ಆ್ಯಪ್ನಗರ

ಐದು ಅಂಶಗಳ ಯೋಜನೆಗೆ ಸಮ್ಮತ ನೀಡಿಯೂ ಭಾರತ 'ಗಡಿ ತಪ್ಪು' ಸರಿಪಡಿಸಿಕೊಳ್ಳಬೇಕು ಎಂದ ಚೀನಾ!

ಲಡಾಖ್ ಗಡಿ ಸಮಸ್ಯೆ ಇತ್ಯರ್ಥಕ್ಕೆ ಐದು ಅಂಶಗಳ ಕಾರ್ಯ ಯೋಜನೆಗೆ ಒಪ್ಪಿಗೆ ಸೂಚಿಸಿದ ಹೊರತಾಗಿಯೂ ಚೀನಾ ಇದೀಗ ಗಡಿ ಸಮಸ್ಯೆಗೆ ಭಾರತವೇ ಕಾರಣ ಎಂಬರ್ಥದಲ್ಲಿ ಮತ್ತೆ ಮಾತನಾಡಲು ಆರಂಭಿಸಿದೆ. ಲಡಾಖ್ ಗಡಿಯಲ್ಲಿ ಭಾರತ ತಾನು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಚೀನಾ ಹೇಳಿದೆ.

Vijaya Karnataka Web 17 Sep 2020, 8:16 pm
ಬೀಜಿಂಗ್: ಭಾರತ-ಚೀನಾ ನಡುವೆ ಉದ್ಭವವಾಗಿರುವ ಲಡಾಖ್ ಗಡಿ ಸಮಸ್ಯೆ ಇತ್ಯರ್ಥಕ್ಕೆ ಐದು ಅಂಶಗಳ ಕಾರ್ಯ ಯೋಜನೆಗೆ ಪರಸ್ಪರ ಸಹಮತ ವ್ಯಕ್ತಪಡಿಸಲಾಗಿದೆ.

ಮಾಸ್ಕೋದಲ್ಲಿ ನಡೆದ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಐದು ಅಂಶಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಪರಸ್ಪರ ಒಪ್ಪಿಗೆ ಸೂಚಿಸಲಾಗಿತ್ತು.

ಭಾರತದಿಂದ ಮಿಲಿಟರಿ ಪ್ರಚೋದನೆ: ಚೀನಾದಿಂದ ಮತ್ತದೇ ಹುಸಿ ಪ್ರತಿಪಾದನೆ!

ಈ ಐದು ಅಂಶಗಳ ಕಾರ್ಯ ಯೋಜನೆಗೆ ಒಪ್ಪಿಗೆ ಸೂಚಿಸಿದ ಹೊರತಾಗಿಯೂ ಚೀನಾ ಇದೀಗ ಗಡಿ ಸಮಸ್ಯೆಗೆ ಭಾರತವೇ ಕಾರಣ ಎಂಬರ್ಥದಲ್ಲಿ ಮತ್ತೆ ಮಾತನಾಡಲು ಆರಂಭಿಸಿದೆ.

ಲಡಾಖ್ ಗಡಿ ಸಮಸ್ಯೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ಹೇಳಿಕೆ ನೀಡಿದ ಬೆನ್ನಲ್ಲೇ ಚೀನಾ ಕೂಡ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಭಾರತೀಯ ಸೈನಿಕರು ಗಡಿ ದಾಟಿ ಬಂದರು ಎಂಬ ಚೀನಿ ಸುಳ್ಳಿನ ಕತೆಯ ಬೆನ್ನತ್ತಿ..ಇಲ್ಲಿದೆ ಸತ್ಯ!

ಲಡಾಖ್ ಗಡಿಯಲ್ಲಿ ಭಾರತ ತಾನು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿರುವ ಚೀನಾ, ಈ ಮೂಲಕ ಗಡಿಯಿಂದ ಸೈನ್ಯ ಹಿಂಪಡೆಯುವ ಜವಾಬ್ದಾರಿಯನ್ನು ಭಾರತದ ಹೆಗಲೇರಿಸಲು ಪ್ರಯತ್ನಿಸಿದೆ.

ಭಾರತ ಲಡಾಖ್ ಗಡಿಯಲ್ಲಿನ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಗಡಿಯಿಂದ ಸೈನ್ಯವನ್ನು ಹಿಂಪಡೆದು ಉದ್ವಿಗ್ನ ಪರಿಸ್ಥಿತಿಯನ್ನು ಕೊನೆಗಾಣಿಸಬೇಕು ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಆಗ್ರಹಿಸಿದ್ದಾರೆ.

ನಾವು ಯಾರೊಂದಿಗೂ ಗಡಿ ತಂಟೆಗೆ ಹೋಗಿಲ್ಲ: ಚೀನಿ ವಿದೇಶಾಂಗ ವಕ್ತಾರೆಯ ಹಾಸ್ಯಾಸ್ಪದ ಹೇಳಿಕೆ!

ಆದರೆ ಲಡಾಖ್ ಗಡಿಯಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರು ಭಾರೀ ಸಂಖ್ಯೆಯಲ್ಲಿ ಸೈನ್ಯವನ್ನು ಜಮಾವಣೆ ಮಾಡಿದ್ದಾರೆ ಎಂಬ ಸತ್ಯ ಇಡೀ ಜಗತ್ತಿಗೆ ತಿಳಿದಿದೆ. ಗಡಿಯಲ್ಲಿ ಶಾಂತಿ ಸ್ಥಾಪನೆಯ ಭಾರತದ ಪ್ರಯತ್ನಗಳಿಗೆ ಬೆಂಬಲ ನೀಡಿದ ಚೀನಾ, ಇದೀಗ ಗಡಿ ಉದ್ವಿಗ್ನತೆಗೆ ಭಾರತವೇ ಕಾರಣ ಎನ್ನುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ