ಆ್ಯಪ್ನಗರ

ಭಾರತ ಮೂಲದ ವಿವೇಕ್‌ ಮೂರ್ತಿಯನ್ನು ಕೊರೊನಾ ವಿರುದ್ಧ ಹೋರಾಡುವ ಸಮಿತಿಗೆ ಆಯ್ಕೆ ಮಾಡಿದ ಬಿಡೆನ್‌!

ಸದ್ಯ ಕೊರೊನಾ ಅಮೆರಿಕದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು ಈಗಾಗಲೇ 274,000 ಮಂದಿಯನ್ನು ಬಲಿ ಪಡೆದುಕೊಂಡಿದೆ. ಮುಂದಿವ ವರ್ಷ ಜನವರಿ 20ರಂದು ಜೋ ಬಿಡನ್‌ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಕೊರೊನಾ ವಿರುದ್ಧದ ಹೋರಾಟಕ್ಕೆ ಜೆಫ್‌ ಝೆಂಟ್ಸ್‌ ಮತ್ತು ವಿವೇಕ್ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

Vijaya Karnataka Web 4 Dec 2020, 2:16 pm
ವಾಷಿಂಗ್ಟನ್‌: ಕೊರೊನಾ ವಿರುದ್ಧ ಹೋರಾಟಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್‌ ಇದೀಗ ಅಧಿಕಾರಿಗಳ ನೇಮಕಕ್ಕೆ ಮುಂದಾಗಿದ್ದಾರೆ. ಇದರ ಪ್ರಮುಖ ಭಾಗವಾಗಿ ಜೆಫ್‌ ಝೆಂಟ್ಸ್‌ ಮತ್ತು ವಿವೇಕ್ ಮೂರ್ತಿ ಅವರನ್ನು ಅವರು ಆಯ್ಕೆ ಮಾಡಿದ್ದಾರೆ. ಇವರಿಬ್ಬರು ಮಾಜಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಸಮಯದಲ್ಲಿ ಆಡಳಿತ ಅಧಿಕಾರಿಗಳಾಗಿದ್ದರು.
Vijaya Karnataka Web vivek murthy


ಇನ್ನು ಈ ಪೈಕಿ ಜೆಫ್‌ ಝೆಂಟ್ಸ್‌ ಅವರನ್ನು ಶ್ವೇತಭವನದ ಕೊರೊನಾವೈರಸ್ ಸಂಯೋಜಕರಾಗಿ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ಭಾರತ ಮೂಲದ ವಿವೇಕ್ ಮೂರ್ತಿ ಅವರಿಗೂ ಕೊರೊನಾ ವಿರುದ್ಧದ ಹೋರಾಟಕ್ಕೆ ರಚಿಸಿರುವ ಸಮಿತಿಯಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಮೂಲಗಳ ಪ್ರಕಾರ ಒಬಾಮಾ ಅವರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಅಧಿಕಾರಿಗಳ ಆಯ್ಕೆ ಬಗ್ಗೆ ಸದ್ಯ ಬಿರುಸಿನ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಮುಂದಿನ ಆಡಳಿತ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಹಾಗೂ ಸಮತೋಲನ ಕಾಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಆರ್ಥಿಕ ಪರಿಣಿತ ಜೆಫ್‌ ಝೆಂಟ್ಸ್‌ !
ಒಬಾಮಾ ಅವಧಿಯಲ್ಲಿ ಅತ್ಯುತ್ತಮ ಆಡಳಿತಗಾರನಾಗಿ ಹೊರಹೊಮ್ಮಿದ ಕೀರ್ತಿ ಜೆಫ್‌ ಝೆಂಟ್ಸ್‌ಗಿದೆ. ಆರ್ಥಿಕತೆ ಸೇರಿ ಎಲ್ಲಾ ವಿಚಾರಗಳಲ್ಲಿಯು ಪಾಂಡಿತ್ಯ ಹೊಂದಿರುವ ಜೆಫ್‌ ಝೆಂಟ್ಸ್‌ ಆಯ್ಕೆ ಹಿಂದೆ ಹಲವು ಲೆಕ್ಕಚಾರಗಳಿವೆ. ಸದ್ಯ ಕೊರೊನಾದಿಂದ ಅಮೆರಿಕದ ಆರ್ಥಿಕತೆ ಹದಗೆಟ್ಟಿದೆ ಇದನ್ನು ಎತ್ತುವ ಕೆಲಸವಾಗಬೇಕಿದೆ.

ಆರದ ಗಾಯ: ಚೀನಿ ಕಮ್ಯೂನಿಸ್ಟ್ ಸದಸ್ಯರಿಗೆ ಪ್ರವೇಶ ನಿಯಮ ಬಿಗಿಗೊಳಿಸಿದ ಅಮೆರಿಕ!

ಒಂದು ವೇಳೆ ಕೊರೊನಾ ನಿಯಂತ್ರಣದಲ್ಲಿ ಜೆಫ್‌ ಝೆಂಟ್ಸ್‌ ಯಶಸ್ವಿಯಾದರೆ ಮುಂದಿನ ಆರ್ಥಿಕತೆ ಸಂಬಂಧಪಟ್ಟ ಸಮಿತಿಯಲ್ಲೂ ಅವಕಾಶ ಸಿಗಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ಸದ್ಯ ಕೊರೊನಾ ಅಮೆರಿಕದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು ಈಗಾಗಲೇ 274,000 ಮಂದಿಯನ್ನು ಬಲಿ ಪಡೆದುಕೊಂಡಿದೆ. ಮುಂದಿವ ವರ್ಷ ಜನವರಿ 20ರಂದು ಜೋ ಬಿಡನ್‌ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ