ಆ್ಯಪ್ನಗರ

ಭಾರತ ತನ್ನ ಅಹಂಕಾರದ ನೀತಿಯಿಂದ ನೆರೆ ರಾಷ್ಟ್ರಗಳನ್ನು ಬೆದರಿಸುತ್ತಿದೆ: ಇಮ್ರಾನ್‌ ಖಾನ್‌

ಅತ್ತ ಚೀನಾದ ಜೊತೆ ಲಡಾಖ್‌ನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇತ್ತ ನೇಪಾಳದೊಂದಿಗೆ ಗಡಿ ವಿವಾದ ಭುಗಿಲೆದ್ದಿದೆ. ಈ ಸಂದರ್ಭದಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸುಮ್ಮನಿರದೇ ಭಾರತ ತನ್ನ ಅಹಂಕಾರದ ವಿಸ್ತರಣಾ ನೀತಿಯಿಂದ ನೆರೆ ರಾಷ್ಟ್ರಗಳನ್ನು ಬೆದರಿಸುತ್ತಿದೆ ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದಾರೆ.

Vijaya Karnataka Web 27 May 2020, 7:02 pm
ಲಾಹೋರ್‌: ನೆರೆ ರಾಷ್ಟ್ರಗಳನ್ನು ಭಾರತ ತನ್ನ ಅಹಂಕಾರದ ವಿಸ್ತರಣಾ ನೀತಿಯಿಂದ ಬೆದರಿಸುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬುಧವಾರ ಆರೋಪಿಸಿದ್ದಾರೆ. ನೇಪಾಳದೊಂದಿಗೆ ಗಡಿ ವಿವಾದ ಹಾಗೂ ಲಡಾಖ್‌ನಲ್ಲಿ ಚೀನಾ ಜೊತೆಗಿನ ಮುಖಾಮುಖಿ ಸಂದರ್ಭದಲ್ಲಿ ಪಾಕ್‌ ಪ್ರಧಾನಿ ಈ ಮಾತನ್ನು ಹೇಳಿರುವುದು ವಿವಾದ ಸೃಷ್ಟಿಸಿದೆ.
Vijaya Karnataka Web ಇಮ್ರಾನ್‌ ಖಾನ್‌
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ (ಫೈಲ್‌ ಫೋಟೋ)


ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವನ್ನು ಗುರಿಯಾಗಿಸಿಕೊಂಡು ಇಮ್ರಾನ್‌ ಖಾನ್‌ ಟ್ವೀಟ್‌ ಮಾಡಿದ್ದು, ಹಿಂದುತ್ವ ಆಧಾರದ ಮೋದಿ ಸರಕಾರ ತನ್ನ ಅಹಂಕಾರದ ವಿಸ್ತರಣಾ ನೀತಿ ಹಾಗೂ ನಾಜಿ ತತ್ವದ ಮೂಲಕ ತನ್ನ ನೆರೆ ದೇಶಗಳನ್ನು ಬೆದರಿಸುತ್ತಿದೆ ಎಂದು ಪಾಕ್‌ ಪ್ರಧಾನಿ ಆರೋಪಿಸಿದ್ದಾರೆ.


ಪೌರತ್ವ ಕಾಯಿದೆ ಮೂಲಕ ಬಾಂಗ್ಲಾದೇಶ, ನೇಪಾಳ ಹಾಗೂ ಚೀನಾದೊಂದಿಗೆ ಗಡಿ ವಿವಾದ ಹೊಂದಿದೆ, ಪಾಕಿಸ್ತಾನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಾ ಭಾರತ ಬೆದರಿಕೆ ಹಾಕುತ್ತಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

ಭಾರತ vs ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಅಮೆರಿಕ ರೆಡಿಯಂತೆ!

ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತದ ನಡೆ ನಾಲ್ಕನೇ ಜಿನೀವಾ ಸಮ್ಮೇಳನದ ಪ್ರಕಾರ ಕಾನೂನು ಬಾಹಿರ ಎಂದಿದ್ದಾರೆ. ಇದರ ಜೊತೆ ಫ್ಯಾಸಿಸ್ಟ್‌ ಮೋದಿ ಸರಕಾರ ಕೇವಲ ಭಾರತದ ಅಲ್ಪಸಂಖ್ಯಾತರಿಗೆ ಬೆದರಿಕೆಯನ್ನೊಡ್ಡುತ್ತಿದ್ದು, ಧಾರ್ಮಿಕ ಶಾಂತಿಗೆ ಧಕ್ಕೆ ತರುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗಡಿ ಉದ್ವಿಗ್ನತೆ ಕಡಿಮೆ ಮಾಡಲು ಭಾರತ-ಚೀನಾ ಉನ್ನತ ಸೇನಾಧಿಕಾರಿಗಳ ಸರಣಿ ಸಭೆ!

ಕೆಲ ದಿನಗಳಿಂದ ನೇಪಾಳ ಹಾಗೂ ಭಾರತದ ಮಧ್ಯೆ ಗಡಿ ವಿವಾದ ಮತ್ತೆ ಭುಗಿಲೆದ್ದಿದೆ. ಇದರ ನಡುವೆಯೂ ಲಡಾಕ್‌ನಲ್ಲಿ ಚೀನಾ ಕೂಡ ತಂಟೆ ತಗೆದಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ನೆರೆರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವಂತಹ ಟ್ವೀಟ್‌ನ್ನು ಪಾಕ್‌ ಪ್ರಧಾನಿ ಮಾಡಿದ್ದಾರೆ.

ಟಿಬೆಟ್ ಪ್ರತ್ಯೇಕ ರಾಷ್ಟ್ರ ಎಂದು ಪರಿಗಣಿಸುವಂತೆ ಅಮೆರಿಕ ಕಾಂಗ್ರೆಸ್‌ನಲ್ಲಿ ಮಸೂದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ