ಆ್ಯಪ್ನಗರ

China Diplomat Li Jiming: ನಾನು ಭಾರತದ ದೊಡ್ಡ ಅಭಿಮಾನಿ ಎಂದ ಚೀನಾ ಹಿರಿಯ ರಾಜತಾಂತ್ರಿಕ ಅಧಿಕಾರಿ

India-China Relationship: ತಾವು ಭಾರತದ ಬಹು ದೊಡ್ಡ ಅಭಿಮಾನಿ ಎಂದು ಬಾಂಗ್ಲಾದೇಶದಲ್ಲಿನ ಚೀನಾದ ರಾಯಭಾರಿ ಲಿ ಜಿಮಿಂಗ್ ಹೇಳಿದ್ದಾರೆ. ಭಾರತದಲ್ಲಿನ ಚೀನಾ ರಾಯಭಾರಿ ಸುನ್ ವೀಡಾಂಗ್ ಬೀಳ್ಕೊಡುಗೆ ವೇಳೆ ಸಚಿವ ಎಸ್ ಜೈಶಂಕರ್ ಅವರು ಭಾರತ- ಚೀನಾ ಸಂಬಂಧದ ಬಗ್ಗೆ ತೀಕ್ಷ್ಣ ಹೇಳಿಕೆ ನೀಡಿದ ಬೆನ್ನಲ್ಲೇ ಅವರು ಈ ರೀತಿ ಹೇಳಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 27 Oct 2022, 10:45 am

ಹೈಲೈಟ್ಸ್‌:

  • ಭಾರತದ ಬಹುದೊಡ್ಡ ಅಭಿಮಾನಿ ಎಂದ ಚೀನಾದ ಹಿರಿಯ ರಾಜತಾಂತ್ರಿಕ
  • ಭಾರತದ ಜತೆ ಚೀನಾ ಯಾವುದೇ ಯುದ್ಧತಂತ್ರದ ವೈರತ್ವ ಹೊಂದಿಲ್ಲ
  • ಬಾಂಗ್ಲಾದೇಶದಲ್ಲಿನ ಚೀನಾದ ರಾಜತಾಂತ್ರಿಕ ಅಧಿಕಾರಿ ಲಿ ಜಿಮಿಂಗ್
  • ಭಾರತ- ಚೀನಾ ಸಂಬಂಧದ ಬಗ್ಗೆ ಎಸ್ ಜೈಶಂಕರ್ ತೀಕ್ಷ್ಣ ಹೇಳಿಕೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web india china
ಢಾಕಾ: ತಾನು ವೈಯಕ್ತಿಕವಾಗಿ ಭಾರತದ ಬಹಳ ದೊಡ್ಡ ಅಭಿಮಾನಿ ಎಂದು ಚೀನಾದ ಹಿರಿಯ ರಾಜತಾಂತ್ರಿಕ ಲಿ ಜಿಮಿಂಗ್ ಹೇಳಿದ್ದಾರೆ. ಆರ್ಥಿಕ ಮತ್ತು ಭೂ ರಾಜಕೀಯ ವಿವಾದಗಳನ್ನು ಬಗೆಹರಿಸಿಕೊಳ್ಳಲು ಭಾರತ ಮತ್ತು ಚೀನಾ ನಿಕಟವಾಗಿ ಕೆಲಸ ಮಾಡಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿನ ಚೀನಾ ರಾಯಭಾರಿಯಾಗಿರುವ ಜಿಮಿಂಗ್, ಭಾರತದ ಜತೆ ಚೀನಾ ಯಾವುದೇ ವ್ಯೂಹಾತ್ಮಕ ವೈರತ್ವ ಹೊಂದಿಲ್ಲ. ಬಂಗಾಳ ಕೊಲ್ಲಿಯು ಭಾರಿ ಶಸ್ತ್ರಗಳಿಂದ ತುಂಬಿಕೊಳ್ಳುವುದನ್ನು ನೋಡಲು ಚೀನಾ ಬಯಸಿಲ್ಲ ಎಂದಿದ್ದಾರೆ.
Xi Jinping: ಭಾರತಕ್ಕೆ ಮತ್ತಷ್ಟು ತಲೆನೋವಾದ ಕ್ಸಿ ಜಿನ್‌ಪಿಂಗ್ ಹ್ಯಾಟ್ರಿಕ್

ಭಾರತದಲ್ಲಿನ ಚೀನಾದ ನಿರ್ಗಮಿತ ರಾಯಭಾರಿ ಸುನ್ ವೀಡಾಂಗ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ, ಭಾರತ- ಚೀನಾ ಸಂಬಂಧದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕಟುವಾದ ಹೇಳಿಕೆ ಕೊಟ್ಟ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.

ತಮ್ಮ ಬೀಳ್ಕೊಡುಗೆ ಭಾಷಣದಲ್ಲಿ ಸುನ್ ವೀಡಾಂಗ್, ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯ ಇರುವುದು ತೀರಾ ಸಹಜ. ಅವು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಬೇಕಿದೆ ಮತ್ತು ತಮ್ಮ ಸಂಬಂಧವನ್ನು ಅಸಮ್ಮತಿಯ ವ್ಯಾಖ್ಯಾನಕ್ಕೆ ಒಳಪಡುವುದಕ್ಕೆ ಅವಕಾಶ ನೀಡಬಾರದು. ಚೀನಾ ಮತ್ತು ಭಾರತಕ್ಕೆ ಜತೆಯಾಗಿ ಅಭಿವೃದ್ಧಿಯಾಗಲು ಜಗತ್ತಿನಲ್ಲಿ ಸಾಕಷ್ಟು ಅವಕಾಶವಿದೆ ಎಂದು ಹೇಳಿದ್ದರು.
Xi Jinping: ಹಾಂಕಾಂಗ್, ತೈವಾನ್ ಮೇಲೆ ಬಿಗಿಹಿಡಿತ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಪಾದನೆ

ಎರಡೂ ದೇಶಗಳು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮತ್ತು ನಿಭಾಯಿಸಲು ಪ್ರಯತ್ನಿಸಬೇಕು. ಚೀನಾ- ಭಾರತ ಸಂಬಂಧವನ್ನು ಭಿನ್ನಮತಗಳಿಂದ ವ್ಯಾಖ್ಯಾನಿಸುವ ಬದಲು ಮಾತುಕತೆ ಹಾಗೂ ಸಮಾಲೋಚನೆ ಮೂಲಕ ಸೂಕ್ತ ಪರಿಹಾರಕ್ಕೆ ಮುಂದಾಗಬೇಕು. ಉಭಯ ದೇಶಗಳು ಪರಸ್ಪರರ ರಾಜಕೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ಮಾರ್ಗಗಳನ್ನು ಗೌರವಿಸುವ ಅಗತ್ಯವಿದೆ. ಪರಸ್ಪರ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸದೆ ಇರುವ ತತ್ವವನ್ನು ಎತ್ತಿಹಿಡಿಯಬೇಕಿದೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಸ್ ಜೈಶಂಕರ್, ಭಾರತ- ಚೀನಾ ಸಂಬಂಧವನ್ನು ಸಹಜ ಸ್ಥಿತಿಗೆ ತರುವುದು ದೇಶಗಳು ಹಾಗೂ ಪ್ರಾದೇಶಿಕ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಹೇಳಿದ್ದರು.
China Army In Pakistan: ಬಂಡವಾಳ ರಕ್ಷಣೆ ನೆಪ: ಪಾಕಿಸ್ತಾನದಲ್ಲಿ ಚೀನಾ ಸೇನಾ ನೆಲೆ ಸ್ಥಾಪನೆ

ಭಾರತ- ಚೀನಾ ಸಂಬಂಧದ ಅಭಿವೃದ್ಧಿಯು ಮೂರು ಪರಸ್ಪರ ಅಂಶಗಳಿಂದ ನಡೆಯುತ್ತದೆ. ಗಡಿ ಭಾಗಗಳಲ್ಲಿ ಶಾಂತಿ ಮತ್ತು ನೆಮ್ಮದಿ ಬಹಳ ಅಗತ್ಯವಾಗಿದೆ ಎಂದಿದ್ದರು.

ಪರಸ್ಪರ ಗೌರವ, ಪರಸ್ಪರ ಸಂವೇದನಾಶೀಲತೆ ಮತ್ತು ಪರಸ್ಪರ ಹಿತಾಸಕ್ತಿ ಮೂರು ಪರಸ್ಪರ ಅಂಶಗಳಾಗಿವೆ ಎಂದು ಜೈಶಂಕರ್ ಹಲವು ಬಾರಿ ಹೇಳಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ