ಆ್ಯಪ್ನಗರ

‘ಮಸೂದ್‌ ಅಜರ್‌ ಕುರಿತ ನಿಲುವು ಪುನರ್‌ ಪರಿಶೀಲಿಸಲಿ’

ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್‌ಮೈಂಡ್‌ ಮಸೂದ್‌ನನ್ನು 'ಜಾಗತಿಕ ಉಗ್ರ' ಎಂದು ಘೋಷಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಫೆ.27ರಂದು ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಪ್ರಸ್ತಾಪ ಸಲ್ಲಿಸಿತು. ಆದರೆ ಈ ಪ್ರಸ್ತಾಪಕ್ಕೆ ಚೀನಾ ನಾಲ್ಕನೇ ಬಾರಿಯೂ ಅಡ್ಡಿಪಡಿಸಿದೆ.

Vijaya Karnataka 24 Mar 2019, 5:00 am
ನ್ಯೂಯಾರ್ಕ್‌: ಜೈಷೆ ಮೊಹಮದ್‌ ಉಗ್ರ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕುವ ಮೂಲಕ ಜಗತ್ತಿಗೆ ಏನು ಸಂದೇಶ ನೀಡಿದಂತಾಗುತ್ತದೆ ಎಂಬುದನ್ನು ಚೀನಾ ಯೋಚಿಸಬೇಕಿದೆ ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್‌ ಹೇಳಿದ್ದಾರೆ.
Vijaya Karnataka Web Jaishankar


ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್‌ಮೈಂಡ್‌ ಮಸೂದ್‌ನನ್ನು 'ಜಾಗತಿಕ ಉಗ್ರ' ಎಂದು ಘೋಷಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಫೆ.27ರಂದು ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಪ್ರಸ್ತಾಪ ಸಲ್ಲಿಸಿತು. ಆದರೆ ಈ ಪ್ರಸ್ತಾಪಕ್ಕೆ ಚೀನಾ ನಾಲ್ಕನೇ ಬಾರಿಯೂ ಅಡ್ಡಿಪಡಿಸಿದೆ.

ಸಂವಾದವೊಂದರಲ್ಲಿ ಮಾತನಾಡಿದ ಜೈ ಶಂಕರ್‌, ಚೀನಾ ತನ್ನ ನಿಲುವಿನ ಬಗ್ಗೆ ಪುನರ್‌ಪರಿಶೀಲನೆ ನಡೆಸಬೇಕು ಎಂದು ಸಲಹೆ ಮಾಡಿದರು.

''ಪ್ರಸ್ತಾವಿತ ಚೀನಾ-ಪಾಕ್‌ ಆರ್ಥಿಕ ಕಾರಿಡಾರ್‌ ಯೋಜನೆಯು ಜಮ್ಮು ಮತ್ತು ಕಾಶ್ಮೀರದಿಂದ ಹಾದುಹೋಗುತ್ತದೆ. ಈ ಪ್ರದೇಶ ಭಾರತಕ್ಕೆ ಸೇರಿದ್ದು, ಇದರ ಮೇಲೆ ಪಾಕಿಸ್ತಾನ ಅಕ್ರಮವಾಗಿ ಆಧಿಪತ್ಯ ಹೊಂದಿದೆ. ಅಲ್ಲದೇ ಇದರ ಒಂದು ಭಾಗವನ್ನು ಅಕ್ರಮವಾಗಿ ಚೀನಾಗೆ ಬಿಟ್ಟುಕೊಡಲಾಗಿದೆ. ಈ ಪ್ರದೇಶ ಅಧಿಕೃತವಾಗಿ ಭಾರತದ ಭೂಪ್ರದೇಶವಾಗಿದ್ದು, ಇಲ್ಲಿ ರಸ್ತೆ ನಿರ್ಮಿಸುವ ಮೂಲಕ ಭಾರತದ ಸಾರ್ವಭೌಮತೆಯನ್ನು ಅಗೌರವಿಸಲಾಗುತ್ತಿದೆ. ಹಾಗಾಗಿ ಸಹಜವಾಗಿ ಈ ಯೋಜನೆಗೆ ಭಾರತ ವಿರೋಧಿಸಿದೆ. ಅಲ್ಲದೇ ಈ ಯೋಜನೆಗಳ ಹಿಂದಿನ ಗುಪ್ತ ಕಾರ್ಯಸೂಚಿಗಳ ಬಗ್ಗೆ ನಮ್ಮಲ್ಲಿ ಪ್ರಶ್ನೆ ಮೂಡುತ್ತದೆ,'' ಎಂದೂ ಜೈಶಂಕರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ