ಆ್ಯಪ್ನಗರ

ಶವ ಹೂಳಲು ಗುಂಡಿ ತೋಡಿ, ನೆರೆದವರಿಗೆ ಮಹಾಪ್ರಸಾದ ವಿತರಿಸಿ ನೆರವಾದ ಸಿಖ್‌ ಸಮುದಾಯ

Indiatimes 16 Mar 2019, 2:07 pm
ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ನಗರ ಕ್ರೈಸ್ಟ್‌ ಚರ್ಚ್‌ನ ಕೇಂದ್ರ ವಲಯ ಹಾಗೂ ಹೊರ ವಲಯದಲ್ಲಿರುವ ಮಸೀದಿಗಳ ಮೇಲೆ ಶುಕ್ರವಾರ ಉಗ್ರವಾದಿಗಳು ನಡೆಸಿದ ಭೀಕರ ದಾಳಿ ನಂತರ ನೆರವಿಗೆ ದೌಡಾಯಿಸಿದ ಅಲ್ಲಿನ ಸಿಖ್‌ ಸಮುದಾಯ ಮೃತದೇಹಗಳನ್ನು ಸಾಗಿಸುವುದರಿಂದ ಉಚಿತ ಆಹಾರ ಒದಗಿಸುವವರೆಗೆ ಎಲ್ಲಾ ರೀತಿಯಿಂದಲೂ ನೆರವಾಗಿದೆ.
Vijaya Karnataka Web Guru Nanak Free Kitchen


ಆಕ್‌ಲೆಂಡ್‌ನ ಗುರುನಾನಕ್‌ ಫ್ರೀ ಕಿಚನ್‌ ಎಂಬ ಎನ್‌ಜಿಒ ಸಂಸ್ಥೆ ಸಂತ್ರಸ್ಥರಿಗೆ ಹಲವು ರೀತಿಯಲ್ಲಿ ನೆರವು ಒದಗಿಸಿದೆ. ಭಯೋತ್ಪಾದಕರ ದಾಳಿಯಿಂದ ಸಂಬಂಧಿಕರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದೆ.

ಫೇಸ್‌ಬುಕ್‌ನಲ್ಲಿ ಉಗ್ರರ ದಾಳಿ ಸಂತ್ರಸ್ತರಿಗೆ ನೆರವಾಗುವಂತೆ ಮುಸ್ಲಿಂ ಪ್ರತಿನಿಧಿಗಳು ಮನವಿ ಮಾಡುತ್ತಿದ್ದಂತೆ ಸ್ಥಳಕ್ಕೆ ಗುರು ನಾನಕ್‌ ಫ್ರೀ ಕಿಚನ್‌ ತಂಡ ದೌಡಾಯಿಸಿದೆ. ಮೃತದೇಹಗಳನ್ನು ಸ್ವಚ್ಛಗೊಳಿಸಿ, ಕೌಟುಂಬಿಕರ ಮನೆಗೆ ಶವಗಳನ್ನು ಸಾಗಿಸಿ ಮತ್ತು ಅಲ್ಲಿಂದ ಶವ ಸಂಸ್ಕಾರದ ವರೆಗೆ ಕೊಂಡೊಯ್ದು, ಶವ ಹೂಳಲು ಗುಂಡಿ ತೋಡಿ, ನೆರದವರಿಗೆ ಮಹಾಪ್ರಸಾದವನ್ನು ವಿತರಿಸಿ ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ.


ಸಿಖ್‌ ಸಮುದಾಯದ ನೆರವಿಗೆ ಕೃತಜ್ಞತೆ ಸಲ್ಲಿಸಿದ ಮುಸ್ಲಿಂ ಸಮುದಾಯ ಫೇಸ್‌ಬುಕ್‌ನಲ್ಲಿ ಧನ್ಯವಾದ ಸಲ್ಲಿಸಿ ಪೋಸ್ಟ್‌ ಹಾಕಿದೆ. ಗುರು ನಾನಕ್‌ ಫ್ರೀ ಕಿಚನ್‌ ಏಪ್ರಿಲ್‌ 2017ರಲ್ಲಿ ಸ್ಥಾಪನೆ ಗೊಂಡಿದೆ ಎಂದು ಫೇಸ್‌ಬುಕ್‌ ಮೂಲಕ ತಿಳಿದು ಬಂದಿದೆ. ಆಕ್‌ಲೆಂಡ್‌ನಲ್ಲಿ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತ, ಇಂತಹ ಸೇವೆಗಳನ್ನು ಸಲ್ಲಿಸಲು ಸಿಖ್‌ ಯುವಕರಿಗೆ ಸಂಸ್ಥೆ ಉತ್ತೇಜನ ನೀಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ