ಕಾಬೂಲ್: ಅಪ್ಘಾನಿಸ್ತಾನದ ಪಶ್ಚಿಮ ಕಾಬೂಲ್ನಲ್ಲಿ ಮಂಗಳವಾರ ಅತ್ಯಂತ ಅಮಾನವೀಯ ಕೃತ್ಯ ನಡೆದಿದೆ. ಕೆಲ ಭಯೋತ್ಪಾದಕರು ಹೆರಿಗೆ ಆಸ್ಪತ್ರೆಯೊಳಗೆ ನುಸುಳಿ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಸಮಾರು ಒಂದು ತಾಸು ಪೊಲೀಸರು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು.
ಅಪ್ಘಾನಿಸ್ತಾನ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಬಾರ್ಬಿ ಹೆರಿಗೆ ಆಸ್ಪತ್ರೆಗೆ ನುಸುಳಿದ ಭಯೋತ್ಪಾದಕರು, ಪೊಲೀಸರ ನಡುವೆ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯಿತು. ಭಯೋತ್ಪಾದಕರು ವಿವೇಚನಾ ರಹಿತವಾಗಿ ಗುಂಡಿನ ದಾಳಿ ನಡೆಸಿದ್ದರಿಂದ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಎರಡು ನವಜಾತ ಶಿಶುಗಳು, ಕೆಲವು ಬಾಣಂತಿಯರು, ಶುಶ್ರೂಷಿಕಿಯರು ಕೂಡಾ ಸೇರಿದ್ದಾರೆ.
ಆಸ್ಪತ್ರೆಯಿಂದ ಸುಮಾರು 80 ಮಂದಿ ಮಹಿಳೆಯರು, ಹಸುಕಂದಮ್ಮಗಳನ್ನು ಭದ್ರತಾ ಪಡೆಗಳು ರಕ್ಷಿಸಿವೆ. ಅಪ್ಘಾನಿಸ್ತಾನದ ಒಳಾಡಳಿತ ಸಚಿವಾಲಯದ ವಕ್ತಾರ ತಾರೀಖ್ ಅರಿಯನ್ ಮಾತನಾಡಿ, "ಬಾರ್ಬಿ ಹೆರಿಗೆ ಆಸ್ಪತ್ರೆಯಲ್ಲಿ ಭಯೋತ್ಪಾದಕರು ವಿವೇಚನಾ ರಹಿತವಾಗಿ ಗುಂಡು ಹಾರಿಸಿದ ಪರಿಣಾಮ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರಲ್ಲಿ ಮಹಿಳೆಯರು, ಶಿಶುಗಳು ಕೂಡ ಸೇರಿವೆ," ಎಂದಿದ್ದಾರೆ.
'ದಿಬ್ಬಾ ರೋಟ್ಟಿ' ಮಾಡುವುದನ್ನು ಕಲಿಸಿದ ವ್ಯಕ್ತಿಗೆ 'ಗುರು ದಕ್ಷಿಣೆ' ಪಾವತಿಸಿದ ಸೆಲೆಬ್ರಿಟಿ ಚೆಫ್ ವಿಕಾಸ್ ಖನ್ನಾ
ಅಪ್ಘಾನಿಸ್ತಾನ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಬಾರ್ಬಿ ಹೆರಿಗೆ ಆಸ್ಪತ್ರೆಗೆ ನುಸುಳಿದ ಭಯೋತ್ಪಾದಕರು, ಪೊಲೀಸರ ನಡುವೆ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯಿತು. ಭಯೋತ್ಪಾದಕರು ವಿವೇಚನಾ ರಹಿತವಾಗಿ ಗುಂಡಿನ ದಾಳಿ ನಡೆಸಿದ್ದರಿಂದ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಎರಡು ನವಜಾತ ಶಿಶುಗಳು, ಕೆಲವು ಬಾಣಂತಿಯರು, ಶುಶ್ರೂಷಿಕಿಯರು ಕೂಡಾ ಸೇರಿದ್ದಾರೆ.
ಆಸ್ಪತ್ರೆಯಿಂದ ಸುಮಾರು 80 ಮಂದಿ ಮಹಿಳೆಯರು, ಹಸುಕಂದಮ್ಮಗಳನ್ನು ಭದ್ರತಾ ಪಡೆಗಳು ರಕ್ಷಿಸಿವೆ. ಅಪ್ಘಾನಿಸ್ತಾನದ ಒಳಾಡಳಿತ ಸಚಿವಾಲಯದ ವಕ್ತಾರ ತಾರೀಖ್ ಅರಿಯನ್ ಮಾತನಾಡಿ, "ಬಾರ್ಬಿ ಹೆರಿಗೆ ಆಸ್ಪತ್ರೆಯಲ್ಲಿ ಭಯೋತ್ಪಾದಕರು ವಿವೇಚನಾ ರಹಿತವಾಗಿ ಗುಂಡು ಹಾರಿಸಿದ ಪರಿಣಾಮ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರಲ್ಲಿ ಮಹಿಳೆಯರು, ಶಿಶುಗಳು ಕೂಡ ಸೇರಿವೆ," ಎಂದಿದ್ದಾರೆ.
'ದಿಬ್ಬಾ ರೋಟ್ಟಿ' ಮಾಡುವುದನ್ನು ಕಲಿಸಿದ ವ್ಯಕ್ತಿಗೆ 'ಗುರು ದಕ್ಷಿಣೆ' ಪಾವತಿಸಿದ ಸೆಲೆಬ್ರಿಟಿ ಚೆಫ್ ವಿಕಾಸ್ ಖನ್ನಾ