ಆ್ಯಪ್ನಗರ

ಪಾಕ್, ನೇಪಾಳ ಹಾಗೂ ಅಫ್ಘಾನ್ ಜೊತೆ ಚೀನಾ ಮೊದಲ ವರ್ಚುವಲ್ ಸಭೆ: ಉದ್ದೇಶವೇನು?

ಮಾರಕ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಚೀನಾ, ನೆರೆಯ ಪಾಕಿಸ್ತಾನ, ನೇಪಾಳ ಹಾಗೂ ಅಫ್ಘಾನಿಸ್ತಾನ ರಾಷ್ಟ್ರಗಳೊಂದಿಗೆ ಮೊದಲ ವರ್ಚುವಲ್ ಸಭೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

Vijaya Karnataka Web 28 Jul 2020, 9:49 am
ಬೀಜಿಂಗ್: ಭಾರತದೊಂದಿಗೆ ನೆರೆ ರಾಷ್ಟ್ರಗಳ ಸಂಬಂಧದಲ್ಲಿ ತುಸು ಬಿರುಕು ಮೂಡಿರುವುದನ್ನೇ ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಹವಣಿಸುತ್ತಿರುವ ಚೀನಾ, ಇದೀಗ ಕೊರೊನಾ ವೈರಸ್ ಹಾವಳಿಯ ಹೆಸರಲ್ಲಿ ಈ ರಾಷ್ಟ್ರಗಳಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಮುಂದಾಗಿದೆ.
Vijaya Karnataka Web xi jinping
ಸಂಗ್ರಹ ಚಿತ್ರ


ಅದರಂತೆ ಮಾರಕ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಚೀನಾ, ನೆರೆಯ ಪಾಕಿಸ್ತಾನ, ನೇಪಾಳ ಹಾಗೂ ಅಫ್ಘಾನಿಸ್ತಾನ್ ರಾಷ್ಟ್ರಗಳೊಂದಿಗೆ ಮೊದಲ ವರ್ಚುವಲ್ ಸಭೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಕೊರೊನಾ ವೈರಸ್ ಹಾವಳಿ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಚೀನಾ ಕರೆ ಕೊಟ್ಟಿದ್ದು, ಚೀನಾದ ಈ ಆಹ್ವಾನವನ್ನು ನೇಪಾಳ, ಪಾಕ್ ಹಾಗೂ ಅಫ್ಘಾನಿಸ್ತಾನ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಹೇಳಲಾಗಿದೆ.

ಹಿಮಾಚಲ ಪ್ರದೇಶದಲ್ಲೂ ಗಡಿ ತಂಟೆಗೆ ಚೀನಾ ಯತ್ನ, ಭಾರತೀಯ ಸೇನೆಯಿಂದ ಕಟ್ಟೆಚ್ಚರ

ಪ್ರಮುಖವಾಗಿ ವೈರಾಣು ಹಾವಳಿಯನ್ನು ತಡೆಗಡ್ಡಲು ನಾಲ್ಕು ಅಂಶದ ಯೋಜನೆಯನ್ನು ಈ ರಾಷ್ಟ್ರಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಜಂಟಿ ಹೋರಾಟದ ಪ್ರಯತ್ನದಿಂದ ಕೊರೊನಾ ವೈರಸ್ ನಿರ್ಮೂಲನೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಘೋಷಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ ನಾಲ್ಕು ರಾಷ್ಟ್ರಗಳ ಪ್ರತಿನಿಧಿಗಳು:
  • ವಾಂಗ್ ವೈ-ಚೀನಾ ವಿದೇಶಾಂಗ ಸಚಿವ.
  • ಮೊಹ್ಮದ್ ಹನೀಫ್ ಅತ್ಮಾರ್- ಅಫ್ಘಾನಿಸ್ತಾನ ವಿದೇಶಾಂಗ ಸಚಿವ.
  • ಪ್ರದೀಪ್ ಕುಮಾರ್ ಗ್ಯಾವಲಿ- ನೇಪಾಳ ವಿದೇಶಾಂಗ ಸಚಿವ.
  • ಮಕ್ತೂಮ್ ಖುಸ್ರೋ ಭಕ್ತಿಯಾರ್- ಪಾಕಿಸ್ತಾನ ಆರ್ಥಿಕ ವ್ಯವಹಾರಗಳ ಸಚಿವ.
ಕೊರೊನಾ ವೈರಸ್ ಹಾವಳಿ ತಡೆಗಟ್ಡುವ ಜೊತೆಗೆ ಈ ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುವುದು ಈ ಜಂಟಿ ಪ್ರಯತ್ಮದ ಭಾಗವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಖಾನ್-ಹಸೀನಾ ನಡುವೆ ಕಾಶ್ಮೀರ ಚರ್ಚೆ?: ಬೇಡದ ಉಸಾಬರಿ ಮಾತಾಡೋದ್ಯಾಕೆ ಎಂದ ಭಾರತ!
ಬೆಲ್ಡ್ ಆ್ಯಂಡ್ರೋಡ್ ಯೋಜನೆ ಚುರುಕು:ಅಸಲಿಗೆ ಚೀನಾ ಕೊರೊನಾ ವೈರಸ್ ಹಾವಳಿಯ ನೆಪದಲ್ಲಿ ಈ ರಾಷ್ಟ್ರಗಳಲ್ಲಿ ನೆನೆಗುದಿಗೆ ಬಿದ್ದಿರುವ ತನ್ನ ಮಹತ್ವಾಕಾಂಕ್ಷಿ ಬೆಲ್ಡ್ ಆ್ಯಂಡ್ ರೋಡ್(BRI) ಯೋಜನೆಗೆ ಚುರುಕು ಮುಟ್ಟಿಸುವ ಯೋಜನೆ ಹಾಕಿಕೊಂಡಿದೆ. ಸ್ಥಗಿತಗೊಂಡಿರುವ ಈ ಯೋಜನೆಯನ್ನು ಮತ್ತೆ ಪುನರಾರಂಭಿಸಿ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುಲು ಚೀನಾ ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ