ಆ್ಯಪ್ನಗರ

ನೇಪಾಳ ಬಿಕ್ಕಟ್ಟಿಗೆ ಸಿಗದ ಪರಿಹಾರ, ಬರಿಗೈಯಲ್ಲಿ ವಾಪಸಾಗಲಿದೆ ಚೀನಾ ನಿಯೋಗ

ಎರಡೂ ಬಣಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಚೀನಾದ ಕಮ್ಯೂನಿಷ್ಟ್‌ ಪಕ್ಷದ ವಿದೇಶ ವ್ಯವಹಾರಗಳ ಸಮಿತಿ ನೇತೃತ್ವದ ನಿಯೋಗ ವಿಫಲವಾಗಿದ್ದು, ಬರಿಗೈಯಲ್ಲಿ ದೇಶಕ್ಕೆ ವಾಪಸಾಗುವುದು ಅನಿವಾರ್ಯವಾಗಿದೆ.

TIMESOFINDIA.COM 30 Dec 2020, 3:25 pm
ಕಠ್ಮಂಡು: ಪ್ರಧಾನಿ ಕೆಪಿ ಶರ್ಮಾ ಒಲಿ ಮತ್ತು ಅವರ ವಿರೋಧಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ನಡುವೆ ಒಮ್ಮತ ಮೂಡಿಸಲು ಚೀನಾದ ನಿಯೋಗ ವಿಫಲವಾಗಿದ್ದು, ದೇಶಕ್ಕೆ ವಾಪಸಾಗಲು ನಿರ್ಧರಿಸಿದೆ.
Vijaya Karnataka Web Nepal


ಎರಡೂ ಬಣಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಚೀನಾದ ಕಮ್ಯೂನಿಷ್ಟ್‌ ಪಕ್ಷದ ವಿದೇಶ ವ್ಯವಹಾರಗಳ ಸಮಿತಿ ನೇತೃತ್ವದ ನಿಯೋಗ ಕೆಲ ದಿನಗಳ ಹಿಂದೆ ನೇಪಾಳಕ್ಕೆ ಬಂದಿಳಿದಿತ್ತು. ಆದರೆ ಎರಡೂ ಪಾಳಯಗಳನ್ನು ಒಗ್ಗೂಡಿಸಲು ಸಮಿತಿಯ ಸದಸ್ಯರಿಗೆ ಸಾಧ್ಯವಾಗಿಲ್ಲ.

ವರದಿಗಳ ಪ್ರಕಾರ ಇದರ ನಡುವೆಯೇ ಅಧ್ಯಕ್ಷೆ ವಿದ್ಯಾ ಭಂಡಾರಿ ಜತೆ ಪ್ರಧಾನಿ ಒಲಿ ಪ್ರತ್ಯೇಕ ಸಭೆ ನಡೆಸಿದ್ದು, ಇದರ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಏನಾಗುತ್ತಿದೆ ನೇಪಾಳದಲ್ಲಿ?: ಚೀನಾ ಹಸ್ತಕ್ಷೇಪದಿಂದ ಪರಿಣಾಮವೇನು ಭಾರತದಲ್ಲಿ?
ಚೀನಾದ ನಾಲ್ವರು ಸದಸ್ಯರ ನಿಯೋಗ ಮಾಜಿ ಪ್ರಧಾನಿ ಶೇರ್‌ ಬಹದ್ದೂರ್‌ ದೆಬಾ ಅವರನ್ನು ಮಂಗಳವಾರ ಭೇಟಿಯಾಗಿ 2021ರಲ್ಲಿ ನಡೆಯಲಿರುವ ಚೀನಾ ಕಮ್ಯೂನಿಷ್ಟ್‌ ಪಕ್ಷದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ. ಮಾಜಿ ಪ್ರಧಾನಿ ಬಾಬುರಾಮ್‌ ಬಟ್ಟಾರಾಯ್‌ರನ್ನೂ ನೇಪಾಳ ನಿಯೋಗ ಭೇಟಿಯಾಗಿದೆ.

ಚೀನಾ ನಿಯೋಗ ತನ್ನ ಹಳೆಯ ಸೂತ್ರವನ್ನೇ ಮತ್ತೆ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆಸಿತ್ತು. ಕೆಪಿ ಶರ್ಮಾ ಒಲಿಗೆ ಒಂದು ವರ್ಷ ಅಧಿಕಾರ ನೀಡಿ, ಮತ್ತೊಂದು ವರ್ಷ ಪ್ರಚಂಡಗೆ ಅಧಿಕಾರ ನೀಡುವುದು ಚೀನಾದ ಸೂತ್ರಗಳಲ್ಲಿ ಒಂದಾಗಿತ್ತು. ಒಲಿ ಈ ಸೂತ್ರ ಒಪ್ಪಿಕೊಂಡಿದ್ದರೂ ಪ್ರಚಂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸತ್‌ ವಿಸರ್ಜನೆಯನ್ನು ಹಿಂತೆಗೆದುಕೊಂಡು ಒಲಿ ರಾಜೀನಾಮೆ ನೀಡಬೇಕು ಎಂಬ ಒಂದೇ ಬೇಡಿಕೆಯನ್ನು ಪ್ರಚಂಡ ಮುಂದಿಟ್ಟಿದ್ದಾರೆ. ಆದರೆ ಇದಕ್ಕೆ ಒಲಿ ಸುತಾರಾಂ ಸಿದ್ಧವಿಲ್ಲ. ಹೀಗಾಗಿ ಒಮ್ಮತದ ನಿರ್ಧಾರ ಸಾಧ್ಯವಾಗದೆ ಚೀನಾ ನಿಯೋಗ ವಾಪಸಾಗಲು ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ