂತಿ ಕೇಳಿ ಬಂದಿದೆ. ಹೀಗಾಗಿ ವಾಸ್ತ ವ್ಯಕ್ಕೆ ಹೊಸ ವ್ಯವಸ್ಥೆ ಆದ ಕೂಡಲೇ ಲಜಿಂಪತ್ ಐಷಾರಾಮಿ ಬಂಗಲೆಯನ್ನು ತೊರೆಯುವ ಜತೆಗೆ ಸರಕಾರ ನೀಡುವ ವಾಹನವನ್ನಷ್ಟೇ ಬಳಸುವುದಾಗಿ ಹೇಳಿದರು.
ಪ್ರಚಂಡ ಅವರು ಹಳೆ ಮನೆಯಿಂದ ಐಷಾರಾಮಿ ಬಂಗಲೆಗೆ ಸ್ಥಳಾಂತರಗೊಳ್ಳುತ್ತಿರುವುದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಬಿತ್ತರಗೊಂಡಿತ್ತು. ಇದನ್ನು ಗಮನಿಸಿದ ಪಕ್ಷ ದ ಉನ್ನತ ಸಮಿತಿ ಬಹುಕೋಟಿ ಆಸ್ತಿ ಖರೀದಿ ಸಂಬಂಧ ವಿವರಣೆ ಕೋರಿತ್ತು.
ಸಮಾವೇಶದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಪ್ರಚಂಡ ಅವರು, ಮಾಜಿ ಪ್ರಧಾನಿಗೆ ಸರಕಾರ ಮನೆ ಮತ್ತು ವಾಹನ ಕಲ್ಪಿಸಿದೆ ಎಂದು ಒರಟಾಗಿ ಉತ್ತರಿಸಿದ್ದರು. ಇದರಿಂದಾಗಿ ಶುಕ್ರವಾರ ಸಮಾವೇಶದಲ್ಲಿ ವಾಗ್ವಾದ ಉಂಟಾಗಿ ತಾರಕಕ್ಕೇರಿ ಹೊಡೆದಾಟ,ಕಿತ್ತಾಟ ನಡೆದಿತ್ತು. ಪ್ರಧಾನಿ ಬಾಬುರಾಂ ಭಟ್ಟಾರಾಯ್ಗೆ ಆಪ್ತರಾಗಿದ್ದ ಸದಸ್ಯರೊಬ್ಬರು ಪ್ರಚಂಡ ಅವರ ಮೇಲೆ ಕುರ್ಚಿ ಎಸೆದಿದ್ದರು. ಪ್ರಚಂಡ ಅವರ ಆಪ್ತರಿಗೆ ಸಮಾವೇಶದಲ್ಲಿ ಮಾತನಾಡಲು ಭಟ್ಟಾರಾಯ್ ಅವಕಾಶ ನಿರಾಕರಿಸಿದ್ದರು.
ಬಳಿಕ ಎರಡೂ ತಂಡಗಳ ಆಪ್ತರ ಜತೆ ಮಾತನಾಡಿದ ಪ್ರಚಂಡ ವೈಮನಸ್ಸಿಗೆ ಕೊನೆ ಹಾಡುವ ಪ್ರಸ್ತಾವ ಮುಂದಿಟ್ಟರು. ಪರಿಣಾಮವಾಗಿ ಐಷಾರಾಮಿ ಬಂಗಲೆ, ದುಬಾರಿ ವಾಹನ ತೊರೆಯವುದಾಗಿ ಸಮಾವೇಶದಲ್ಲಿ ಪ್ರಕಟಿಸಿದರು.
ಭ್ರಷ್ಟಾಚಾರ ಮತ್ತು ಬೃಹತ್ ಆಸ್ತಿ ಸಂಪಾದನೆ ಆರೋಪಗಳಿಂದಾಗಿ ಪಕ್ಷ ವು ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ.