ಆ್ಯಪ್ನಗರ

ಮಲ್ಯ ಪಲಾಯನಕ್ಕೂ ಮುನ್ನ ಬಿಜೆಪಿ ನಾಯಕರ ಭೇಟಿ: ರಾಹುಲ್‌ ಗಾಂಧಿ ಹೊಸ ಆರೋಪ

ಉದ್ಯಮಿ ವಿಜಯ್‌ ಮಲ್ಯ 9,000 ಕೋಟಿ ರೂ. ಸಾಲ ಮಾಡಿ ಹಿಂದಿರುಗಿಸದೆ ಭಾರತ ಬಿಟ್ಟು ಪಲಾಯನ ಮಾಡುವ ಮುನ್ನ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

Times Now 26 Aug 2018, 3:49 pm
ಲಂಡನ್‌: ಉದ್ಯಮಿ ವಿಜಯ್‌ ಮಲ್ಯ 9,000 ಕೋಟಿ ರೂ. ಸಾಲ ಮಾಡಿ ಹಿಂದಿರುಗಿಸದೆ, ಭಾರತ ಬಿಟ್ಟು ಪಲಾಯನ ಮಾಡುವ ಮುನ್ನ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
Vijaya Karnataka Web Rahul Gandhi


4 ದಿನಗಳ ಜರ್ಮನಿ ಮತ್ತು ಇಂಗ್ಲೆಂಡ್‌ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ಶನಿವಾರ ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟದ ಸದಸ್ಯರ ಜತೆ ನಡೆಸಿದ ಮಾತುಕತೆ ಸಂದರ್ಭ ಹೊಸ ಆರೋಪ ಮಾಡಿದ್ದಾರೆ. ಭಾರತವನ್ನು ಬಿಟ್ಟು ಪಲಾಯನ ಮಾಡುವ ಮೊದಲು ಬಿಜೆಪಿಯ ಹಿರಿಯ ನಾಯಕರನ್ನು ವಿಜಯ್‌ ಮಲ್ಯಾ ಭೇಟಿ ಮಾಡಿದ್ದರು. ಅದಕ್ಕೆ ದಾಖಲೆಗಳು ಇವೆ ಎಂದಿದ್ದಾರೆ. ಆದರೆ ನಾಯಕರ ಹೆಸರು ಹೇಳಲು ನಿರಾಕರಿಸಿದ್ದಾರೆ.

ಮಲ್ಯಾ ಪ್ರಕರಣದ ಕುರಿತಾಗಿ ಮೋದಿ ಸರಕಾರದ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ರಾಹುಲ್‌ ಗಾಂಧಿ ಬಿಜೆಪಿ ವಿರುದ್ಧ ಹೊಸ ಆರೋಪ ಮಾಡಿದ್ದಾರೆ. ಮುಂಬೈನ ಆರ್ಥರ್‌ ರೋಡ್‌ ಜೈಲಿನ ವೀಡಿಯೋ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿ, ಭಾರತೀಯ ಜೈಲುಗಳು ಮಲ್ಯಾರಂತವರಿಗೆ ಯೋಗ್ಯವಾಗಿವೆ. ಕಾನೂನು ಎಲ್ಲರಿಗೂ ಸಮನಾಗಿರಬೇಕು. ಕೇವಲ ವಿಜಯ್‌ ಮಲ್ಯ ಎಂಬ ಕಾರಣಕ್ಕೆ ವಿಶೇಷವಾಗಿ ನಡೆಸಿಕೊಳ್ಳುವುದು ಸ್ವಾಗತಾರ್ಹವಲ್ಲ ಎಂದು ರಾಹುಲ್‌ ತಿಳಿಸಿದ್ದಾರೆ.

ಮಾರ್ಚ್‌ 2, 2016ರಂದು ವಿಜಯ್‌ ಮಲ್ಯ ಭಾರತದಿಂದ ಪಲಾಯನಗೈದು, ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ