ಆ್ಯಪ್ನಗರ

ನೇಪಾಳ ಕಮ್ಯೂನಿಸ್ಟ್ ಪಕ್ಷ ಉಳಿಸಲು ಬರುತ್ತಿದ್ದಾರೆ ಚೀನಾದ ಸಿಸಿಪಿ ಹಿರಿಯ ನಾಯಕ!

ಆಂತರಿಕ ಭಿನ್ನಮತದಿಂದ ಕುದಿಯುತ್ತಿರುವ ನೇಪಾಳ ಕಮ್ಯೂನಿಸ್ಟ್ ಪಕ್ಷ ಇಬ್ಭಾಗದ ಹೊಸ್ತಿಲಲ್ಲಿ ಬಂದು ನಿಂತಿದ್ದು, ನೇಪಾಳ ರಾಜಕೀಯ ಪರಿಸ್ಥಿತಿ ಅವಲೋಕಿಸಲು ಚೀನಾ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರೊಬ್ಬರ ನೇತೃತ್ವದ ಸಿಸಿಪಿ ನಿಯೋಗ ಕಠ್ಮಂಡುಗೆ ಭೇಟಿ ನೀಡಲಿದೆ.

Vijaya Karnataka Web 27 Dec 2020, 8:40 am
ಕಠ್ಮಂಡು: ಆಂತರಿಕ ಭಿನ್ನಮತದಿಂದ ಕುದಿಯುತ್ತಿರುವ ನೇಪಾಳ ಕಮ್ಯೂನಿಸ್ಟ್ ಪಕ್ಷ ಇಬ್ಭಾಗದ ಹೊಸ್ತಿಲಲ್ಲಿ ಬಂದು ನಿಂತಿದ್ದು, ನೇಪಾಳ ರಾಜಕೀಯ ಪರಿಸ್ಥಿತಿ ಅವಲೋಕಿಸಲು ಚೀನಾ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರೊಬ್ಬರ ನೇತೃತ್ವದ ಸಿಸಿಪಿ ನಿಯೋಗ ಕಠ್ಮಂಡುಗೆ ಭೇಟಿ ನೀಡಲಿದೆ.
Vijaya Karnataka Web Nepal
ಸಂಗ್ರಹ ಚಿತ್ರ


ನೇಪಾಳ ಕಮ್ಯೂನಿಸ್ಟ್ ಪಕ್ಷ ಇಬ್ಭಾಗವಾಗದಂತೆ ತಡೆಯಲು ಹಾಗೂ ನೆರೆ ರಾಷ್ಟ್ರದ ರಾಜಕೀಯ ಪರಿಸ್ಥಿತಿ ಅವಲೋಕಿಸಲು ಚೀನಾ ಕಮ್ಯೂನಿಸ್ಟ್ ಪಕ್ಷ(ಸಿಸಿಪಿ)ಯ ಉಪ ಮಂತ್ರಿ ಗುವೋ ಯೆಜೌ ನೇತೃತ್ವದ ನಿಯೋಗ ಶೀಘ್ರದಲ್ಲೇ ನೇಪಾಳಕ್ಕೆ ಭೇಟಿ ನೀಡಲಿದೆ ಎನ್ನಲಾಗಿದೆ.

ಸಂಸತ್ತು ವಿಸರ್ಜಿಸಿ ಚುನಾವಣೆ ಘೋಷಿಸಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ನಡೆ ಖಂಡಿಸಿ, ಪ್ರಚಂಡ ನೇತೃತ್ವದ ಬಣ ಬಂಡಾಯದ ಬಾವುಟ ಹಾರಿಸಿದೆ. ಇಬ್ಬರೂ ನಾಯಕರ ಜಿದ್ದಾಜಿದ್ದಿಯಿಂದಾಗಿ ಪಕ್ಷ ಹೋಳಾಗುವ ಹಂತಕ್ಕೆ ಬಂದು ನಿಂತಿದೆ.

ಸಂಸತ್‌ ವಿಸರ್ಜನೆ ಪ್ರಶ್ನಿಸಿ ನೇಪಾಳ ಸುಪ್ರೀಂ ಕೋರ್ಟ್‌ನಿಂದ ಪ್ರಧಾನಿ ಒಲಿಗೆ ಶೋಕಾಸ್‌ ನೋಟಿಸ್‌

ಆದರೆ ನೇಪಾಳದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಸಿಸಿಪಿ, ನೇಪಾಳಿ ಕಮ್ಯೂನಿಸ್ಟ್ ಪಕ್ಷವನ್ನು ಒಡೆಯದಂತೆ ತಡೆಯಲು ಪ್ರಯತ್ನಿಸುತ್ತಿದೆ.

ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಚೀನಾ ಪರ ಒಲವುಳ್ಳವರಾಗಿದ್ದಾರೆ. ಹೀಗಾಗಿ ಪಕ್ಷ ಮತ್ತು ಸರ್ಕಾರದಲ್ಲಿ ಓಲಿ ಹಿಡಿತವಿದ್ದಷ್ಟೂ ತನಗೆ ಒಳ್ಳೆಯದು ಎಂಬುದು ಚೀನಾದ ನಿಲುವಾಗಿದೆ.

ಆಂತರಿಕ ಕಲಹದಲ್ಲಿ ನೇಪಾಳ ಕಮ್ಯೂನಿಸ್ಟ್‌‌ ಪಾರ್ಟಿ ಇಬ್ಭಾಗ?

ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ ಸಿಸಿಪಿ ನಿಯೋಗ ಭೇಟಿ ನೀಡಲಿದ್ದು, ನೇಪಾಳ ಕಮ್ಯೂನಿಸ್ಟ್ ಪಕ್ಷ ಇಬ್ಭಾಗವಾಗದಂತೆ ತಡೆಯಲು ಪ್ರಯತ್ನಿಸಲಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ