ಆ್ಯಪ್ನಗರ

ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ: 8 ಪೊಲೀಸರು ಅಮಾನತು, 45 ಮಂದಿ ಅರೆಸ್ಟ್‌!

ಕರ್ತವ್ಯ ಲೋಪ ಎಸಗಿದ ಎಂಟು ಪೊಲೀಸರನ್ನು ಭಾನುವಾರ ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿಇನ್ನೂ 45 ಆರೋಪಿಗಳನ್ನು ಬಂಧಿಸಲಾಗಿದೆ. ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ದೇವಸ್ಥಾನದ ನವೀಕರಣ ವಿರೋಧಿಸಿ ಫಜಲ್‌ ಉರ್‌ ರೆಹಮಾನ್‌ ಗುಂಪಿಗೆ ಸೇರಿದ ದುಷ್ಕರ್ಮಿಗಳು, ದೇಗುಲವನ್ನು ಧ್ವಂಸಗೊಳಿಸಿ ಬೆಂಕಿಯಿಟ್ಟಿದ್ದರು.

Vijaya Karnataka 4 Jan 2021, 8:52 am
ಪೇಶಾವರ್‌: ಪಾಕಿಸ್ತಾನದಲ್ಲಿನಡೆದ ಹಿಂದೂ ದೇಗುಲ ಧ್ವಂಸ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಎಂಟು ಪೊಲೀಸರನ್ನು ಭಾನುವಾರ ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿಇನ್ನೂ 45 ಆರೋಪಿಗಳನ್ನು ಬಂಧಿಸಲಾಗಿದೆ. ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ದೇವಸ್ಥಾನದ ನವೀಕರಣ ವಿರೋಧಿಸಿ ಫಜಲ್‌ ಉರ್‌ ರೆಹಮಾನ್‌ ಗುಂಪಿಗೆ ಸೇರಿದ ದುಷ್ಕರ್ಮಿಗಳು, ದೇಗುಲವನ್ನು ಧ್ವಂಸಗೊಳಿಸಿ ಬೆಂಕಿಯಿಟ್ಟಿದ್ದರು.
Vijaya Karnataka Web Hindu Temple Destoyed


ಈ ದೊಂಬಿ ನಡೆಸಿದ ಸುಮಾರು 350 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಘಟನೆ ಕುರಿತು ಜ. 5ರೊಳಗೆ ಮಾಹಿತಿ ನೀಡುವಂತೆ ಸ್ಥಳೀಯ ಆಡಳಿತಕ್ಕೆ ತಕೀತು ಮಾಡಿದೆ.

ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದೂಗಳ ಸಂಖ್ಯೆ 70ಲಕ್ಷದಷ್ಟಿದೆ. ತೇರಿಯ ಹಳೆ ದೇಗುಲ ಹಾಗೂ ಧಾರ್ಮಿಕ ನಾಯಕರೊಬ್ಬರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಲು ಅಲ್ಲಿನ ಹಿಂದೂಗಳು ಮುಂದಾದಾಗ, ಈ ಘಟನೆ ನಡೆದಿದೆ.

ಇಸ್ರೇಲ್ ಹೆಣೆದ ಯುದ್ಧ ಬಲೆಯಲ್ಲಿ ಬೀಳದಿರಿ: ಟ್ರಂಪ್‌ಗೆ ಇರಾನ್ ವಿದೇಶ ಮಂತ್ರಿಯ ಸಲಹೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ