ಆ್ಯಪ್ನಗರ

ರಾಮ ಮಂದಿರ ನಿರ್ಮಾಣದಿಂದ ಭಾರತ-ಬಾಂಗ್ಲಾ ಸಂಬಂಧಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ: ಬಾಂಗ್ಲಾದೇಶ

ಉಭಯ ದೇಶಗಳ ನಡುವೆ ಕೋಮು ಸಾಮರಸ್ಯ ಕಾಯುವ ಒಪ್ಪಂದಗಳಿವೆ. ಅವು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಮ ಮಂದಿರ ನಿರ್ಮಾಣದಿಂದ ಭಾರತ-ಬಾಂಗ್ಲಾ ನಡುವಿನ ಸುಮಧುರ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಅಗತ್ಯ ಇದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್‌ ಮನವಿ ಮಾಡಿದ್ದಾರೆ.

TIMESOFINDIA.COM 28 Jul 2020, 10:06 am
ಢಾಕಾ: ರಾಮ ಮಂದಿರ ನಿರ್ಮಾಣದಿಂದ ಭಾರತ-ಬಾಂಗ್ಲಾ ನಡುವಿನ ಸುಮಧುರ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಅಗತ್ಯ ಇದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್‌ ಸೋಮವಾರ ಹೇಳಿದ್ದಾರೆ. ''ಉಭಯ ದೇಶಗಳ ನಡುವೆ ಕೋಮು ಸಾಮರಸ್ಯ ಕಾಯುವ ಒಪ್ಪಂದಗಳಿವೆ. ಅವು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
Vijaya Karnataka Web india-bangla-bccl


ವಿಶೇಷವಾಗಿ ಮಂದಿರ ನಿರ್ಮಾಣದ ವೇಳೆ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೆಚ್ಚಿನ ಹೊಣೆ ಭಾರತದ ಹೆಗಲ ಮೇಲಿದೆ. ಪ್ರಧಾನಿ ಶೇಖ್‌ ಹಸೀನಾ ಅವರು ಈಗಾಗಲೇ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಈ ಕುರಿತು ಸಲಹೆ ನೀಡಿದ್ದಾರೆ,'' ಎಂದು ಮೊಮೆನ್‌ ವಿವರಿಸಿದ್ದಾರೆ.

''ಮಂದಿರ ನಿರ್ಮಾಣವು ಭಾರತದ ಆಂತರಿಕ ವಿಷಯವೇ ಆಗಿದ್ದರೂ ಅದರಿಂದ ಬಾಂಗ್ಲಾದ ಜನರ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಅದು ಹೆಚ್ಚು ಘಾಸಿಗೆ ದಾರಿ ಮಾಡಿಕೊಡದ ರೀತಿಯಲ್ಲಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಈ ಒಂದು ವಿಷಯದಿಂದ ನಮ್ಮ ನಡುವಿನ ಅತ್ಯುತ್ತಮ ಬಾಂಧವ್ಯ ಹಾಳಾಗಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ,'' ಎಂದು ಮೆಮೊನ್‌ ಹೇಳಿದ್ದಾರೆ.

ಆಮದಿಗೆ ಬ್ರೇಕ್‌: ಔಷಧ, ವೈದ್ಯಕೀಯ ಸಲಕರಣೆ ಉತ್ಪಾದನೆಯ ಸ್ವಾವಲಂಬನೆ ಯೋಜನೆಗೆ ಕೇಂದ್ರ ಸರಕಾರ ಚಾಲನೆ!
ಮುಂದಿನ ತಿಂಗಳು ಆಗಸ್ಟ್ 5 ರಂದು ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ ಈ ಬಗ್ಗೆ ಸಮಿತಿ ಘೋಷಣೆ ಮಾಡಿದೆ. ಈ ಬೆನ್ನಲ್ಲೆ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ