ಆ್ಯಪ್ನಗರ

ಮಾಲೀಕನನ್ನು ರಕ್ಷಿಸಲು ಪ್ರಾಣ ಒತ್ತೆ ಇಟ್ಟ ನಾಯಿ; ಪವಾಡಸದೃಶ ಪಾರು

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತಲೆಯ ಬುರುಡೆ ಒಳಗೆ ಹೊಕ್ಕಿದ್ದ ಚಾಕು ಮೆದುಳಿನಿಂದ ಕೂದಲೆಳೆ ಅಂತರದಲ್ಲಿದ್ದು ಡ್ಯೂಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಮಾಲೀಕ ನಿರುದ್ಯೋಗಿಯಾಗಿದ್ದರಿಂದ ವೈದ್ಯರು ಚಿಕಿತ್ಸೆಗೆ ಹಣವನ್ನು ಸಹ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

Indiatimes 11 Feb 2019, 2:21 pm
ನಿಸ್ವಾರ್ಥ, ಬೇಷರತ್ತಾದ ಪ್ರೀತಿಯ ಅನ್ವರ್ಥಕ, ಅತ್ಯಂತ ವಿಶ್ವಾಸಾರ್ಹ ಜೀವಿ ಎಂದರೆ ಅದು ನಾಯಿಯೇ ಆಗಿರುತ್ತದೆ ಹೊರತು ಮನುಷ್ಯ ಅಥವಾ ಇನ್ಯಾವುದೇ ಜೀವಿಯಾಗಿರಲು ಸಾಧ್ಯವಿಲ್ಲ. ಅದು ಕೇವಲ ನಿಷ್ಠೆಯನ್ನು ತೋರುವುದಷ್ಟೇ ಅಲ್ಲ. ತನ್ನನ್ನು ಸಾಕುತ್ತಿರುವ ಕುಟುಂಬದ ರಕ್ಷಣೆಯ ಹೊಣೆಯನ್ನು ಸಹ ತನ್ನದೆಂದುಕೊಂಡಿರುತ್ತದೆ.
Vijaya Karnataka Web Duke


ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿನೋ ವೆನ್ಸಾಲ್ ಎಂಬಾತ ತನ್ನ ನಾಯಿ ಡ್ಯೂಕ್‌ನನ್ನು ಕರೆದುಕೊಂಡು ವಾಯುವಿಹಾರಕ್ಕೆ ಹೋಗಿದ್ದ. ದಾರಿ ಮಧ್ಯೆ ವ್ಯಕ್ತಿಯೊಬ್ಬ ಕೈಯ್ಯಲ್ಲಿ ಚಾಕು ಹಿಡಿದುಕೊಂಡು ತನ್ನನ್ನು ಹಿಂಬಾಲಿಸುತ್ತಿರುವುದನ್ನಾತ ಕಂಡಿದ್ದಾನೆ. ಅಷ್ಟರಲ್ಲಿ ಡ್ಯೂಕ್ ಕೂಡ ದಾಳಿಕೋರನನ್ನು ದಿಟ್ಟಿಸಿ ನೋಡಿದೆ. ತಕ್ಷಣ ಆತ ಡ್ಯೂಕ್ ಮೇಲೆ ದಾಳಿ ಮಾಡಿದ್ದು ಚಾಕುವಿನಿಂದ ತಲೆಗೆ ಚುಚ್ಚಿದ್ದಾನೆ. ಅಂತಹ ನೋವಿನಲ್ಲೂ ಹಿಂಜರಿಯದ ಡ್ಯೂಕ್ ಆತನನ್ನೆದುರಿಸಿ ನಿಂತಿದೆ. ಬೆದರಿ ಆತ ಅಲ್ಲಿಂದ ಕಾಲ್ಕಿತ್ತಾಗ ನೋವಿನಲ್ಲಿಯೇ ಡ್ಯೂಕ್ ನೆಲಕ್ಕುರುಳಿದ್ದಾನೆ. ಇದೆಲ್ಲವನ್ನು ಸ್ತಂಭೀಭೂತನಾಗಿ ನೋಡುತ್ತಿದ್ದ ವೆನ್ಸಾಲ್ ಮುದ್ದು ನಾಯಿ ಸಾವನ್ನಪ್ಪಿತು ಎಂದುಕೊಂಡು ಆತನನ್ನು ಎತ್ತಲು ಹೋದಾಗ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ.


ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತಲೆಯ ಬುರುಡೆ ಒಳಗೆ ಹೊಕ್ಕಿದ್ದ ಚಾಕು ಮೆದುಳಿನಿಂದ ಕೂದಲೆಳೆ ಅಂತರದಲ್ಲಿದ್ದು ಡ್ಯೂಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಮಾಲೀಕ ನಿರುದ್ಯೋಗಿಯಾಗಿದ್ದರಿಂದ ವೈದ್ಯರು ಚಿಕಿತ್ಸೆಗೆ ಹಣವನ್ನು ಸಹ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಅವರಿಬ್ಬರ ನಡುವಿನ ಬಂಧ ಅತಿ ಗಟ್ಟಿಯಾದುದು, ಅದೇ ಡ್ಯೂಕ್‌ನನ್ನು ಉಳಿಸಿದೆ. ಇದು ಪವಾಡ ಸದೃಶ ಎಂದು ಡ್ಯೂಕ್‌ಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ