ಆ್ಯಪ್ನಗರ

ದಾಳಿಗೆ ದಾವೂದ್‌ ನೆರವು ಪಡೆದ ಐಎಸ್‌ಐ

ಖಾಸಗಿ ಉಗ್ರ ಸೇನೆ ಕಟ್ಟಿದ ಪಾಕ್‌ ಗುಪ್ತಚರ ಸಂಸ್ಥೆ | ಶಸ್ತಾ್ರಸ್ತ್ರ ಪೂರೈಕೆ ಹೊಣೆ ದಾವೂದ್‌ಗೆ ಇಸ್ಲಾಮಾಬಾದ್‌: ಕಿತ್ತು ತಿನ್ನುವ ಬಡತನವಿದ್ದರೂ ಉಗ್ರರಿಗೆ ಬೆಂಬಲವಾಗಿ ...

Agencies 24 Sep 2019, 5:00 am
ಇಸ್ಲಾಮಾಬಾದ್‌: ಕಿತ್ತು ತಿನ್ನುವ ಬಡತನವಿದ್ದರೂ ಉಗ್ರರಿಗೆ ಬೆಂಬಲವಾಗಿ ನಿಲ್ಲುವುದನ್ನು ಬಿಡದ ಪಾಕಿಸ್ತಾನ ತನ್ನ ಹಳೆ ಚಾಳಿ ಮುಂದುವರಿಸಿದೆ. ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನೆರವಿನೊಂದಿಗೆ ಭಾರತದ ಮೇಲೆ ಉಗ್ರ ದಾಳಿ ನಡೆಸಲು ಭಾರಿ ಸಂಚು ರೂಪಿಸಿದೆ ಎಂದು ಗುಪ್ತಚರ ವರದಿಗಳು ಎಚ್ಚರಿಸಿವೆ.
Vijaya Karnataka Web dawood

ಜೈಷೆ ಮೊಹಮ್ಮದ್‌, ಲಷ್ಕರೆ ತಯ್ಬಾ, ಹಿಜ್ಬುಲ್‌ ಮುಜಾಹಿದೀನ್‌ ಹಾಗೂ ಅಫಘಾನಿಸ್ತಾನದ ತಾಲಿಬಾನ್‌ ಉಗ್ರರನ್ನು ಆಯ್ದುಕೊಂಡು ಐಎಸ್‌ಐ ತನ್ನದೇ ಖಾಸಗಿ ಉಗ್ರರ ಸೇನೆ ಕಟ್ಟಿದೆ. ಭಾರತದೊಳಗೆ ನುಗ್ಗಿ ದಾಳಿ ನಡೆಸಲು ಇವರಿಗೆ ಕಠಿಣ ತರಬೇತಿಯನ್ನೂ ನೀಡುತ್ತಿದೆ. ರಕ್ತಪಿಪಾಸು ಉಗ್ರರಿಗೆ ಶಸ್ತಾ್ರಸ್ತ್ರಗಳ ಪೂರೈಕೆಯ ಹೊಣೆಯನ್ನು ಪಾತಕಿ ದಾವೂದ್‌ ಇಬ್ರಾಹಿಂಗೆ ವಹಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.
ಇಸ್ಲಾಂ ಧರ್ಮದ ನೆಪದಲ್ಲಿಉಗ್ರರಿಗೆ 'ಜಿಹಾದಿ' ಹುಚ್ಚು ಹಿಡಿಸಿ ಅವರನ್ನು ಭಾರತದ ಗಡಿಯೊಳಗೆ ನುಸುಳಿಸಿ ದಾಳಿಗೆ ಪ್ರೇರೇಪಿಸುವ ಹೊಣೆಯನ್ನು ಜೈಷೆ ಮೊಹಮ್ಮದ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಅವನ ಸಹೋದರ ರೌಫ್‌ ಮೊಹಮ್ಮದ್‌ ಅಸ್ಗರ್‌ಗೆ ಐಎಸ್‌ಐ ನೀಡಿದೆ. ಸದ್ಯ ಉಗ್ರರಿಗೆ ಭಾಯಿ ಮನ್ಸೂರ್‌ ಖಾನ್‌ ಗ್ರಾಮದಲ್ಲಿತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿಕಾಶ್ಮೀರ ಕಣಿವೆಯ ಮಚಿಲ್‌ ಮತ್ತು ಗುರೇಜ್‌ ವಲಯದಲ್ಲಿಭಾರತದ ಲಾಂಚ್‌ ಪ್ಯಾಡ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸುವಂತೆ ಐಎಸ್‌ಐ ನಿರ್ದೇಶನ ನೀಡಿದೆ ಎಂದು ಗುಪ್ತಚರ ವರದಿಗಳು ಹೇಳಿವೆ.
ಹಿಂದಿ ಕಲಿಕೆ: ದಾವೂದ್‌ ಡಿ ಕಂಪನಿಯ ಬಂಟರು ಉಗ್ರರಿಗೆ ಶಸ್ತಾ್ರಸ್ತ್ರಗಳ ಬಳಕೆಯ ಜತೆಗೆ ಕರಾಚಿಯಲ್ಲಿಹಿಂದಿ ಕಲಿಕಾ ತರಬೇತಿ ಸಹ ನೀಡುತ್ತಿದ್ದಾರೆಂದು ತಿಳಿದುಬಂದಿದೆ. ರಾಜಸ್ಥಾನದ ಕೇರನ್‌ ಸೆಕ್ಟರ್‌ ಹಾಗೂ ಪಂಜಾಬ್‌ ಗಡಿ ಮೂಲಕ ಭಾರತ ಪ್ರವೇಶ ಸಾಧ್ಯವಾಗದಿದ್ದಲ್ಲಿಅವರನ್ನು ನೇಪಾಳ ಗಡಿ ಮೂಲಕ ಒಳನುಸುಳಿಸುವ ಇನ್ನೊಂದು ತಂತ್ರ ಇದಾಗಿದೆ. ಹಿಂದಿ ಭಾಷಾ ಕಲಿಕೆಯು ನೇಪಾಳದಲ್ಲಿಸಾಮಾನ್ಯರಲ್ಲಿಒಂದಾಗಿ ಅನುಮಾನ ಬರದಂತೆ ವರ್ತಿಸಲು ಸುಲಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿಈ ತರಬೇತಿ ನೀಡಲಾಗುತ್ತಿದೆ.
----
ಹೇಗಿದೆ ಐಎಸ್‌ಐ ಉಗ್ರ ಸೇನೆ?
* ಹಲವು ಉಗ್ರ ಸಂಘಟನೆಗಳ ನುರಿತ ಸದಸ್ಯರ ಸೇನೆ.
* 28 ಲಷ್ಕರೆ ತಯ್ಬಾ, 15 ಜೈಷೆ ಮೊಹಮ್ಮದ್‌, 12 ಹಿಜ್ಬುಲ್‌ ಮುಜಾಹಿದೀನ್‌, 15 ತಾಲಿಬಾನ್‌ ಉಗ್ರರು
* ಭಾಯ್‌ ಮನ್ಸೂನ್‌ ಖಾನ್‌ ಗ್ರಾಮದಲ್ಲಿಬೀಡು. ಅಲ್ಲಿಐಎಸ್‌ಐ ತರಬೇತಿ.
ಮಚಿಲ್‌, ಗುರೇಜ್‌ ಸೆಕ್ಟರ್‌ ಟಾರ್ಗೆಟ್‌
ಕಾಶ್ಮೀರ ಕಣಿವೆಯ ಈ ಎರಡು ಸೆಕ್ಟರ್‌ಗಳಲ್ಲಿರುವ ಸೇನಾ ಲಾಂಚ್‌ ಪ್ಯಾಡ್‌ಗಳ ಗುರಿ.
ಕೇರನ್‌ ಸೆಕ್ಟರ್‌, ಪಂಜಾಬ್‌ ಹಾಗೂ ನೇಪಾಳ ಗಡಿ ಮೂಲಕ ಒಳನುಸುಳಲು ಪ್ಲ್ಯಾನ್‌.
----------
ಸದ್ಯವೇ ಕಪ್ಪು ಪಟ್ಟಿಗೆ ಪಾಕ್‌
ಪಾಕಿಸ್ತಾನ ಸದ್ಯದಲ್ಲೇ ಹಣಕಾಸು ಕ್ರಿಯಾ ಪಡೆಯಿಂದ (ಎಫ್‌ಎಟಿಎಫ್‌) ಕಪ್ಪುಪಟ್ಟಿಗೆ ಸೇರ್ಪಡೆಯಾಗುವುದು ಖಚಿತವಾಗಿದೆ. ಉಗ್ರರ ನಿರ್ಮೂಲನೆ ವಿಚಾರದಲ್ಲಿಸೋತಿರುವ ಪಾಕ್‌, ಕ್ರಿಯಾಪಡೆ ನಿಗದಿಪಡಿಸಿದ್ದ 27 ಅಂಶಗಳ ಪೈಕಿ ಕೇವಲ 6 ಅಂಶಗಳನ್ನಷ್ಟೇ ಪೂರೈಸಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿಉಗ್ರ ನಿರ್ಮೂಲನೆಗೆ ಅದು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿಹಣಕಾಸಿನ ನೆರವು ಕಳೆದುಕೊಳ್ಳಲಿದೆ. ಪಾಕ್‌ನಲ್ಲಿವಿಶ್ವಸಂಸ್ಥೆ ಘೋಷಿತ 100ಕ್ಕೂ ಹೆಚ್ಚು ಉಗ್ರರು/ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಆದರೆ ಇದುವರೆಗೂ ಹಫೀಜ್‌ ಸಯೀದ್‌ ಸೇರಿ ಐವರು ಉಗ್ರರ ಆಸ್ತಿಯನ್ನಷ್ಟೇ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಪಾಕಿಸ್ತಾನ ಮಾತ್ರ, ಟೆರರ್‌ ಫೈನಾನ್ಸ್‌ಗೆ ಸಂಬಂಧಿಸಿದಂತೆ 900ಕ್ಕೂ ಹೆಚ್ಚು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದೆ.

----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ