ಆ್ಯಪ್ನಗರ

Sajid Mir: ಮುಂದುವರಿದ ಚೀನಾ ಕಿರಿಕ್: ಸಾಜಿದ್ ಮಿರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಅಡ್ಡಿ

Terrorist Sajid Mir: 26/11ರ ಮುಂಬಯಿ ದಾಳಿಯ ಪ್ರಮುಖ ನಿರ್ವಾಹಕ, ಲಷ್ಕರ್ ಎ ತಯಬಾ ಉಗ್ರ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಭಾರತ ಹಾಗೂ ಅಮೆರಿಕದ ಪ್ರಸ್ತಾವಕ್ಕೆ ಚೀನಾ ತಡೆ ನೀಡಿದೆ.

Edited byಅಮಿತ್ ಎಂ.ಎಸ್ | Vijaya Karnataka Web 17 Sep 2022, 7:29 pm

ಹೈಲೈಟ್ಸ್‌:

  • ವಿಶ್ವಸಂಸ್ಥೆಯಲ್ಲಿ ಮತ್ತೆ ತನ್ನ ದುರ್ಬುದ್ದಿ ಪ್ರದರ್ಶಿಸಿದ ಚೀನಾ
  • ಸಾಜಿದ್ ಮಿರ್ ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಸ್ತಾಪ
  • ಅಮೆರಿಕ, ಭಾರತದ ಪ್ರಸ್ತಾವನೆಗೆ ಪುನಃ ತಡೆಯೊಡ್ಡಿದ ಚೀನಾ
  • 26/11 ಮುಂಬಯಿ ಭಯೋತ್ಪಾದನಾ ದಾಳಿಯ ಸಂಚುಕೋರ


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web united nations sajid mir
ವಿಶ್ವಸಂಸ್ಥೆ: ಭಯೋತ್ಪಾದಕರನ್ನು ಮಟ್ಟ ಹಾಕಲು ಭಾರತ ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ಪ್ರಯತ್ನಗಳಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಿರುವ ಚೀನಾ, ಮತ್ತೊಮ್ಮೆ ತನ್ನ ದುರ್ಬುದ್ದಿ ಪ್ರದರ್ಶಿಸಿದೆ. 26/11ರ ಮುಂಬಯಿ ದಾಳಿಯ ಮುಖ್ಯ ನಿರ್ವಾಹಕನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾವಕ್ಕೆ ಚೀನಾ ತಡೆಗೊಡ್ಡಿದೆ. ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರ ಸಾಜಿದ್ ಮಿರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಅಮೆರಿಕದ ನಡೆಗೆ ಭಾರತ ಸಹಪ್ರಾಯೋಜಕತ್ವ ವಹಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್ ಕೈದಾ ನಿರ್ಬಂಧಗಳ ಸಮಿತಿಯಲ್ಲಿ ಸಾಜಿದ್ ಮಿರ್‌ನನ್ನು ಜಾಗತಿಕ ಉಗ್ರ ಎಂದು ಗುರುತಿಸುವ ಪ್ರಯತ್ನಕ್ಕೆ ಚೀನಾ ಅಡ್ಡಿಪಡಿಸಿದೆ. ಅಮೆರಿಕವು ಮುಂದಿರಿಸಿದ್ದ ಪ್ರಸ್ತಾವನೆಯಂತೆ ಸಾಜಿದ್ ಮಿರ್‌ನ ಆಸ್ತಿಗಳನ್ನು ಮುಟ್ಟುಗೋಲು ಹಾಕುವ, ಪ್ರಯಾಣದ ಮೇಲೆ ನಿಷೇಧ ಹೇರುವ ಮತ್ತು ಶಸ್ತ್ರಾಸ್ತ್ರ ನಿರ್ಬಂಧಿಸುವ ಕ್ರಮಗಳು ಸಾಧ್ಯವಾಗುತ್ತವೆ. ಸಾಜಿದ್ ಮಿರ್ ತಲೆಗೆ ಅಮೆರಿಕವು 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.
ಪಾಕಿಸ್ತಾನಿ ಉಗ್ರನನ್ನು 'ಜಾಗತಿಕ ಭಯೋತ್ಪಾದಕ' ಪಟ್ಟಿಗೆ ಸೇರಿಸುವ ಭಾರತ, ಅಮೆರಿಕ ಪ್ರಯತ್ನಕ್ಕೆ ಚೀನಾ ಅಡ್ಡಗಾಲು

ಹಣಕಾಸು ಕ್ರಿಯಾ ಪಡೆಯ (ಎಫ್‌ಎಫ್‌ಟಿ) 'ಬೂದು ಪಟ್ಟಿ'ಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ, ಭಯೋತ್ಪಾದನೆಗೆ ಹಣಕಾಸು ಸಹಾಯ ನೀಡಿದ ಪ್ರಕರಣದಲ್ಲಿ ಸಾಜಿದ್ ಮಿರ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಮುಂಬಯಿ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಆತನ ಪಾತ್ರದ ಬಗ್ಗೆ ಪಾಕಿಸ್ತಾನ ಇದುವರೆಗೂ ಪ್ರಕರಣ ದಾಖಲಿಸಿಲ್ಲ.

ಪಾಕಿಸ್ತಾನ ಮೂಲದ ಉಗ್ರರನ್ನು ಜಾಗತಿಕ ಉಗ್ರರೆಂದು ಘೋಷಣೆ ಮಾಡುವ ಎಲ್ಲ ಪ್ರಸ್ತಾವನೆಗಳಿಗೂ ಚೀನಾ ತನ್ನ ಅಧಿಕಾರ ಬಳಸಿಕೊಂಡು ತಡೆಯೊಡ್ಡುತ್ತಿವೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಅಮೆರಿಕದ ನಿರ್ಧಾರಕ್ಕೆ ಕೂಡ ತಾಂತ್ರಿಕ ತಡೆಯೊಡ್ಡಿತ್ತು.
ಭಯೋತ್ಪಾದನೆಗೆ ಬೆಂಬಲವೇ ನಿಮ್ಮ ನೀತಿ: ಪಾಕಿಸ್ತಾನಕ್ಕೆ ಬೆವರಿಳಿಸಿದ ಭಾರತ

ಈ ವರ್ಷದ ಜೂನ್‌ನಲ್ಲಿ, ಅಬ್ದುಲ್ ರೆಹಮಾನ್ ಮಕ್ಕಿ ವಿರುದ್ಧ 1267 ಅಲ್ ಕೈದಾ ನಿರ್ಬಂಧಗಳ ಸಮಿತಿಯಲ್ಲಿ ಭಾರತ ಬೆಂಬಲದೊಂದಿಗೆ ಅಮೆರಿಕ ಸಲ್ಲಿಸಿದ್ದ ಜಂಟಿ ಪ್ರಸ್ತಾವನೆಯನ್ನು ಕೂಡ ಚೀನಾ ತಡೆದಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ