ವಾಷಿಂಗ್ಟನ್: ಮುಂದಿನ ವರ್ಷ ಭಾರತದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ವೇಳೆ ಫೇಸ್ಬುಕ್ ದುರ್ಬಳಕೆಯ ಸಾಧನವಾಗದಂತೆ ತಡೆಯಲು ಅಗತ್ಯವಾದ ಎಲ್ಲಾ ಬಿಗಿಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಭರವಸೆ ನೀಡಿದ್ದಾರೆ. ವಿದೇಶಿ ಚುನಾವಣೆಗಳಲ್ಲಿನ ಹಸ್ತಕ್ಷೇಪಕ್ಕೆ ಫೇಸ್ಬುಕ್ ಆಯುಧವಾಗಬಾರದು. ಅಂತಹದ್ದೊಂದು ದುರ್ಬಳಕೆ ಸಾಧ್ಯತೆ ತಡೆಯುವ ದಿಸೆಯಲ್ಲಿ ಕೃತಕ ಬುದ್ಧಿವತ್ತೆಯ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸಾವಿರಾರು ಸಿಬ್ಬಂದಿ ಶ್ರಮ ವಹಿಸುತ್ತಿದ್ದಾರೆ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ.
ಚುನಾವಣೆ ದೃಷ್ಟಿಯಿಂದ ಮುಂದಿನ ವರ್ಷ ಮಹತ್ವದ್ದು. ಮಾಹಿತಿ ಹರಡುವ ಉದ್ದೇಶದಿಂದ ನಡೆಸುವ ಟ್ರೋಲ್ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
‘ಕಳೆದ ವರ್ಷ ಅಮೆರಿಕ ಸೆನೆಟ್ನ ಅಲಬಾಮ ಚುನಾವಣೆ ವೇಳೆ ಫೇಸ್ಬುಕ್ ದುರ್ಬಳಕೆ ತಡೆಗೆ ಕೃತಕ ಬುದ್ಧಿಮತ್ತೆಯನ್ನು ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಪ್ರಚಾರಕ್ಕಾಗಿ ನಡೆಸಿದ ಮೆಸಿಡೀನಿಯನ್ ಟೋಲ್ಸ್ ಅನ್ನು ಮಟ್ಟಹಾಕಲಾಯಿತು. ಮುಂದೆಯೂ ಇಂತದ್ದೇ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಈಗಾಗಲೇ 15,000 ಜನ ಕೆಲಸ ಮಾಡುತ್ತಿದ್ದಾರೆ. ವರ್ಷಾಂತ್ಯಕ್ಕೆ ಇವರ ಸಂಖ್ಯೆ 20 ಸಾವಿರ ದಾಟಲಿದೆ,’’ ಎಂದು ಅವರು ತಿಳಿಸಿದರು.
ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳ ಚುನಾವಣೆ ಸೇರಿದಂತೆ ಲೋಕಸಭೆ ಸಮರಕ್ಕೆ ಸಜ್ಜಾಗಿರುವ ಭಾರತದಲ್ಲಿ ಯಾವುದೇ ಕಾರಣಕ್ಕೂ ಫೇಸ್ಬುಕ್ ದುರ್ಬಳಕೆಯಾಗಲು ಆಸ್ಪದ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
8 ಕೋಟಿ ಬಳಕೆದಾರರ ಮಾಹಿತಿ ಮಾರಾಟ:
ಬ್ರಿಟನ್ನ ರಾಜಕೀಯ ಸಲಹಾ ಸಂಸ್ಥೆ ‘ಕೇಂಬ್ರಿಜ್ ಅನಲಿಟಿಕಾ’ಗೆ ಫೇಸ್ಬುಕ್ ಸಂಸ್ಥೆ ಅಕ್ರಮವಾಗಿ ಮಾರಾಟ ಮಾಡಿದ ದತ್ತಾಂಶಗಳ ಅಳವಂಡ ಇನ್ನಷ್ಟು ದೊಡ್ಡದಾಗಿದೆ. ತನ್ನ 8.7 ಕೋಟಿ ಬಳಕೆದಾರರ ದತ್ತಾಂಶವು ಅನುಚಿತ ರೀತಿಯಲ್ಲಿ ಹಂಚಿಕೆಯಾಗಿರುವುದನ್ನು ಒಪ್ಪಿಕೊಂಡಿರುವ ಫೇಸ್ಬುಕ್, ತಿದ್ದಿಕೊಂಡು ನಡೆಯಲು ಮತ್ತೊಂದು ಅವಕಾಶ ನೀಡುವಂತೆ ಕೇಳಿಕೊಂಡಿದೆ. ಈ ಮೊದಲು, 5 ಕೋಟಿ ಬಳಕೆದಾರರ ಖಾಸಗಿ ಮಾಹಿತಿ ಕೇಂಬ್ರಿಜ್ ಅನಲಿಟಿಕಾ ಜತೆ ಹಂಚಿಕೆಯಾಗಿದೆ ಎಂದು ತಿಳಿಸಿತ್ತು. ಆದರೆ ಕೂಲಂಕಷ ಪರಿಶೀಲನೆ ಬಳಿಕ, ಹಂಚಿಕೆಯಾದ ಮಾಹಿತಿ 8.7 ಕೋಟಿಯಷ್ಟು ಗರಿಷ್ಟವಾಗಿದೆ ಎನ್ನುವುದನ್ನೂ ಒಪ್ಪಿಕೊಂಡಿದೆ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಫೇಸ್ಬುಕ್, ಸಂಪರ್ಕ ಕ್ಷೇತ್ರದ ಕ್ರಾಂತಿಗೆ ಮುನ್ನುಡಿ ಬರೆದಿತ್ತು. ಅದರ ಸಹ ಸಂಸ್ಥಾಪಕರಾದ ಜುಕರ್ಬರ್ಗ್ ಕುಶಲ ಬುದ್ಧಿಮತ್ತೆಯ ಮೂಲಕ ಕಂಪನಿಯ ವಹಿವಾಟನ್ನು ಕ್ಷಿಪ್ರಗತಿಯಲ್ಲಿ ಜಾಗತಿಕ ಹಂತಕ್ಕೆ ಎತ್ತರಿಸಿದ್ದರು.
ರಾಜೀನಾಮೆಗೆ ಒತ್ತಡ
ಮಹತ್ವದ ಜವಾಬ್ದಾರಿ ನಿರ್ವಹಿಸುವಲ್ಲಿ ಮುಗ್ಗರಿಸಿರುವ ಜುಕರ್ಬರ್ಗ್, ಫೇಸ್ಬುಕ್ ಮುಖ್ಯಸ್ಥನ ಹೊಣೆಗಾರಿಕೆಯಿಂದ ನಿರ್ಗಮಿಸಬೇಕು ಎನ್ನುವ ಮಾತುಗಳೂ ಕೇಳಿ ಬಂದಿವೆ. ಆದರೆ ಅಧಿಕೃತವಾಗಿ ಯಾರಿಂದಲೂ ಅಂತದ್ದೊಂದು ಒತ್ತಡ ತಮಗೆ ಬಂದಿಲ್ಲ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ. ‘‘ಇನ್ನೊಬ್ಬರನ್ನು ಘಾಸಿಗೊಳಿಸಲು ಫೇಸ್ಬುಕ್ ಅನ್ನು ಈ ಮಟ್ಟಿಗೆ ಅಸ್ತ್ರವಾಗಿ ಬಳಸಿಕೊಳ್ಳಬಹುದು ಎನ್ನುವುದರ ಅರಿವು ನಮಗಿರಲಿಲ್ಲ. ಅದರತ್ತ ನಾವು ಅಗತ್ಯ ಪ್ರಮಾಣದ ಗಮನವನ್ನೂ ಹರಿಸಲಿಲ್ಲ,’’ ಎಂದು ಅವರು ಒಪ್ಪಿಕೊಂಡಿದ್ದಾರೆ.
ಅನಲಿಟಿಕಾ ಹಗರಣದಿಂದ ಫೇಸ್ಬುಕ್ ವಾಣಿಜ್ಯ ವಹಿವಾಟು ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಉಂಟಾಗಿಲ್ಲ. ‘‘ಇದುವರೆಗೆ ದಿಗಿಲುಬೀಳುವಂತ ಅಂತಹ ಯಾವುದೇ ಪರಿಣಾಮ ಆಗಿಲ್ಲ. ಆದರೆ ಜನರ ಮನಸ್ಸಿನಲ್ಲಿ ಕಹಿ ಉಳಿದಿದೆ. ಅಪನಂಬಿಕೆಯ ಭಾವನೆ ಮೂಡಿದೆ. ಅದನ್ನು ಹೋಗಲಾಡಿಸಲು ತಕ್ಕಷ್ಟು ಕಾಲಾವಕಾಶ ಬೇಕಾಗುತ್ತದೆ,’’ ಎಂದಿದ್ದಾರೆ.
ಮಾಹಿತಿ ಹಂಚಿಕೆಯಲ್ಲಿ ಯಡವಟ್ಟಾಗಿರುವುದು ನಿಜ. ದತ್ತಾಂಶ ಸೋರಿಕೆಯ ಹೊಣೆ ನನ್ನದೇ. ಇದರಿಂದ ಬಳಕೆದಾರರು, ಜಾಹೀರಾತುದಾರರು ಮತ್ತು ಕಾನೂನು ತಜ್ಞರು ಸಿಟ್ಟಾಗಿರುವುದನ್ನು ಬಲ್ಲೆ. ತಿದ್ದಿ ನಡೆಯಲು ಮತ್ತೊಂದು ಅವಕಾಶ ನೀಡಿ.
- ಮಾರ್ಕ್ ಜುಕರ್ಬರ್ಗ್, ಫೇಸ್ಬುಕ್ ಸಿಇಒ
5,62,445 ಮಂದಿ ಫೇಸ್ಬುಕ್ ಬಳಕೆದಾರರು ಭಾರತದಲ್ಲಿ ಮಾಹಿತಿ ಮಾರಾಟದ ಬಲಿಪಶುಗಳಾಗಿರುವ ಸಾಧ್ಯತೆ ಇದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ. ದೇಶದಲ್ಲಿ ಎರಡು ಕೋಟಿ ಜನ ಫೇಸ್ಬುಕ್ ಬಳಸುತ್ತಿದ್ದಾರೆ.
ಚುನಾವಣೆ ದೃಷ್ಟಿಯಿಂದ ಮುಂದಿನ ವರ್ಷ ಮಹತ್ವದ್ದು. ಮಾಹಿತಿ ಹರಡುವ ಉದ್ದೇಶದಿಂದ ನಡೆಸುವ ಟ್ರೋಲ್ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
‘ಕಳೆದ ವರ್ಷ ಅಮೆರಿಕ ಸೆನೆಟ್ನ ಅಲಬಾಮ ಚುನಾವಣೆ ವೇಳೆ ಫೇಸ್ಬುಕ್ ದುರ್ಬಳಕೆ ತಡೆಗೆ ಕೃತಕ ಬುದ್ಧಿಮತ್ತೆಯನ್ನು ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಪ್ರಚಾರಕ್ಕಾಗಿ ನಡೆಸಿದ ಮೆಸಿಡೀನಿಯನ್ ಟೋಲ್ಸ್ ಅನ್ನು ಮಟ್ಟಹಾಕಲಾಯಿತು. ಮುಂದೆಯೂ ಇಂತದ್ದೇ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಈಗಾಗಲೇ 15,000 ಜನ ಕೆಲಸ ಮಾಡುತ್ತಿದ್ದಾರೆ. ವರ್ಷಾಂತ್ಯಕ್ಕೆ ಇವರ ಸಂಖ್ಯೆ 20 ಸಾವಿರ ದಾಟಲಿದೆ,’’ ಎಂದು ಅವರು ತಿಳಿಸಿದರು.
ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳ ಚುನಾವಣೆ ಸೇರಿದಂತೆ ಲೋಕಸಭೆ ಸಮರಕ್ಕೆ ಸಜ್ಜಾಗಿರುವ ಭಾರತದಲ್ಲಿ ಯಾವುದೇ ಕಾರಣಕ್ಕೂ ಫೇಸ್ಬುಕ್ ದುರ್ಬಳಕೆಯಾಗಲು ಆಸ್ಪದ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
8 ಕೋಟಿ ಬಳಕೆದಾರರ ಮಾಹಿತಿ ಮಾರಾಟ:
ಬ್ರಿಟನ್ನ ರಾಜಕೀಯ ಸಲಹಾ ಸಂಸ್ಥೆ ‘ಕೇಂಬ್ರಿಜ್ ಅನಲಿಟಿಕಾ’ಗೆ ಫೇಸ್ಬುಕ್ ಸಂಸ್ಥೆ ಅಕ್ರಮವಾಗಿ ಮಾರಾಟ ಮಾಡಿದ ದತ್ತಾಂಶಗಳ ಅಳವಂಡ ಇನ್ನಷ್ಟು ದೊಡ್ಡದಾಗಿದೆ. ತನ್ನ 8.7 ಕೋಟಿ ಬಳಕೆದಾರರ ದತ್ತಾಂಶವು ಅನುಚಿತ ರೀತಿಯಲ್ಲಿ ಹಂಚಿಕೆಯಾಗಿರುವುದನ್ನು ಒಪ್ಪಿಕೊಂಡಿರುವ ಫೇಸ್ಬುಕ್, ತಿದ್ದಿಕೊಂಡು ನಡೆಯಲು ಮತ್ತೊಂದು ಅವಕಾಶ ನೀಡುವಂತೆ ಕೇಳಿಕೊಂಡಿದೆ. ಈ ಮೊದಲು, 5 ಕೋಟಿ ಬಳಕೆದಾರರ ಖಾಸಗಿ ಮಾಹಿತಿ ಕೇಂಬ್ರಿಜ್ ಅನಲಿಟಿಕಾ ಜತೆ ಹಂಚಿಕೆಯಾಗಿದೆ ಎಂದು ತಿಳಿಸಿತ್ತು. ಆದರೆ ಕೂಲಂಕಷ ಪರಿಶೀಲನೆ ಬಳಿಕ, ಹಂಚಿಕೆಯಾದ ಮಾಹಿತಿ 8.7 ಕೋಟಿಯಷ್ಟು ಗರಿಷ್ಟವಾಗಿದೆ ಎನ್ನುವುದನ್ನೂ ಒಪ್ಪಿಕೊಂಡಿದೆ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಫೇಸ್ಬುಕ್, ಸಂಪರ್ಕ ಕ್ಷೇತ್ರದ ಕ್ರಾಂತಿಗೆ ಮುನ್ನುಡಿ ಬರೆದಿತ್ತು. ಅದರ ಸಹ ಸಂಸ್ಥಾಪಕರಾದ ಜುಕರ್ಬರ್ಗ್ ಕುಶಲ ಬುದ್ಧಿಮತ್ತೆಯ ಮೂಲಕ ಕಂಪನಿಯ ವಹಿವಾಟನ್ನು ಕ್ಷಿಪ್ರಗತಿಯಲ್ಲಿ ಜಾಗತಿಕ ಹಂತಕ್ಕೆ ಎತ್ತರಿಸಿದ್ದರು.
ರಾಜೀನಾಮೆಗೆ ಒತ್ತಡ
ಮಹತ್ವದ ಜವಾಬ್ದಾರಿ ನಿರ್ವಹಿಸುವಲ್ಲಿ ಮುಗ್ಗರಿಸಿರುವ ಜುಕರ್ಬರ್ಗ್, ಫೇಸ್ಬುಕ್ ಮುಖ್ಯಸ್ಥನ ಹೊಣೆಗಾರಿಕೆಯಿಂದ ನಿರ್ಗಮಿಸಬೇಕು ಎನ್ನುವ ಮಾತುಗಳೂ ಕೇಳಿ ಬಂದಿವೆ. ಆದರೆ ಅಧಿಕೃತವಾಗಿ ಯಾರಿಂದಲೂ ಅಂತದ್ದೊಂದು ಒತ್ತಡ ತಮಗೆ ಬಂದಿಲ್ಲ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ. ‘‘ಇನ್ನೊಬ್ಬರನ್ನು ಘಾಸಿಗೊಳಿಸಲು ಫೇಸ್ಬುಕ್ ಅನ್ನು ಈ ಮಟ್ಟಿಗೆ ಅಸ್ತ್ರವಾಗಿ ಬಳಸಿಕೊಳ್ಳಬಹುದು ಎನ್ನುವುದರ ಅರಿವು ನಮಗಿರಲಿಲ್ಲ. ಅದರತ್ತ ನಾವು ಅಗತ್ಯ ಪ್ರಮಾಣದ ಗಮನವನ್ನೂ ಹರಿಸಲಿಲ್ಲ,’’ ಎಂದು ಅವರು ಒಪ್ಪಿಕೊಂಡಿದ್ದಾರೆ.
ಅನಲಿಟಿಕಾ ಹಗರಣದಿಂದ ಫೇಸ್ಬುಕ್ ವಾಣಿಜ್ಯ ವಹಿವಾಟು ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಉಂಟಾಗಿಲ್ಲ. ‘‘ಇದುವರೆಗೆ ದಿಗಿಲುಬೀಳುವಂತ ಅಂತಹ ಯಾವುದೇ ಪರಿಣಾಮ ಆಗಿಲ್ಲ. ಆದರೆ ಜನರ ಮನಸ್ಸಿನಲ್ಲಿ ಕಹಿ ಉಳಿದಿದೆ. ಅಪನಂಬಿಕೆಯ ಭಾವನೆ ಮೂಡಿದೆ. ಅದನ್ನು ಹೋಗಲಾಡಿಸಲು ತಕ್ಕಷ್ಟು ಕಾಲಾವಕಾಶ ಬೇಕಾಗುತ್ತದೆ,’’ ಎಂದಿದ್ದಾರೆ.
ಮಾಹಿತಿ ಹಂಚಿಕೆಯಲ್ಲಿ ಯಡವಟ್ಟಾಗಿರುವುದು ನಿಜ. ದತ್ತಾಂಶ ಸೋರಿಕೆಯ ಹೊಣೆ ನನ್ನದೇ. ಇದರಿಂದ ಬಳಕೆದಾರರು, ಜಾಹೀರಾತುದಾರರು ಮತ್ತು ಕಾನೂನು ತಜ್ಞರು ಸಿಟ್ಟಾಗಿರುವುದನ್ನು ಬಲ್ಲೆ. ತಿದ್ದಿ ನಡೆಯಲು ಮತ್ತೊಂದು ಅವಕಾಶ ನೀಡಿ.
- ಮಾರ್ಕ್ ಜುಕರ್ಬರ್ಗ್, ಫೇಸ್ಬುಕ್ ಸಿಇಒ
5,62,445 ಮಂದಿ ಫೇಸ್ಬುಕ್ ಬಳಕೆದಾರರು ಭಾರತದಲ್ಲಿ ಮಾಹಿತಿ ಮಾರಾಟದ ಬಲಿಪಶುಗಳಾಗಿರುವ ಸಾಧ್ಯತೆ ಇದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ. ದೇಶದಲ್ಲಿ ಎರಡು ಕೋಟಿ ಜನ ಫೇಸ್ಬುಕ್ ಬಳಸುತ್ತಿದ್ದಾರೆ.