ಆ್ಯಪ್ನಗರ

ಆಪತ್ತಿನ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಚೀನಾ ಸೇನೆಗೆ ಕ್ಸಿ ಜಿನ್‌ಪಿಂಗ್ ಕರೆ!

​​ಗಡಿಯಲ್ಲಿ ಎದುರಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಜ್ಜಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸೇನೆಗೆ ಕರೆ ನೀಡಿದ್ದಾರೆ. ಭಾರತದದೊಂದಿಗೆ ಚೀನಿ ಸೇನೆ ಗಡಿ ತಂಟೆ ತೆಗೆದಿರುವ ಮಧ್ಯೆಯೇ ಕ್ಸಿ ಜಿನ್‌ಪಿಂಗ್ ಅವರ ಈ ಕರೆ ಭಾರೀ ಮಹತ್ವ ಪಡೆದುಕೊಂಡಿದೆ.

Vijaya Karnataka Web 27 May 2020, 9:56 am
ಬಿಜಿಂಗ್: ಭಾರತದೊಂದಿಗೆ ಗಡಿ ತಂಟೆ ತೆಗೆದಿರುವ ಚೀನಾ, ಲಡಾಖ್ ಗಡಿಯಲ್ಲಿ ತನ್ನ ಉಪಟಳವನ್ನು ಮುಂದುವರೆಸಿದೆ. ಗಡಿಯಲ್ಲಿ ದಿನದಿಂದ ದಿನಕ್ಕೆ ಸೈನ್ಯ ಬಲವರ್ಧನೆ ಮಾಡಿಕೊಳ್ಳುತ್ತಿರುವ ಚೀನಾ, ಭಾರತದೊಂದಿಗೆ ಬೃಹತ್ ಮಿಲಿಟರಿ ಮುಖಾಮುಖಿ ನಡೆಸಲು ಸಿದ್ಧತೆ ನಡೆಸಿದೆ ಎಂದೇ ಅನುಮಾನಿಸಲಾಗಿದೆ.
Vijaya Karnataka Web Xi Jinping
ಸಂಗ್ರಹ ಚಿತ್ರ


ಇದಕ್ಕೆ ಪುಷ್ಠಿ ಎಂಬಂತೆ ಗಡಿಯಲ್ಲಿ ಎದುರಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಜ್ಜಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸೇನೆಗೆ ಕರೆ ನೀಡಿದ್ದಾರೆ.

ಇದೆಂತಾ ಸೈನ್ಯ?: ಕಲ್ಲು, ಮುಳ್ಳು ತಂತಿಗಳಿಂದ ಹಲ್ಲೆ ಮಾಡುವ ಚೀನಿ ಸೈನಿಕರು!

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಸಭೆಯಲ್ಲಿ ಮಾತನಾಡಿದ ಕ್ಸಿ ಜಿನ್‌ಪಿಂಗ್, ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಯಾವುದೇ ಸಂಭಾವ್ಯ ದಾಳಿಯನ್ನು ಹಿಮ್ಮೆಟ್ಟಿಸಲು ಸಜ್ಜಾಗುವಂತೆ ಸೇನೆಗೆ ಕರೆ ನೀಡಿದ್ದಾರೆ.

ಆದರೆ ತಮ್ಮ ಭಾಷಣದಲ್ಲಿ ಯಾವ ದೇಶದ ಹೆಸರನ್ನೂ ಉಲ್ಲೇಖಿಸದ ಕ್ಸಿ ಜಿನ್‌ಪಿಂಗ್, ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಸೇನೆ ಸಶಕ್ತವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕ್ಸಿ ಜಿನ್‌ಪಿಂಗ್ ಅವರ ಈ ಕರೆ ಭಾರೀ ಮಹತ್ವ ಪಡೆದುಕೊಂಡಿದ್ದು, ಭಾರತದೊಂದಿಗೆ ಗಡಿಯಲ್ಲಿ ವಿನಾಕಾರಣ ತಗಾದೆ ತೆಗೆದಿರುವ ಚೀನಾ ಮತ್ತಷ್ಟು ಆಕ್ರಮಣಕಾರಿ ನೀತಿ ಅನುಸರಿಸಲಿದೆ ಎಂಬ ಅನುಮಾನ ಮೂಡಿದೆ.

ಡೋಕ್ಲಾಮ್ ಬಳಿಕ ಮತ್ತೊಂದು ಮಿಲಿಟರಿ ಮುಖಾಮುಖಿಗೆ ಚೀನಾ ಕುಮ್ಮಕ್ಕು?: 'ಗಡಿ'ಬಿಡಿ ಡ್ರ್ಯಾಗನ್!

ಸಿಕ್ಕಿಂ ಗಡಿ ಸಂಘರ್ಷದ ಬಳಿಕ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಹೆಚ್ಚಿನ ಸೈನಿಕರನ್ನು ಜಮಾವಣೆಗೊಳಿಸಿರುವ ಚೀನಾ, ಪ್ರಮುಖವಾಗಿ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ತನ್ನ ಉಪಟಳವನ್ನು ಹೆಚ್ಚಿಸಿದೆ.

ಇತ್ತ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಭೆ ನಡೆಸಿದ್ದು, ಗಡಿಯಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ