ಆ್ಯಪ್ನಗರ

ಹಣ ಗಳಿಸಲೆಂದು ಲಂಡನ್‌ಗೆ ತೆರಳಿದ್ದ ಬೆಂಗಳೂರಿನ ವ್ಯಕ್ತಿ ಕೊರೊನಾಗೆ ಬಲಿ

ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಏಪ್ರಿಲ್‌ 11ರಂದು ಕೊನೆಯುಸಿರೆಳೆದರು. ಇದಕ್ಕೆ ಎರಡು ದಿನಗಳ ಮುಂಚೆ ಪತ್ನಿ ಸುಸೈ ಜತೆ ವಿಡಿಯೋ ಕಾಲ್‌ ಮೂಲಕ ಮಾತನಾಡಿದ್ದ ರಾಜೇಶ್‌ ಜಯಶೀಲನ್‌, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು.

Vijaya Karnataka Web 18 Apr 2020, 1:55 pm
ಲಂಡನ್‌: ಹಣ ಗಳಿಸಲೆಂಬ ಆಶಯದೊಂದಿಗೆ ವಿದೇಶಕ್ಕೆ ತೆರಳಿದ್ದ ಭಾರತೀಯ ಅದರಲ್ಲೂ ಬೆಂಗಳೂರಿಗೊಬ್ಬರು ಈಗ ಕೊರೊನಾ ಕಬಂಧ ಬಾಹುಗಳಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
Vijaya Karnataka Web ರಾಜೇಶ್ ಜಯಶೀಲನ್
ರಾಜೇಶ್ ಜಯಶೀಲನ್


ಲಂಡನ್‌ನಲ್ಲಿ ಊಬರ್‌ ಚಾಲಕರಾದ ರಾಜೇಶ್‌ ಜಯಶೀಲನ್‌ ಮೃತಪಟ್ಟ ವ್ಯಕ್ತಿ.

ಇವರು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರಾಗಿದ್ದ ರಾಜೇಶ್‌ ಕಳೆದ ಕೆಲವು ದಿನಗಳಿಂದ ಕೊರೊನಾಗೆ ತುತ್ತಾಗಿದ್ದರು.

ವಿಮಾನ ನಿಲ್ದಾಣದಿಂದ ಕೆಲವರನ್ನು ಕರೆದುಕೊಂಡು ಹೋಗಿದ್ದ ರಾಜೇಶ್‌ ನಂತರ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದರು.

ಕಳೆದ ಏಪ್ರಿಲ್‌ 11ರಂದು ರಾಜೇಶ್‌ ಜಯಶೀಲನ್‌ ಮೃತಪಟ್ಟರು. ರಾಜೇಶ್‌ ಇತ್ತೀಚೆಗೆ ನಾರ್ಥ್‌ವಿಕ್‌ ಪಾರ್ಕ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಏಪ್ರಿಲ್‌ 11ರಂದು ಕೊನೆಯುಸಿರೆಳೆದರು. ಇದಕ್ಕೆ ಎರಡು ದಿನಗಳ ಮುಂಚೆ ಪತ್ನಿ ಸುಸೈ ಜತೆ ವಿಡಿಯೋ ಕಾಲ್‌ ಮೂಲಕ ಮಾತನಾಡಿದ್ದ ರಾಜೇಶ್‌ ಜಯಶೀಲನ್‌, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು.

12 ವರ್ಷಗಳ ಹಿಂದೆ ಹಣ ಗಳಿಸುವ ಉದ್ದೇಶದಿಂದ ಲಂಡನ್‌ಗೆ ರಾಜೇಶ್‌ ಜಯಶೀಲನ್‌ ತೆರಳಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದ ರಾಜೇಶ್‌ ಚಾಲಕರಾಗಿ ಲಂಡನ್‌ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ರಾಜೇಶ್‌ ಜನವರಿಯಲ್ಲಿ ಲಂಡನ್‌ಗೆ ಮರಳಿದ್ದರು.

ಮಾರ್ಚ್‌ 25ರಂದು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದ ನಂತರ ಕೊರೊನಾ ಸೋಂಕಿಗೆ ಒಳಗಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ