ಕೈರೋ: ಈಜಿಪ್ಟ್ನ ಉತ್ತರ ಭಾಗದ ಸಿನಾಯ್ ಪ್ರಾಂತ್ಯದ ಮಸೀದಿಯಲ್ಲಿ ನಡೆದಿದ್ದ ಸ್ಪೋಟದಲ್ಲಿ ಮೃತರ ಸಂಖ್ಯೆ ಏರಿಕೆಯಾಗಿದ್ದು, ಮಾಧ್ಯಮಗಳ ವರದಿ ಪ್ರಕಾರ ಮೃತರ ಸಂಖ್ಯೆ 235 ದಾಟಿದೆ.
ಎಲ್-ಆರಿಷ್ ಪ್ರಾಂತ್ಯದ ರಾಜಧಾನಿಯಿಂದ 40 ಕಿ.ಮೀ ದೂರದ ರಾವ್ಡಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ದಾಳಿ ನಡೆಸಿದ್ದಾರೆ. ಬಳಿಕ ಮಸೀದ ನಾಲ್ಕೂ ಕಡೆಯಿಂದ ಆಫ್ರೋಡ್ ಗಾಡಿಯಲ್ಲಿ ನಿಂತು ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾರೆ.
ಸರಕಾರಿ ಸ್ವಾಮ್ಯದ ಅಲ್-ಅಹ್ರಮ್ ಪತ್ರಿಕೆ ತನ್ನ ವೆಬ್ಸೈಟ್ನಲ್ಲಿ ಈ ವರದಿ ಮಾಡಿದ್ದು. ನಾಲ್ಕು ವರ್ಷಗಳಿಂದ ಭಯೋತ್ಪಾದಕರ ದಾಳಿ ಎದುರಿಸುತ್ತಿರುವ ಈಜಿಪ್ಟ್ನಲ್ಲಿ ಇಂದು ನಡೆದ ದಾಳಿ ಅತಿ ಭೀಕರ ಎಂದು ಹೇಳಲಾಗಿದೆ. ಘಟನೆಯಲ್ಲಿ ಕನಿಷ್ಠ 235 ಮಂದಿ ಮೃತಪಟ್ಟು 109ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Strongly condemn the barbaric terrorist attack on a place of worship in Egypt. Our deep condolences at the loss of innocent lives. India resolutely supports the fight against all forms of terrorism and stands with the people as well as Government of Egypt. — Narendra Modi (@narendramodi) November 24, 2017 ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿ ಟ್ವೀಟ್ ಮಾಡಿದ್ದಾರೆ. ಈಜಿಪ್ಟ್ನಲ್ಲಿ ನಡೆಯುತ್ತಿರುವ ಉಗ್ರರ ದಾಳಿಯಿಂದ ರಕ್ಷಿಸಿಕೊಳ್ಳಲು ಯಾವುದೇ ಸಹಾಯಕ್ಕೂ ಭಾರತ ಸಿದ್ಧ ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.
ದಾಳಿಯ ಸುದ್ದಿ ತಿಳಿದ ಕೂಡಲೇ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದಾರೆ ಎಂದು ಸರಕಾರಿ ಟಿವಿ ವರದಿ ಮಾಡಿದೆ.
ಉತ್ತರ ಸಿನಾಯ್ ಪ್ರಾಂತ್ಯದಲ್ಲಿ ಈಜಿಪ್ಟ್ ಐಸಿಸ್ ಉಗ್ರರ ಜತೆ ಕದನ ನಡೆಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ನೂರಾರು ಪೊಲೀಸರು ಹಾಗೂ ಸೈನಿಕರು ಮೃತಪಟ್ಟಿದ್ದಾರೆ.
ಎಲ್-ಆರಿಷ್ ಪ್ರಾಂತ್ಯದ ರಾಜಧಾನಿಯಿಂದ 40 ಕಿ.ಮೀ ದೂರದ ರಾವ್ಡಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ದಾಳಿ ನಡೆಸಿದ್ದಾರೆ. ಬಳಿಕ ಮಸೀದ ನಾಲ್ಕೂ ಕಡೆಯಿಂದ ಆಫ್ರೋಡ್ ಗಾಡಿಯಲ್ಲಿ ನಿಂತು ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾರೆ.
ಸರಕಾರಿ ಸ್ವಾಮ್ಯದ ಅಲ್-ಅಹ್ರಮ್ ಪತ್ರಿಕೆ ತನ್ನ ವೆಬ್ಸೈಟ್ನಲ್ಲಿ ಈ ವರದಿ ಮಾಡಿದ್ದು. ನಾಲ್ಕು ವರ್ಷಗಳಿಂದ ಭಯೋತ್ಪಾದಕರ ದಾಳಿ ಎದುರಿಸುತ್ತಿರುವ ಈಜಿಪ್ಟ್ನಲ್ಲಿ ಇಂದು ನಡೆದ ದಾಳಿ ಅತಿ ಭೀಕರ ಎಂದು ಹೇಳಲಾಗಿದೆ. ಘಟನೆಯಲ್ಲಿ ಕನಿಷ್ಠ 235 ಮಂದಿ ಮೃತಪಟ್ಟು 109ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Strongly condemn the barbaric terrorist attack on a place of worship in Egypt. Our deep condolences at the loss of innocent lives. India resolutely supports the fight against all forms of terrorism and stands with the people as well as Government of Egypt. — Narendra Modi (@narendramodi) November 24, 2017 ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿ ಟ್ವೀಟ್ ಮಾಡಿದ್ದಾರೆ. ಈಜಿಪ್ಟ್ನಲ್ಲಿ ನಡೆಯುತ್ತಿರುವ ಉಗ್ರರ ದಾಳಿಯಿಂದ ರಕ್ಷಿಸಿಕೊಳ್ಳಲು ಯಾವುದೇ ಸಹಾಯಕ್ಕೂ ಭಾರತ ಸಿದ್ಧ ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.
ದಾಳಿಯ ಸುದ್ದಿ ತಿಳಿದ ಕೂಡಲೇ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದಾರೆ ಎಂದು ಸರಕಾರಿ ಟಿವಿ ವರದಿ ಮಾಡಿದೆ.
ಉತ್ತರ ಸಿನಾಯ್ ಪ್ರಾಂತ್ಯದಲ್ಲಿ ಈಜಿಪ್ಟ್ ಐಸಿಸ್ ಉಗ್ರರ ಜತೆ ಕದನ ನಡೆಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ನೂರಾರು ಪೊಲೀಸರು ಹಾಗೂ ಸೈನಿಕರು ಮೃತಪಟ್ಟಿದ್ದಾರೆ.