ಆ್ಯಪ್ನಗರ

ಪಾಕ್‌ನಲ್ಲಿ ಆತ್ಮಾಹುತಿ ದಾಳಿಗೆ 75 ಬಲಿ

ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಪೂರ್ವಯೋಜಿತ ಭೀಕರ ಉಗ್ರ ದಾಳಿಯಲ್ಲಿ ಇಬ್ಬರು ಪತ್ರಕರ್ತರು, ಬಹುತೇಕ ವಕೀಲರು ಸೇರಿದಂತೆ 75 ಮಂದಿ ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಏಜೆನ್ಸೀಸ್ 9 Aug 2016, 4:13 am
ವಕೀಲರ ಮಾರಣಹೋಮ | ತಾಲಿಬಾನ್‌ ಉಗ್ರರ ಕೃತ್ಯ | 100ಕ್ಕೂ ಹೆಚ್ಚು ಜನರಿಗೆ ಗಾಯ |
Vijaya Karnataka Web 75 killed pakistan suicide attack
ಪಾಕ್‌ನಲ್ಲಿ ಆತ್ಮಾಹುತಿ ದಾಳಿಗೆ 75 ಬಲಿ


ಕರಾಚಿ: ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಪೂರ್ವಯೋಜಿತ ಭೀಕರ ಉಗ್ರ ದಾಳಿಯಲ್ಲಿ ಇಬ್ಬರು ಪತ್ರಕರ್ತರು, ಬಹುತೇಕ ವಕೀಲರು ಸೇರಿದಂತೆ 75 ಮಂದಿ ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದ ಖ್ಯಾತ ವಕೀಲರೊಬ್ಬರ ಸಾವಿಗೆ ಸಂತಾಪ ಸೂಚಿಸಲು ನೆರೆದಿದ್ದ ವಕೀಲರನ್ನು ಗುರಿಯಾಗಿಸಿಕೊಂಡು ತಾಲಿಬಾನ್‌ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಸರಕಾರಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ ಬಳಿಯಲ್ಲೇ ಸೊಧೀಟ ಸಂಭವಿಸಿದೆ.

8 ಕೆ ಜೆ ಸ್ಫೋಟಕ ಬಳಕೆ:

ಇದೊಂದು ಆತ್ಮಾಹುತಿ ದಾಳಿಯಾಗಿದ್ದು, 8 ಕೆ ಜಿ ಸೊಧೀಟಕ ಪದಾರ್ಥ ಬಳಸಲಾಗಿದೆ ಎಂದು ಪೊಲೀಸರು ಮತ್ತು ಬಾಂಬ್‌ ನಿಷ್ಕ್ರಿಯ ತಂಡ ಖಚಿತಪಡಿಸಿದೆ.

ಘಟನಾ ಸ್ಥಳದಲ್ಲಿ ಯಾವುದೇ ಕುಳಿ ಕಂಡುಬಾರದ ಹಿನ್ನೆಲೆಯಲ್ಲಿ, ಉಗ್ರ ಸೊಧೀಟಕ ವಸ್ತುವನ್ನು ತನ್ನ ದೇಹಕ್ಕೆ ಕಟ್ಟಿಕೊಂಡಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೊಧೀಟದ ಬೆನ್ನಲ್ಲೇ ಗುಂಡಿನ ಮೊರೆತವೂ ಕೇಳಿ ಬಂದಿದ್ದು, ಎಷ್ಟು ಉಗ್ರರು ದಾಳಿಯಲ್ಲಿ ಪಾಲ್ಗೊಂಡಿದ್ದರೆಂಬುದು ಖಚಿತಪಟ್ಟಿಲ್ಲ. ಲಾಹೋರ್‌ ದಾಳಿ ಬಳಿಕ, ಈ ವರ್ಷದಲ್ಲಿ ಪಾಕಿಸ್ತಾನದಲ್ಲಿ ನಡೆದ ಎರಡನೇ ಅತ್ಯಂತ ಭೀಕರ ಉಗ್ರರ ದಾಳಿ ಇದಾಗಿದೆ. ಪಾಕಿಸ್ತಾನದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಸಂತಾಪ ಸಭೆಯಲ್ಲಿ ಸಾವಿನ ರುದ್ರನರ್ತನ:

ಇಡೀ ಘಟನೆಯನ್ನು ಅವಲೋಕಿಸಿದರೆ ಇದೊಂದು ಪೂರ್ವಯೋಜಿತ ದಾಳಿಯಂತೆ ಕಂಡುಬಂದಿದೆ. ಸೋಮವಾರ ಬೆಳಗ್ಗೆಖ್ಯಾತ ವಕೀಲ ಹಾಗೂ ಬಲೂಚಿಸ್ತಾನ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಬಿಲಾಲ್‌ ಅನ್ವರ್‌ ಕಾಸಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರ ಮರಣೋತ್ತರ ಪರೀಕ್ಷೆ ಕ್ವೆಟ್ಟಾದ ಸಿವಿಲ್‌ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಅಲ್ಲಿ ಸುಮಾರು 200 ವಕೀಲರು ಜಮಾಯಿದ್ದರು. ವಕೀಲರನ್ನು ಗುರಿಯಾಗಿಸಿಕೊಂಡು ಎಮರ್ಜೆನ್ಸಿ ವಾರ್ಡ್‌ ಬಳಿ ಆತ್ಮಾಹುತಿ ಉಗ್ರ ಸೊಧೀಟಿಸಿಕೊಂಡಿದ್ದಾನೆ. ಸೊಧೀಟಕ್ಕೆ ಸಿಲುಕಿ ವಕೀಲರು ಪ್ರಾಣ ಕಳೆದುಕೊಂಡರು. ಆಸ್ಪತ್ರೆ ಆವರಣದಲ್ಲಿ ಸಾವು ನೋವಿನ ಆಕ್ರಂದನ ಮುಗಿಲು ಮುಟ್ಟಿತ್ತು. ಸೊಧೀಟದ ಬಳಿಕ ಅಲ್ಲಿ ಆವರಿಸಿದ್ದ ದಟ್ಟ ಹೊಗೆ ನಡುವೆ, ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹೆಣಗಳನ್ನು ತುಳಿಯುತ್ತಲೇ ಜನರು ಚೀರುತ್ತಾ ಓಡತೊಡಗಿದರು. ಸೊಧೀಟದ ತೀವ್ರತೆಗೆ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಹಲವು ವಾಹನಗಳೂ ಜಖಂಗೊಂಡಿವೆ.

ಪ್ರಧಾನಿ ಖಂಡನೆ: ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ಬಂಧನಕ್ಕೆ ಆದೇಶಿಸಿದ್ದಾರೆ. ಈ ಮಧ್ಯೆ, ಭದ್ರತಾ ವೈಫಲ್ಯವೇ ದಾಳಿಗೆ ಕಾರಣವಾಗಿದ್ದು, ಪ್ರಕರಣದ ತನಿಖೆಗೆ ಖುದ್ದು ಮುತುವರ್ಜಿ ವಹಿಸುವುದಾಗಿ ಬಲೂಚಿಸ್ತಾನ್‌ ಗೃಹ ಸಚಿವ ಸರ್ಫರಾಜ್‌ ಬುಗ್ತಿ ಹೇಳಿದ್ದಾರೆ.

ಮತ್ತಷ್ಟು ದಾಳಿ ಎಚ್ಚರಿಕೆ:

ತೆಹ್ರೀಕ್‌-ಇ-ತಾಲಿಬಾನ್‌ನ ಸಹ ಸಂಘಟನೆಯಾದ ಜಮಾತುಲ್‌ ಅಹಾರಾ ಘಟನೆಯ ಹೊಣೆ ಹೊತ್ತುಕೊಂಡಿದೆ. ಪಾಕಿಸ್ತಾನದಲ್ಲಿ ಸಂಪೂರ್ಣ ಇಸ್ಲಾಂ ವ್ಯವಸ್ಥೆ ಅಳವಡಿಸುವವರೆಗೂ ಇಂತಹ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಸಂಘಟನೆಯ ವಕ್ತಾರ ಎಚ್ಚರಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ