ಆ್ಯಪ್ನಗರ

ಸೇನಾ ದಂಗೆ: ಮ್ಯಾನ್ಮಾರ್‌ ಮಿಲಿಟರಿ ನಾಯಕರಿಗೆ ಆಸ್ತಿ ಬಳಕೆಗೆ ನಿರ್ಬಂಧ ಹೇರಿದ ಜೋ ಬಿಡೆನ್‌!

ಬರ್ಮಾದ ಜನರು ತಮ್ಮ ಧ್ವನಿ ಏನೆಂಬುದನ್ನು ಕೇಳಿಸುವಂತೆ ಗಟ್ಟಿಯಾಗಿ ಹೇಳುತ್ತಿದ್ದಾರೆ. ಜಗತ್ತು ಇದನ್ನು ನೋಡುತ್ತಿದೆ. ಬರ್ಮಾದ ಜನರು ತಮ್ಮ ಧ್ವನಿ ಏನೆಂಬುದನ್ನು ಕೇಳಿಸುವಂತೆ ಗಟ್ಟಿಯಾಗಿ ಹೇಳುತ್ತಿದ್ದಾರೆ. ಜಗತ್ತು ಇದನ್ನು ನೋಡುತ್ತಿದೆ ಎಂದು ಜೋ ಬಿಡೆನ್ ತಿಳಿಸಿದರು. ಇನ್ನಷ್ಟು ನಿರ್ಬಂಧಗಳ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 11 Feb 2021, 8:51 am
ವಾಷಿಂಗ್ಟನ್: ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ ಮೂಲಕ ರಾಜಕೀಯ ಅಸ್ಥಿತ್ವಕ್ಕೆ ಕಾರಣವಾಗಿರುವ ಅಲ್ಲಿನ ಸೇನೆ ವಿರುದ್ಧ ದೇಶದೆಲ್ಲೆಡೆ ಜನರು ಬೀದಿಗಿಳಿದು ಪ್ರತಿಭಟಿಸುತ್ತಿರುವ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಮಿಲಿಟರಿ ನಾಯಕರ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದ್ದಾರೆ. ಆಂಗ್ ಸಾನ್ ಸೂಕಿ ಮತ್ತಿತರ ನಾಯಕರನ್ನು ಬಂಧಿಸಿ ಸೇನಾ ದಂಗೆ ಮೂಲಕ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ಅಸ್ತಿತ್ವಕ್ಕೆ ಬಂದಿದೆ. ಈ ಕ್ರಮವನ್ನು ವಿರೋಧಿಸಿ ಇಲ್ಲಿನ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
Vijaya Karnataka Web Joe Biden


ಈ ಹಿಂದಿನ ರಾಜಕೀಯ ಜೀವನ ವಾಪಸ್‌ಗೆ ಒತ್ತಾಯಿಸುತ್ತಿದ್ದಾರೆ. "ಇಂದು ನಾನು ದಂಗೆಯ ನಾಯಕರ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದೇನೆ. ಮ್ಯಾನ್ಮಾರ್‌ನ ಜನರಲ್‌ಗಳು ಅಮೆರಿಕದ 1 ಬಿಲಿಯನ್ ಡಾಲರ್ ಆಸ್ತಿಯ ಬಳಕೆಯನ್ನು ನಿರ್ಬಂಧಿಸುತ್ತಿದ್ದೇನೆ ಎಂದು ಬೈಡನ್ ಹೇಳಿದ್ದಾರೆ. ಅಲ್ಲದೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಮತ್ತಷ್ಟು ಕ್ರಮಗಳು ಸದ್ಯದಲ್ಲೇ ಬರಲಿವೆ ಎಂದು ಎಚ್ಚರಿಕೆ ನೀಡಿದರು. ಹೊಸ ನಿರ್ಬಂಧಗಳು ಮ್ಯಾನ್ಮಾರ್‌ನ ಮಿಲಿಟರಿ ಮುಖಂಡರಿಗೆ ಅನುಕೂಲವಾಗುವ ಅಮೆರಿಕ ಸ್ವತ್ತುಗಳನ್ನು ಸ್ಥಗಿತಗೊಳಿಸಲು ನಮ್ಮ ಆಡಳಿತಕ್ಕೆ ಅನುವು ಮಾಡಿಕೊಡುತ್ತದೆ.

ಇದೇ ಸಮಯದಲ್ಲಿ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ನಾಗರಿಕ ಸಮಾಜದ ಗುಂಪುಗಳು ಮತ್ತು ಮ್ಯಾನ್ಮಾರ್ ದೇಶದ ಜನರಿಗೆ ಅನುಕೂಲವಾಗುವ ಇತರ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಬೆಂಬಲವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದರು. ಈ ವಾರದ ಅಂತ್ಯದಲ್ಲಿ ನಿರ್ಬಂಧಗಳ ನಿರ್ದಿಷ್ಟ ಗುರಿಗಳನ್ನು ಗುರುತಿಸಲು ಆಡಳಿತವು ಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ. ಬರ್ಮಾದ ಜನರು ತಮ್ಮ ಧ್ವನಿ ಏನೆಂಬುದನ್ನು ಕೇಳಿಸುವಂತೆ ಗಟ್ಟಿಯಾಗಿ ಹೇಳುತ್ತಿದ್ದಾರೆ.

ದಕ್ಷಿಣ ಪೆಸಿಫಿಕ್‌ ಮಹಾಸಾಗರದಲ್ಲಿ ಪ್ರಬಲ ಭೂಕಂಪ, ಹಲವು ದೇಶಗಳತ್ತ ಸುನಾಮಿ ಅಲೆ

ಜಗತ್ತು ಇದನ್ನು ನೋಡುತ್ತಿದೆ. ಬರ್ಮಾದ ಜನರು ತಮ್ಮ ಧ್ವನಿ ಏನೆಂಬುದನ್ನು ಕೇಳಿಸುವಂತೆ ಗಟ್ಟಿಯಾಗಿ ಹೇಳುತ್ತಿದ್ದಾರೆ. ಜಗತ್ತು ಇದನ್ನು ನೋಡುತ್ತಿದೆ ಎಂದು ತಿಳಿಸಿದರು. ವಾರಗಳ ಹಿಂದೆ ಇಲ್ಲಿನ ಮಿಲಿಟರಿ ಸೇನೆ ದಂಗೆ ನಡೆಸಿದೆ. ಮೊದಲು ಮ್ಯಾನ್ಮಾರ್‌ ಆಡಳಿತ ಪಕ್ಷದ ಪ್ರಮುಖ ನಾಯಕಿಯಾಗಿರುವ ಆಂಗ್ ಸಾನ್ ಸೂಕಿ ಹಾಗೂ ಇನ್ನಿತರ ನಾಯಕರನ್ನು ಅರೆಸ್ಟ್‌ ಮಾಡಿದ ಸೇನೆ ನಂತರ ಇಲ್ಲಿನ ಆಡಳಿತದ ಚುಕ್ಕಾಣಿ ಹಿಡಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ