ಆ್ಯಪ್ನಗರ

ಮದರಸಾದಲ್ಲೇ ಲೈಂಗಿಕ ಕಿರುಕುಳದ ದೂರು ನೀಡಿದ ವಿದ್ಯಾರ್ಥಿನಿಯ ಸಜೀವ ದಹನ!

ವೀಡಿಯೋದಲ್ಲಿ ' ನನ್ನ ಕೊನೆಯ ಉಸಿರುವ ಇರುವವರೆಗೂ ಈ ಅಪರಾಧದ ವಿರುದ್ಧ ಹೋರಾಡುತ್ತೇನೆ' ಎನ್ನುತ್ತಿರುವುದು ರೆಕಾರ್ಡ್‌ ಆಗಿದೆ.

Indiatimes 19 Apr 2019, 1:06 pm
ಡಾಕಾ: ಜಗತ್ತೇ ಬೆಚ್ಚಿ ಬೀಳುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ದೂರ ಸಲ್ಲಿಸಿದ ವಿದ್ಯಾರ್ಥಿನಿಯನ್ನು ಮದರಸಾದಲ್ಲೇ ಸೀಮೆಯೆಣ್ಣೆ ಸುರಿದು ಸಜೀವವಾಗಿ ದಹಿಸಿದ ಕ್ರೂರ ಘಟನೆ ವರದಿಯಾಗಿದೆ.
Vijaya Karnataka Web Nusrat


ಮದರಸಾದಲ್ಲಿ ಕಲಿಯುತ್ತಿದ್ದ ನುಸ್ರತ್‌ ಜಹಾನ್‌ ರಫಿ ಎಂಬ 19 ವರ್ಷದ ಯುವತಿ, ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದ್ದಳು. ದುರ್ದೈವ ಎಂದರೆ ಸಂತ್ರಸ್ತ ಹುಡುಗಿಯ ನೆರವಿಗೆ ಬರಬೇಕಾದವರು, ಮದರಸಾದ ಘನತೆಗೆ ಧಕ್ಕೆ ತಂದಿದ್ದಾಳೆ ಎಂದು ಸೀಮೆಯೆಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ಘಟನೆ ಧರ್ಮದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ರಾಷ್ಟ್ರಗಳಲ್ಲಿ ಹೆಣ್ಣಿನ ದಯಾನಿಯ ಸ್ಥಿತಿಯನ್ನು ಜಗತ್ತಿಗೆ ಸಾರುತ್ತಿದೆ.

ಮಾರ್ಚ್‌ 27ರಂದು ವಿದ್ಯಾರ್ಥಿಯನ್ನು ಕಚೇರಿಗೆ ಕರೆಸಿಕೊಂಡ ಹೆಡ್‌ಮಾಸ್ಟರ್‌ ಲೈಂಗಿಕ ಕಿರುಕುಳ ನೀಡಿದ್ದಾನೆ. ಮುಂದಿನ ಅನಾಹುತವನ್ನು ಅರಿತ ವಿದ್ಯಾರ್ಥಿನಿ ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಮದರಸಾದಲ್ಲಿ ನಡೆದ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಾಳೆ. ಹತ್ತಿರದ ಪೊಲೀಸ್‌ ಠಾಣೆಗೆ ಪೋಷಕರ ಸಮೇತ ಹೋಗಿ ಹೆಡ್‌ಮಾಸ್ಟರ್‌ ವಿರುದ್ಧ ದೂರು ನೀಡಲು ಯತ್ನಿಸಿದ್ದಾಳೆ. ದೂರು ದಾಖಲಿಸಿಕೊಳ್ಳದ ಪೊಲೀಸರು ಆಕೆಯ ವಿರುದ್ಧವೇ ದೌರ್ಜನ್ಯ ನಡೆಸಿದ್ದಾರೆ.



ಪೊಲೀಸ್‌ ಠಾಣೆಯಲ್ಲಿ ನಡೆದ ಘಟನೆ ವೀಡಿಯೋದಲ್ಲಿ ದಾಖಲಾಗಿದ್ದು, ಪೊಲೀಸ್‌ ಅಧಿಕಾರಿ ಇದೇನು ದೊಡ್ಡ ವಿಷಯವಲ್ಲ, ಮುಖದಿಂದ ಕೈಗಳನ್ನು ಸರಿಸು ಎಂದು ದೌರ್ಜನ್ಯ ನಡೆಸುತ್ತಿರುವುದು ಕಂಡುಬಂದಿದೆ. ಇದಾದ ನಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಮುಖ್ಯೋಪಾಧ್ಯಾಯನನ್ನು ಬಂಧಿಸಿತ್ತು. ನಂತರ ಪೊಲೀಸ್‌ ಠಾಣೆಯ ಮುಂದೆ ಹೆಡ್‌ಮಾಸ್ಟರ್‌ಅನ್ನು ಬಿಡುಗಡೆ ಮಾಡುವಂತೆ ಮದರಸಾದ ಕೆಲವರು ಪ್ರತಿಭಟನೆ ನಡೆಸುವ ನಾಟಕವೂ ನಡೆದಿತ್ತು.

ದೌರ್ಜನ್ಯ ನಡೆದು 11 ದಿನಗಳ ನಂತರ ಏಪ್ರಿಲ್‌ 6 ರಂದು ವಿದ್ಯಾರ್ಥಿನಿ ಪರೀಕ್ಷೆಗ ಹಾಜರಾಗಲು ಮದರಾಸಕ್ಕೆ ತೆರಳಿದ್ದಳು. ಈ ವೇಳೆ ಕೆಲವು ಸಹಪಾಠಿಗಳು ಆಕೆಯನ್ನು ತಳಿಸಿದ್ದಾರೆ. ಒಂದಷ್ಟು ಬುರ್ಖಾ ತೊಟ್ಟಿದ್ದ ಮಂದಿ ಆಕೆಯನ್ನು ಸುತ್ತುವರಿದು ದೂರು ವಾಪಾಸ್‌ ಪಡೆಯುವಂತೆ ಒತ್ತಾಯಿಸಿದ್ದಾರೆ. ದೂರು ವಾಪಾಸ್‌ ಪಡೆಯಲು ಒಪ್ಪದ ನುಸ್ರತ್‌ಳ ಮೇಲೆ ಸೀಮೆಯೆಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಇದೇ ವೇಳೆ ಮೊಬೈಲ್‌ನಲ್ಲಿ ತನ್ನ ಮೇಲೆ ದಾಳಿ ನಡೆಸಿದ ವೀಡಿಯೋವನ್ನು ಚಿತ್ರೀಕರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ವೀಡಿಯೋದಲ್ಲಿ ' ನನ್ನ ಕೊನೆಯ ಉಸಿರುವ ಇರುವವರೆಗೂ ಈ ಅಪರಾಧದ ವಿರುದ್ಧ ಹೋರಾಡುತ್ತೇನೆ' ಎನ್ನುತ್ತಿರುವುದು ರೆಕಾರ್ಡ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ