ವಾಷಿಂಗ್ಟನ್: ಜಾಗತಿಕ ವಾಣಿಜ್ಯ, ಭದ್ರತೆ ಮತ್ತು ಮಾನವ ಹಕ್ಕುಗಳಿಗೆ ಮುಳುವಾಗಿ ಪರಿಣಮಿಸಿರುವ ಚೀನಾ ಆಕ್ರಮಣಶೀಲತೆಯನ್ನು ಹತ್ತಿಕ್ಕಲು ಅಮೆರಿಕ ಒಳಗೊಂಡಂತೆ ಎಂಟು ರಾಷ್ಟ್ರಗಳ ನೂತನ ಒಕ್ಕೂಟ ಅಸ್ಥಿತ್ವಕ್ಕೆ ಬಂದಿದೆ.
ನೆರೆ ಹೊರೆಯ ದೇಶಗಳು ಸೇರಿದಂತೆ ಜಗತ್ತಿನ ಸಕಲ ಆಗು ಹೋಗುಗಳ ಮೇಲೆ ತನ್ನ ನಿಯಂತ್ರಣ ಸಾಧಿಸಲು ಚೀನಾ ಶತಪ್ರಯತ್ನ ನಡೆಸಿದ್ದು, ಇದಕ್ಕೆ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಿಂದ ತಕರಾರು ವ್ಯಕ್ತವಾಗಿದೆ. ಅಮೆರಿಕವಂತೂ ಇದರ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಲು ತಕ್ಕ ವೇದಿಕೆಗಾಗಿ ಹಲವು ವರ್ಷಗಳಿಂದ ಕಾಯುತ್ತ ಬಂದಿತ್ತು.
ಈಗ ಅಂತದ್ದೊಂದು ಅಂತರ್ ಸಂಸದೀಯ ಒಕ್ಕೂಟ ರಚನೆಯಾಗಿದ್ದು ಸಂತ್ರಸ್ತ ರಾಷ್ಟ್ರಗಳು ನಿಟ್ಟುಸಿರುಬಿಟ್ಟಿವೆ. ''ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ದುರಾಶೆಯ ನಡೆ ಅನುಸರಿಸುತ್ತಿದೆ. ಇದಕ್ಕೆ ವ್ಯವಸ್ಥಿತ ತಡೆ ಹಾಕಲು ಬೇಕಾದ ಕಾರ್ಯತಂತ್ರವನ್ನು ಒಕ್ಕೂಟ ರೂಪಿಸಲಿದೆ. ಹಾಂಕಾಂಗ್ ಸೇರಿದಂತೆ ಅನೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ಸಂಕಷ್ಟಕ್ಕೆ ಸಿಲುಕಿವೆ,'' ಎಂದು ಎಂಟು ರಾಷ್ಟ್ರಗಳ ಗುಂಪು ಹೇಳಿದೆ.
ಲಡಾಖ್ ಗಡಿ ಮಾತುಕತೆ ಅಪೂರ್ಣ: ಪರಿಸ್ಥಿತಿ ತಿಳಿಗೊಳಿಸಲು ಭಾರತ-ಚೀನಾ ನಿರ್ಧಾರ!
ಅಮೆರಿಕ ರಿಪಬ್ಲಿಕ್ ಸೆನೆಟರ್ ಮಾರ್ಕೊ ರುಬಿಯೊ ಮತ್ತು ಡೆಮಕ್ರಾಟ್ ಬಾಬ್ ಮೆನೆಂಡೇಜ್, ಜಪಾನಿನ ಮಾಜಿ ರಕ್ಷಣಾ ಸಚಿವ ಜನರಲ್ ನಕಟನಿ, ಯೂರೋಪ್ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯೆ ಮಿರಿಯಂ ಲಕ್ಷ್ಮಣ್ ಮತ್ತು ಇಂಗ್ಲೆಂಡ್ನ ಪ್ರಮುಖ ಕನ್ಸರ್ವೇಟಿವ್ ಸಂಸದ ಇಯಾನ್ ಡಂಕನ್ ಸ್ಮಿತ್ ನೂತನ ಒಕ್ಕೂಟದ ಸಹ ಮುಖ್ಯಸ್ಥರಾಗಿದ್ದಾರೆ.
ಮುಂಗಾರಿಗೆ 'ನಿಸರ್ಗ'ದ ಆವೇಗ: ಜೂ.8ರ ನಂತರ ರಾಜ್ಯದಲ್ಲಿ ಭರ್ಜರಿ ಮಳೆ
ನೆರೆ ಹೊರೆಯ ದೇಶಗಳು ಸೇರಿದಂತೆ ಜಗತ್ತಿನ ಸಕಲ ಆಗು ಹೋಗುಗಳ ಮೇಲೆ ತನ್ನ ನಿಯಂತ್ರಣ ಸಾಧಿಸಲು ಚೀನಾ ಶತಪ್ರಯತ್ನ ನಡೆಸಿದ್ದು, ಇದಕ್ಕೆ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಿಂದ ತಕರಾರು ವ್ಯಕ್ತವಾಗಿದೆ. ಅಮೆರಿಕವಂತೂ ಇದರ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಲು ತಕ್ಕ ವೇದಿಕೆಗಾಗಿ ಹಲವು ವರ್ಷಗಳಿಂದ ಕಾಯುತ್ತ ಬಂದಿತ್ತು.
ಈಗ ಅಂತದ್ದೊಂದು ಅಂತರ್ ಸಂಸದೀಯ ಒಕ್ಕೂಟ ರಚನೆಯಾಗಿದ್ದು ಸಂತ್ರಸ್ತ ರಾಷ್ಟ್ರಗಳು ನಿಟ್ಟುಸಿರುಬಿಟ್ಟಿವೆ. ''ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ದುರಾಶೆಯ ನಡೆ ಅನುಸರಿಸುತ್ತಿದೆ. ಇದಕ್ಕೆ ವ್ಯವಸ್ಥಿತ ತಡೆ ಹಾಕಲು ಬೇಕಾದ ಕಾರ್ಯತಂತ್ರವನ್ನು ಒಕ್ಕೂಟ ರೂಪಿಸಲಿದೆ. ಹಾಂಕಾಂಗ್ ಸೇರಿದಂತೆ ಅನೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ಸಂಕಷ್ಟಕ್ಕೆ ಸಿಲುಕಿವೆ,'' ಎಂದು ಎಂಟು ರಾಷ್ಟ್ರಗಳ ಗುಂಪು ಹೇಳಿದೆ.
ಲಡಾಖ್ ಗಡಿ ಮಾತುಕತೆ ಅಪೂರ್ಣ: ಪರಿಸ್ಥಿತಿ ತಿಳಿಗೊಳಿಸಲು ಭಾರತ-ಚೀನಾ ನಿರ್ಧಾರ!
ಅಮೆರಿಕ ರಿಪಬ್ಲಿಕ್ ಸೆನೆಟರ್ ಮಾರ್ಕೊ ರುಬಿಯೊ ಮತ್ತು ಡೆಮಕ್ರಾಟ್ ಬಾಬ್ ಮೆನೆಂಡೇಜ್, ಜಪಾನಿನ ಮಾಜಿ ರಕ್ಷಣಾ ಸಚಿವ ಜನರಲ್ ನಕಟನಿ, ಯೂರೋಪ್ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯೆ ಮಿರಿಯಂ ಲಕ್ಷ್ಮಣ್ ಮತ್ತು ಇಂಗ್ಲೆಂಡ್ನ ಪ್ರಮುಖ ಕನ್ಸರ್ವೇಟಿವ್ ಸಂಸದ ಇಯಾನ್ ಡಂಕನ್ ಸ್ಮಿತ್ ನೂತನ ಒಕ್ಕೂಟದ ಸಹ ಮುಖ್ಯಸ್ಥರಾಗಿದ್ದಾರೆ.
ಮುಂಗಾರಿಗೆ 'ನಿಸರ್ಗ'ದ ಆವೇಗ: ಜೂ.8ರ ನಂತರ ರಾಜ್ಯದಲ್ಲಿ ಭರ್ಜರಿ ಮಳೆ